Uncategorized

ಹಾವಾಡಿಗರಿಗೆ ಏಕತಾ ಟ್ರಸ್ಟ್ ನೆರವು: ಆಹಾರ ಕಿಟ್ ವಿತರಣೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಹರಿದೇವನಹಳ್ಳಿ (ಶ್ರೀನಿವಾಸನಗರ )ನಿವಾಸಿಗಳಾದ ಹಾವಡಿಗ ಕುಟುಂಬದವರಿಗೆ ಪ್ರಬುದ್ಧ ಭಾರತ ಏಕತಾ ಟ್ರಸ್ಟ್ ವತಿಯಿಂದ ದಿನಬಳಕೆಯ ಆಹಾರ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.

ಲಾಕ್ ಡೌನ್ ನಿಂದ ಈ ಕುಟು‌ಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು.


ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ


ಪ್ರಬುದ್ಧ ಭಾರತ ಏಕತಾ ಟ್ರಸ್ಟ್ ಅಧ್ಯಕ್ಷ ಎನ್. ಮೋಹನ್ ಕುಮಾರ್ ಮತ್ತು ಕಾರ್ಯದರ್ಶಿ ಡಿ.ಎನ್. ಚಂದನ್ ವಿತರಣೆ ಮಾಡಿದರು.

ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಕೊಡುವ ಬಗ್ಗೆ ಮಾಹಿತಿ ನೀಡಲಾಯಿತು.

Comment here