Friday, March 15, 2024
Google search engine
Homeತುಮಕೂರ್ ಲೈವ್ಅಧಿಕಾರಿಗಳು ನಮ್ಮನ್ನು ಯಾಕೆ‌ ಕರೆಯುತ್ತಿಲ್ಲ?

ಅಧಿಕಾರಿಗಳು ನಮ್ಮನ್ನು ಯಾಕೆ‌ ಕರೆಯುತ್ತಿಲ್ಲ?

ಮಧುಗಿರಿ:ತಾಲ್ಲೂಕಿನಲ್ಲಿ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಆರೋಪಿಸಿದ್ದಾರೆ.

ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಡೆಯುತ್ತಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ ಹಾಗೂ ಅವರ ಗಮನಕ್ಕೂ ತಾರದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ನಾವೂ ಸಹ ಚುನಾಯಿತರಾಗಿ ಆಯ್ಕೆಯಾಗಿದ್ದು, ನಮಗೂ ಸಹ ಗೌರವ ಕೊಡುವ ಪರಿಪಾಠವನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಲಾಖಾ ಅಭಿವೃದಿ ಕಾರ್ಯಕ್ರಮಗಳಿಗೆ ಪ್ರಗತಿ ಪತ್ರ ನೀಡುವುದಿಲ್ಲ ಮತ್ತು ಅಂತಹ ಅಧಿಕಾರಿಗಳು ಸಭೆಗೆ ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆಗಾಗಿ 5 ರಿಂದ 10 ಸಾವಿರದವರೆಗೂ ಲಂಚಾ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದು ಹೆಣದ ಮೇಲಿನ ದುಡ್ಡಿಗೆ ಆಸೆಪಟ್ಟಂತಾಗುತ್ತದೆ ಎಂದು ಕಿಡಿಕಾರಿದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿಯೂ ಕಾಫಿ-ಟೀ ನೀಡುವ ರೀತಿಯಲ್ಲಿ ನಿರ್ಭಯವಾಗಿ ಅಕ್ರಮ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಲು ಭಯ ಪಡುತ್ತಿದ್ದಾರೆ. ಕಾರಣವೇನೆಂದರೆ ಅಕ್ರಮ ಮಧ್ಯ ಮಾರಾಟ ಮಾಡುವವರ ಬಗ್ಗೆ ದೂರು ನೀಡಿದವರ ವಿವರಗಳನ್ನು ಅಧಿಕಾರಿಗಳು ಮಧ್ಯ ಮಾರಾಟ ಮಾಡುವವರಿಗೆ ತಿಳಿಸಿ ಅವರ ಮೇಲೆ ಗಲಾಟೆ ಮಾಡುಸುತ್ತಾರೆ. ಇದರಿಂದ ಅಬಕಾರಿ ಇಲಾಖೆಯವರೂ ಸಹ ಅಕ್ರಮ ದಂದೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಎಂದರು.

ಬಿಜವರ ಕ್ಷೇತ್ರದ ಸದಸ್ಯ ರಂಗನಾಥ್ ಮಾತನಾಡಿ, ಕುಪ್ಪಾಚಾರಿ ರೊಪ್ಪದಿಂದ ಹಾವೇಕಟ್ಟೆ ರಸ್ತೆ ಅಭಿವೃದ್ದಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ತುಂಬಾ ಕಳಪೆ ಕಾಮಗಾರಿಯಾಗಿದೆ. ಯಾವುದೇ ಕಾರಣಕ್ಕೂ ಇದರ ಬಿಲ್ ಮಾಡಬಾರದು ಎಂದು ಎಇಇ ಹೊನ್ನೇಶಪ್ಪರವರಿಗೆ ತಿಳಿಸಿದಾಗ ಈ ಕಾಮಗಾರಿಯನ್ನು ರದ್ದುಪಡಿಸಿ ಮರುಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಪಶು ವೈಧ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್ ಮಾತನಾಡಿ, ನಮ್ಮ ಇಲಾಖೆಯಿಂದ 40 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ. ಗೊಂದಿಹಳ್ಳಿ ಮತ್ತು ಸಜ್ಜೇಹೊಸಹಳ್ಳಿ ಗ್ರಾಮಗಳಿಗೆ ನೂತನ ಪಶು ವೈಧ್ಯ ಕೇಂದ್ರದ ಕಟ್ಟಡ ಮಂಜೂರಾಗಿವೆ. ತೆರೆಯೂರು, ನಿಟ್ರಹಳ್ಳಿ ಕ್ರಾಸ್, ಮರುವೇಕೆರೆ, ಕೊಂಡವಾಡಿ ಮತ್ತು ಕೋಡ್ಲಾಪುರ ಗ್ರಾಮಗಳಿಗೆ ಪಶು ವೃಧ್ಯ ಕೇಂದ್ರ ಕಟ್ಟಡದ ಅವಶ್ಯಕತೆ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಗರಣಿ, ತಗ್ಗಿಹಳ್ಳಿ, ಕೊಂಡವಾಡಿ, ಕವಣದಾಲ ಮತ್ತು ರಂಟವಳಲು ಗ್ರಾಮದಲ್ಲಿರುವ ಪ್ರಾಥಮಿಕ ಪಶು ವೈಧ್ಯ ಕೇಂದ್ರಗಳನ್ನು ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ತಾ.ಪಂ ಸಮಿತಿ ಶಿಫಾರಸ್ಸು ಮಾಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಇಓ ದೊಡ್ಡಸಿದ್ದಪ್ಪ, ತಾ.ಪಂ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಮಿಡಿಗೇಶಿ ತಾ.ಪಂ ಸದಸ್ಯೆ ಯಶೋಧಮ್ಮ ಮಾತನಾಡಿ, ಮಿಡಿಗೇಶಿ ಗ್ರಾಮದಲ್ಲಿ ಇತ್ತೀಚೆಗೆ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಶಂಕು ಸ್ಥಾಪನಾ ಕಾರ್ಯಕ್ರಮ ನಡೆದಿದ್ದು, ಅಧಿಕಾರಿಗಳು ನಮ್ಮನ್ನು ಆಹ್ವಾನಿಸದೆ ಶಂಕುಸ್ಥಾಪನೆ ನೆರವೇರಿಸಿರುತ್ತಾರೆ. ನಾನೂ ಸಹ ಶಾಸಕರಂತೆ ಜನರಿಂದ ಮತ ಪಡೆದು ಚುನಾಯಿತರಾಗಿದ್ದೇನೆ ಎಂದು ಕೆ.ಆರ್.ಐ.ಡಿ.ಎಲ್ ಅಧಿಕಾರಿ ಹನುಂತರಾಯಪ್ಪನನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ರಾಜು ಮಾತನಾಡಿ, ಅಧಿಕಾರಿಗಳು ಮತ್ತು ಇಂಜಿನೀಯರ್‍ಗಳು ಸ್ಥಳ ಗುರುತಿಸದೆ ಕಾಮಗಾರಿ ಪ್ರಾರಂಭಿಸಲು ಸಾದ್ಯವೇ. ಆದ್ದರಿಂದ ಕಾಮಗಾರಿ ನಿಲ್ಲಿಸುವಂತೆ ಸದಸ್ಯರಿಗೆ ತಿಳಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?