Thursday, March 28, 2024
Google search engine
Homeತುಮಕೂರು ಲೈವ್ತುಮಕೂರು ಗ್ರಾಮಾಂತರಕ್ಕಾಗಿಯೇ ಕೋವಿಡ್ ಆಸ್ಪತ್ರೆ ತೆರೆದ ಶಾಸಕ ಗೌರಿಶಂಕರ್

ತುಮಕೂರು ಗ್ರಾಮಾಂತರಕ್ಕಾಗಿಯೇ ಕೋವಿಡ್ ಆಸ್ಪತ್ರೆ ತೆರೆದ ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆದಿರುವ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಂಗಳವಾರ ಅಸ್ಪತ್ರೆ ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.

ಒಂದಿಲ್ಲೊಂದು ನಿರಂತರ ವೈಯಕ್ತಿಕ ಸೇವಾಕಾರ್ಯದಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವ ಶಾಸಕರಾದ ಡಿ.ಸಿ ಗೌರಿಶಂಕರ್ ಅವರ ಈ ನಿರ್ಧಾರ ಕೊರೋನಾದಿಂದ ತತ್ತರಿಸಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಜೀವಿನಿಯಾಗಲಿದೆ ಎಂದು ಹಿರಿಯ ವೈದ್ಯರುಗಳು, ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಕೋಡಿಮುದ್ದನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆ ಆಗಿ ಪ್ರಾರಂಭಿಸಲು ತಾಲ್ಲೂಕು ಅಧಿಕಾರಿಗಳ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು 180 ಹಾಸಿಗೆಗಳ ಆಸ್ಪತ್ರೆಯನ್ನು ಮಂಗಳವಾರ (04-05-2021) ಪ್ರಾರಂಭ ಮಾಡಲು ತಿಳಿಸಿದರು.

ಉಳಿದಂತೆ ಮುಂದಿನ ಹಂತದಲ್ಲಿ ತಮ್ಮ ಸ್ವಂತ ಹಣದಲ್ಲಿ ಆಕ್ಸಿಜನ್ ವ್ಯವಸ್ಥೆ ಮುಂದುವರಿಸುವುದಾಗಿ ಶಾಸಕರು ಘೋಷಿಸಿದರು.

ಸುಮಾರು 50 ಲಕ್ಷ ವೆಚ್ಚದಲ್ಲಿ 80 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಗ್ರಾಮಾಂತರ ಕ್ಷೇತ್ರದ ಯಾವೊಬ್ಬ ರೋಗಿಗೂ ಆಕ್ಸಿಜನ್ ಕೊರತೆ ತಟ್ಟುವುದಿಲ್ಲ. ಕೋವಿಡ್ ಪೀಡಿತ ಪ್ರತಿ ರೋಗಿಯನ್ನು ಉಳಿಸಿಕೊಳ್ಳುವುದೇ ನನ್ನ ಪ್ರಮುಖ ಕೆಲಸವಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ತಹಶೀಲ್ದಾರ್ ಮೋಹನ್, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ಪಾಲನೇತ್ರಯ್ಯ ಉಪಸ್ಥಿತರಿದ್ದರು.

-:ಇಲ್ಲಿಯವರೆಗಿನ ಕೊರೋನಾ ಸಮಯದಲ್ಲಿ ಶಾಸಕರ ಸೇವೆಗಳು:-


ಮೊದಲನೇ ಅಲೆಯಲ್ಲಿ
> ಕ್ಷೇತ್ರದ ಮನೆಮನೆಗೂ 2 ಬಾರಿ ಆಹಾರದ ಕಿಟ್
> ಔಷದಿ ಅಗತ್ಯವಿರುವ ಮನೆಗೆ ಉಚಿತ ಔಷದಿ
> ತರಕಾರಿ ಹಣ್ಣುಗಳ ವಿತರಣೆ
> ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಹಣ ಸಹಾಯ

ಎರಡನೇ ಕೊರೋನಾ ಅಲೆಯಲ್ಲಿ


> 4 ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ್ದಾರೆ.
> 35 ಜನರ ಕೊರೋನಾ ವಾರಿಯರ್ಸ್ ತಂಡ ಕಟ್ಟಿ ಯುವಸೈನ್ಯವನ್ನೆ ಕೊರೋನಾ ನಿಯಂತ್ರಿಸಲು ಸೃಷ್ಟಿಸಿದ್ದಾರೆ.
> ಅಂತ್ಯ ಸಂಸ್ಕಾರ ಮಾಡಲು ಉಚಿತ JCB ಗಳ ವ್ಯವಸ್ಥೆಯನ್ನು ಮಾಡಿದ್ದಾರೆ.
> ಸಹಾಯವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳಿಗೆ ಪಡಿತರ, ಮೆಡಿಸಿನ್ ಸೌಲಭ್ಯವನ್ನು ಮನೆ ಬಾಗಿಲಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ..

ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ಹೊರತು ಪಡಿಸಿ ತಾವೇ ಮುತುವರ್ಜಿ ವಹಿಸಿ ಶಾಸಕರ ಪ್ರತಿಯೊಂದು ಸೇವಾ ಹೆಜ್ಜೆ ನಿಜಕ್ಕೂ ಇಡೀ ರಾಜ್ಯ ಎದೆ ಹುಬ್ಬಿಸುವಂತೆ ಮಾಡಿದೆ. ಬೇರೆ ಕ್ಷೇತ್ರದ ಜನರು ನಮಗೂ ಇಂತಹ ಶಾಸಕರು ಯಾಕಿಲ್ಲ ಎಂಬ ಪ್ರಶ್ನೆ ಮಾಡತೊಡಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?