Friday, March 29, 2024
Google search engine
Homeತುಮಕೂರು ಲೈವ್ಸಾಮರಸ್ಯದ ಕಡೆಗೆ ರಂಜಾನ್ ನಡಿಗೆ

ಸಾಮರಸ್ಯದ ಕಡೆಗೆ ರಂಜಾನ್ ನಡಿಗೆ

Publicstory


Tipturu: ರಂಜಾನ್ ಹಬ್ಬವನ್ನು ಎಲ್ಲ ದರ್ಮದ ಗೆಳೆಯರಿಗೆ ಸಿಹಿ ಹಂಚುವ ಮೂಲಕ ಅರ್ ವೈ ಟಿ ( ರಿಚಾರ್ಜ ಯುವರ್ ಟ್ಯಾಲೆಂಟ್‌) ನ ವತಿಯಿಂದ ಸಾಮರಸ್ಯದ ಕಡೆಗೆ ರಂಜಾನ್ ನಡಿಗೆ ಎಂಬ ಗಿಪ್ಟಿಂಗ್ ಸುನ್ನಾ ಎಂಬ ವಿನೂತನ ಕಾರ್ಯಕ್ರಮವನ್ನು 3 ದಿನಗಳ ಕಾಲ ಗೆಳೆಯರ ಮನೆ ಮನೆ ಗೆ ಬೇಟಿ ಮಾಡಿ ವಿನೂತನ ವಾಗಿ ಅಚರಿಸಲಾಯಿತು.

ಸೌಹಾರ್ದ ತಿಪಟೂರು ನ ಅಧ್ಯಕ್ಷರಾದ ಎಸ್ ಗಂಗಾಧರ್ ರವರು ಅವರ ಮನೆಗೆ ಬೇಟಿ ನೀಡಿದ್ದ ತಂಡದೊಂದಿಗೆ ಮಾತನಾಡುತ್ತ ರಂಜಾನ್ ಮತ್ತು ಬಸವ ಜಯಂತಿ ಒಂದೆ ದಿನ ಬಂದಿದ್ದು ಭಾವೈಕ್ಯತೆ ಸಮಾನತೆಯ ಸಂದೇಶವನ್ನು ಸಾರಿದೆ ಬಸವಣ್ಣನವರ ಆಶಯಗಳು ಕೂಡ ಇದೇ ಅಗಿತ್ತು ಎಂದು ಅಭಿಪ್ರಾಯ ಪಟ್ಟರು.

ಮುದ್ರ ಅಸ್ಪತ್ರೆಯ ವೈದ್ಯರಾದ ಡಾ. ಅನೀಲ್ ರವರ ಅಸ್ಪತ್ರೆಗೆ ಬೇಟಿ ನೀಡಿದಾಗ ಅವರು ಮಾತನಾಡಿ ತಿಪಟೂರು ಸೌಹಾರ್ದತೆಯ ತವರು ಇ‌ಂತಹ ಕಾರ್ಯಕ್ರಮಗಳು ನೂರಾರು ನಡೆಯಬೇಕು ಎಂದರು.

ನಿವೃತ್ತ ಉಪನ್ಯಾಸಕರಾದ ಎನ್ ಪಿ ನಾಗರಾಜ್ ರವರು ಅತ್ಮೀಯವಾಗಿ ಮನೆಗೆ ಬರಮಾಡಿಕೊಂಡು ನಿಮ್ಮ ಅನಿರೀಕ್ಷಿತ ಬೇಟಿ ನನಗೆ ಸಂತೋಷವನ್ನು ಉಂಟು ಮಾಡಿದೆ ನಾವೇಲ್ಲರು ಪರಸ್ಪರ ಬೇರೆಯ ಬೇಕು ಇಂದಿನ ವಿಷಮಯ ವಾತವರಣಕ್ಕೆ ನಿಮ್ಮ ಈ ನಡಿಗೆ ಉತ್ತರ ಎಂದರು.

ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಬಸವರಾಜು, ಕಾರ್ಯದರ್ಶಿ ಮಂಜಪ್ಪ, ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್ ,ಪತ್ರಕರ್ತರಾದ ತಿಪಟೂರು ಕೃಷ್ಣ,ಕಲ್ಪತರು ಮಹಿಳಾ ಸಂಘಟನೆಯ ಭಾಗ್ಯಮೂರ್ತಿ , ಹಿಂಡಸ್ಕೇರೆ ದೇವರಾಜ್ ,ಕೊಟ್ಡಿಗೆ ಹಳ್ಳಿ ಚರ್ಚನ ಪಾದ್ರಿಗಳಾದ ಜಾಯ್ ಜೇಕಬ್ ದಲಿತ ಹೋರಾಟಗಾರ ಸಂತೋಷ ಮತಿಘಟ್ಟ, ಪತ್ರಕರ್ತರಾದ ರಂಗಸ್ವಾಮಿ, ಉಜ್ಜಜ್ಜಿ ರಾಜಣ್ಣ, ರಂಗನಾಥ ಪಾರ್ಥಸಾರತಿ. ಭಾನುಪ್ರಕಾಶ್, ಕಿರಣ್, ಮಿಥುನ್, ಸುಪ್ರಿತ್ ಹೋರಾಟದ ಗೆಳೆಯರಾದ ಮನೋಹರ್ ಪಟೇಲ್ , ಶ್ರೀಕಾಂತ್ ಕೆಳಹಟ್ಟಿ, ಹರ್ಷ, ಮಂಜುನಾಯ್ಕ್ , ರೇಣುಕ್ ಪ್ರಸಾದ್ ,ವೈದ್ಯರಾದ ರಮೇಶಬಾಬು, ಚಿದಾನಂದ್ ಮೂರ್ತಿ, ಸೇರಿದಂತೆ ನಗರದ ದೇವಸ್ಥಾನಗಳಿಗೆ, ಪೌರಕಾರ್ಮಿಕರಿಗೆ ಅಟೋಚಾಲಕರಿಗೆ ಸೇರಿದಂತೆ ನೂರಾರು ಜನರಿಗೆ ಸಿಹಿ ನೀಡಿ ವಿನೂತನವಾಗಿ ಅಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅರ್ ವೈ ಟಿ ಯ ಅದ್ಯಕ್ಷರಾದ ತಾಸೀನ್ ಷರೀಪ್ (ಮೈಸೂರಿ) ಕಾರ್ಯದರ್ಶಿಗಳಾದ ಸೈಯದ್ ಸಾದತ್. ಸೌಹಾರ್ಧ ತಿಪಟೂರು ಕಾರ್ಯದರ್ಶಿ ಅಲ್ಲಾಬಕಾಶ್ ಸದಸ್ಯರಾದ , ಶಾಹೀದ್, ಜುನೇದ್ , ಕೈಪ್, ನೂರುಲ್ಲ, ಸೈಪುಲ್ಲ, ಟಿಪ್ಪು, ಫಾರೂಕ್ ಅಹಮ್ಮದ್,ಅಮನ್ , ಅಜೀಜ್ ಅಲಿಖಾನ್ , ಪರವೀಜ್ ಖಾನ್ ,ಸೈಯದ್ ಷಫಿ, ಭಾಬಾ ಸೇರಿದಂತೆ ಹಲವಾರು ಈ ಕಾರ್ಯಕ್ರಮಕ್ಕೆ ಜೊತೆಯಾದರು. ಈ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಜನರನ್ನು ಬೇಟಿ ಮಾಡಲಾಯಿತು ಈ ಸಂದರ್ಭದಲ್ಲಿ ರಂಜಾನ್ ಹಾಗೂ ಬಸವ ಜಯಂತಿಗೆ ಪರಸ್ಪರ ಶುಭ ಕೊರಲಾಯಿತು.ಇದೇ ಸಂದರ್ದಲ್ಲಿ ದೊಡ್ಡ ಪೇಟೆಯ ದೇವಸ್ಥಾನದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮಡಿಹಳ್ಳಿ ಮಠದ ಅಭಿನವ ಶ್ರಿಗಳಿಗೆ ಸನ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?