Publicstory.in
Tumkuru: ಆಳುವ ಸರ್ಕಾರಗಳು ಜಾರಿಗೊಳಿಸುತ್ತಿರುವ ಕಾನೂನುಗಳಿಂದ ಸ್ವಾತಂತ್ರ್ಯ ಅಪಾಯದಲ್ಲಿದೆ. ಧರ್ಮಾಧಾರಿತ, ರಾಜ್ಯ, ರಾಷ್ಟ್ರ ಮತ್ತು ಸಮಾಜ ನಿರ್ಮಾಣ ಮಾಡುವ ಇಲ್ಲವೇ ಹಿಂದೂರಾಷ್ಟ್ರ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಗಾಂಧೀ ವಿಚಾರಧಾರೆಗಳಿಗೆ ವಿರುದ್ದವಾಗಿದೆ ಎಂದು ಗಾಂಧೀ ನೂರೈವತ್ತು, ಸಮಾಜವಾದಿ ಎಂಭತ್ತೈದು ವಿಚಾರ ಯಾತ್ರೆಯ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಹೇಳಿದರು.
ಸರ್ವೋದಯ ಮಂಡಲ, ಬಾಪೂಜಿ ಶಿಕ್ಷಣ ಸಂಸ್ಥೆ, ಸಿಐಟಿಯು, ಸಮತಾ ಬಳಗ, ಸಹಮತ್ ಟ್ರಸ್ಟ್,
ಜನಚಳವಳಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಇದೊಂದು ವೈಚಾರಿಕ ಯಾತ್ರೆ, ಶಾಂತಿ, ಅಹಿಂಸೆ ಸತ್ಯದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಾಥೂರಾಮ್ ಗೋಡ್ಸೆ ಗಾಂಧಿ ಹತ್ಯೆ ಮಾಡಿದ ಸ್ಮೃತಿ ಸ್ಥಳದಿಂದ ಹೊರಟ ಈ ವಿಚಾರ ಯಾತ್ರೆ ತಮಿಳುನಾಡಿ ನಲ್ಲಿ ಅಂತ್ಯಗೊಳ್ಳಲಿದೆ ಎಂದರು.
ದೇಶದಲ್ಲಿ ಆತಂಕದ ಸ್ಥಿತಿ ಇದೆ. ಪೊಲೀಸ್, ಅಧಿಕಾರಿಗಳು ಮತ್ತು ಸರ್ಕಾರ ಏಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಕೆಲಸ ಮಾಡುತ್ತಿವೆ. ಕವಿಗಳು, ಬರಹಗಾರರು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಘೋಷಣೆಯಾಗಿಲ್ಲ ಅಷ್ಟೇ. ಪದವಿಗಳ ಮೇಲೆ ಪದವಿ ಪಡೆದವರು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಸರ್ಕಾರ ಇರದ ಬಗ್ಗೆ ಆಲೋಚಿಸುವುದು ಬಿಟ್ಟಿದೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಭೇಧಭಾವ ಮಾಡುತ್ತಿದೆ ಎಂದು ಟೀಕಿಸಿದರು.
ಬ್ಯಾರಿಸ್ಟರ್ ಜಿನ್ನಾ, ಆರ್.ಎಸ್.ಎಸ್. ಗೋಳ್ವಾಲ್ಕರ್, ಸಾವರ್ಕರ್, ಹೆಡಗೆವಾರ್ ದ್ವಿರಾಷ್ಟ್ರ ಸಿದ್ದಾಂತದ ಮೂಲಕ ದೇಶದ ವಿಭಜನೆಗೆ ಕಾರಣರಾದರು. ಗಾಂಧಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಧರ್ಮಾಧಾರಿತ ಸಿದ್ದಾಂತವನ್ನು ಗಾಂಧೀಜಿ ಒಪ್ಪಲಿಲ್ಲ. ಆಧರೆ ಕಾಂಗ್ರೆಸ್ ಮತ್ತು ಗಾಂಧೀ ದೇಶದ ವಿಭಜನೆಗೆ ಕಾರಣ ೆಎಂದು ಸುಳ್ಳು ಹರಡುವ ಕೆಲಸ ನಡೆಯುತ್ತಿದೆ. ಇದನ್ನು ಯುವಕರು ಅರ್ಥಮಾಡಿಕೊಳ್ಳಬೇಕು ಎಂದರು.
ಹಿಂದೂ, ಸಿಖ್, ಮುಸ್ಲೀಂ, ಕ್ರಿಶ್ಚಿಯನ್, ಪಾರ್ಸಿ ಹೀಗೆ ಎಲ್ಲ ಧರ್ಮೀಯರು ಸೌಹಾರ್ದತೆಯಿಮದ ಬದುಕಬೇಕೆಂದು ಗಾಂಧಿ ಬಯಸಿದ್ದರು. ಆದರೆ ಇಂದಿನ ಕೇಂದ್ರ ಸರ್ಕಾರ ಧರ್ಮದ ಆಧಾರ ಮೇಲೆ ಧರ್ಮಗಳ ನಡುವಿನ ಸೌಹಾರ್ದ ನೆಲೆಗಳನ್ನು ವಿಭಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಯಾತ್ರಿಗಳಾದ ಅರುಣ್ ಕುಮಾರ್, ಸುನಿಲ್, ಆರಾಧನ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಗಾಂಧಿವಾದಿ ಎಂ.ಬಸವಯ್ಯ, ಪುಟ್ಟಕಾಮಣ್ಣ, ಬಿ.ಆರ್. ಪಾಠೀಲ್ ಮೊದಲಾಧವರು ಉಪಸ್ಥಿತರಿದ್ದರು.
Comment here