Friday, March 29, 2024
Google search engine
Homeಜನಮನತಿಪಟೂರಿನಲ್ಲಿ ಹೇಗೆ ಸಿಕ್ಕಿತು ಗೊತ್ತಾ 300 ವರ್ಷದ ಹಳೆಯ ಬಾವಿ

ತಿಪಟೂರಿನಲ್ಲಿ ಹೇಗೆ ಸಿಕ್ಕಿತು ಗೊತ್ತಾ 300 ವರ್ಷದ ಹಳೆಯ ಬಾವಿ

ಉಜ್ಜಜ್ಜಿ ರಾಜಣ್ಣ


Tipturu; ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದಾದ ಹೊಳಲೆ ಬಾವಿಯೊಂದನ್ನು ನಗರ ವಲಯದಲ್ಲಿ ವಿಶೇಷವಾಗಿ ಗುರುತಿಸಲಾಗಿದೆ.

ಶತಮಾನದಷ್ಟು ಹಳೆಯದಾದ ಈ ಹೊಳಲೆ ಬಾವಿಯ ಹಳೆಯ ಪಳೆಯುಳಿಕೆಯನ್ನು ನಗರಸಭೆ ಸ್ವಾದೀನಪಡಿಸಿಕೊಂಡು ಸದರಿ ಜಲಕಾಯಕ್ಕೆ ಸ್ವಚ್ಛತೆ ಮಾಡಿ ಸಂರಕ್ಷಣಾ ಭಾಗವಾಗಿ ಸುರಕ್ಷಿತ ಸುತ್ತಬೇಲಿ ನಿರ್ಮಿಸಿದರು.

ನಗರಸಭೆಯ ಸಂರಕ್ಷಿತಾ ವಲಯವಾಗಿ ಗುರುತಿಸಲ್ಪಟ್ಟಿರುವ ಹೊಳಲೆ ಬಾವಿಯನ್ನು ಸ್ಥಳೀಯರು ಆಧ್ಯಾತ್ಮಿಕ ಭಾವನೆಯುಳ್ಳವರಾಗಿ ಬಳಸಲು ಪುನಃ ಪರಿಭಾವಿತರಾಗಿದ್ದಾರೆ.

ತಿಪಟೂರು ನಗರದ ಗೊರಗೊಂಡನಹಳ್ಳಿಯಲ್ಲಿ ಈ ವಿನೂತನವಾದ ಹೊಳಲೆ ಬಾವಿಯನ್ನು ತಿಪಟೂರು ನಗರಸಭೆ ಪುನರುಜ್ಜೀವನಗೊಳಿಸಿದೆ.

ತಿಪಟೂರು ನಗರ ಸಭೆಯ ಅಧ್ಯಕ್ಷರಾದ ರಾಮಮೋಹನ್ ಮತ್ತು ಪೌರಾಯುಕ್ತರಾದ ಉಮಾಕಾಂತ್ ಮತ್ತು ಸಹಾಯಕ ಕಾರ್ಯಪಾಲ ಅಭಿಯಂತರರಾದ ಎನ್. ನಾಗೇಶ್ ಮತ್ತು ಸಿಬ್ಬಂದಿ ” ನಗರ ಜಲಕಾಯಗಳ ಪುನರುಜ್ಜೀವನ ಪುನರುತ್ಥಾನದ ಆಂದೋಲನವನ್ನು ಕಳೆದ ಶನಿವಾವೂ ಮುಂದುವರಿಸಿದ್ದರು.

ಒಂದೇ ಒಂದು ಹುಳಿ ಪೆಟ್ಟು ತಿನ್ನದ ಕರಿಕಲ್ಲಿನ ದುಂಡನೆಯ ದುಂಡಿಗಳನ್ನು ಬಳಸಿ ಆ ಹೊಳಲೆ ಬಾವಿಗೆ ಕಲ್ಲುಗಳನ್ನು ಕಟ್ಡಲಾಗಿದೆ. ಕಣ್ಣು ಕವುರು ಕಳೆದುಕೊಂಡಂತಿರುವ ಪರಾತತ್ವ ಇಲಾಖೆ ಇಂತಹ ಪಾರಂಪರಿಕ ಜಲಕಾಯಗಳನ್ನು ಹುಡುಕಿಕೊಂಡು ಸಂರಕ್ಷಣೆ ಮಾಡುವ ಮೂಲಕ ತನ್ನ ಜವಾಬ್ದಾರಿಯನ್ನು ಜನ ಬಳಕೆಗೆ ತರಬೇಕಿತ್ತು.

ಉಳಿ ಪೆಟ್ಟು‌ ತಾಗದ ಎತ್ತುಂಡಿ ತಂದು ಒಳಲೆ ಬಾವಿ ನಿರ್ಮಾಣ ಮಾಡಿರುವುದರಿಂದ ಇದನ್ನು ಸ್ಥಳೀಯರು “ಕರಿಕಲ್ಲು ಬಾವಿ ಎಂತಲೂ ಕರೆಯಲಾಗುತ್ತದಲ್ಲದೇ, ಕರಿಮಾಯಿ ಗ್ರಾಮದೈವ ಕರಿಕಲ್ಲ ಮಾರಿ ತಾಯಿ ಆವುರುದ ಪೂಜೆಗೆ ಈ ಬಾವಿಯಿಂದ ಸ್ವಖುಮಜ್ಜನದ ನೀರನ್ನು ತಾಯಿಯ ಜಲದಿಗೆ ಜಲವಾಸಿ ಜಲವಾಡದಿಂದ ಜತುನವಾಗಿ ಬಳಸುವ ಸಿಲುಮೆ ಈ ಬಾವಿಯ ನೀರು.

ಊರು ಪೊರೆವ ಅವ್ವ ಉರಿಯೂತ ಉರಿಮಾರಿ ಮೈಯ್ಯುಣ್ಣದ ಹಾಗೆ ಮಂದಿ ಮಹೋದಯರೊಳಗೆ ಮರಿ ಮಂದೆಯೊಳಗೆ ಒಕ್ಕಲುತನದೊಳಗೆ ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯರ ಪುರಾತನ ನಂಬಿಕೆ. ಆದುದರಿಂದ ನಿರ್ವಹಣೆಯು ಸಾಮಾನ್ಯವಾಗಿ ಜನರಿಗೇ ಸಂಪೂರ್ಣ ಸೇರಿದಂತೆ. ಅದರ ಅನುವು ತನುವು ಮಾಲಿನ್ಯದ ಪ್ರಮುಖ ಜವಾಬ್ದಾರಿಯಾಗಿ ಬಾವಿಯ ಕುರಿತಾದ ಹಲವಾರು ದೈವಾಚರಣೆಗಳ ಇಂದಿಗೂ ಇಲ್ಲಿ ಜನ ಬಳಕೆಯಲ್ಲಿವೆ.

ಹೆದ್ದಾರಿ ನಗರ ಏಷ್ಯಾದ ಒಣಕೊಬರಿಯ ಪಾರಂಪರಿಕ ಮಾರುಕಟ್ಟೆ ಇರುವ ತಿಪಟೂರು ನಗರದಲ್ಲಿ ನಗರ ಜಲಕಾಕಾಯಗಳ ಭೂ ಸರ್ವೇಕ್ಷಣೆ ಕಾರ್ಯದಲ್ಲಿ ತಿಪಟೂರು ನಗರದಲ್ಲಿ ಪಾರಂಪರಿಕ ಜಲವಸತಿ ಪ್ರದೇಶಗಳ ಹುಡುಕಾಟದಲ್ಲಿ ನಗರಸಭೆಯು ತೊಡಗಿದರುವುದು ಪ್ರಶಂಸನೀಯ ಸಂಗತಿಯಾಗಿದೆ.

ಜಾಗತಿಕವಾಗಿಯೂ ಇದೊಂದು ಗುರುತಿಸಲ್ಪಡುವ ವಿಶೇಷ ರೀತಿಯ ಜಲಸಂಧುಗಳ ಜಲಸಂರಕ್ಷಣಾ ಪುನರುಜ್ಜೀವನ ಪುನರುತ್ಥಾನದ ಪುನರ್ ನಿರ್ಮಾಣ ಕಾರ್ಯವಾಗಿದೆ.‌

ನಗರಸಭೆಯ ನೂತನ ಅಧ್ಯಕ್ಷರಾಗಿ ರಾಮಮೋಹನ್ ಮತ್ತು ಪೌರಾಯುಕ್ತರಾದ ಉಮಾಕಾಂತ್ ಮತ್ತು ಸಿಬ್ಬಂದಿಯು ಕೈಗೊಂಡ ನಗರ ಜಲಮಾರ್ಗಗಳ ಪುನರ್ನನವೀಕರಣ ಕಾರ್ಯ ಅನುಸರಣೀಯ.

ನಗರ ಸಭೆಯ ಮಾಜಿ ಅಧ್ಯಕ್ಷರಾಗಿ ಟಿ.ಎನ್ ಪ್ರಕಾಶ್, ನೂತನ ಅಧ್ಯಕ್ಷರಾಗಿ ರಾಮನ್ ಮತ್ತು ಪೌರಾಯಕ್ತರಾದ ಉಮಾಕಾಂತ್ ಅವರನ್ನು ಪ್ರೋತ್ಸಾಹಿಸುವ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?