Saturday, April 13, 2024
Google search engine
Homeಕ್ರೈಂಅಪಘಾತ, ಅವಘಡ, ಆಕಸ್ಮಿಕವಿಷಪೂರಿತ ಎಲೆ ತಿಂದು 11ಕುರಿಗಳ ಸಾವು ; 15 ಕುರಿಗಳು ಚಿಂತಾಜನಕ

ವಿಷಪೂರಿತ ಎಲೆ ತಿಂದು 11ಕುರಿಗಳ ಸಾವು ; 15 ಕುರಿಗಳು ಚಿಂತಾಜನಕ

Publicstory/prajayoga

ಬ್ರೇಕಿಂಗ್ ನ್ಯೂಸ್

ತುರುವೇಕೆರೆ: ವಿಷಪೂರಿತ ಸಸ್ಯದ ಎಲೆ ತಿಂದು ಸ್ಥಳದಲ್ಲೇ 11 ಕುರಿಗಳು ಮೃತಪಟ್ಟಿರುವ ಘಟನೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ನಡೆದಿದೆ.

ಶಿರಾ ಮೂಲದ ಲೋಕೇಶ್ ಎಂಬುವರು ಪಟ್ಟಣದಲ್ಲಿ ಕುರಿ ಮಂದೆಯೊಂದಿಗೆ ಬೀಡು ಬಿಟ್ಟಿದ್ದರು. ಇಂದು ಬೆಳೆಗ್ಗೆ ಕುರಿಗಳನ್ನು ಮೇಯಿಸಲು ತೆರಳಿದ್ದರು. ಸಂಜೆ ಮಂದೆಯ ಕಡೆ ವಾಪಸ್ಸಾಗುವ ವೇಳೆ ಬೇಲಿಯಲ್ಲಿದ್ದ ಕಾಡು ಉರುಳಿ ಗಿಡದ ಎಲೆಗಳನ್ನು ಕುರಿಗಳು ತಿಂದಿವೆ. ತಕ್ಷಣದಲ್ಲೇ 11ಕುರಿಗಳು ನೆಲಕ್ಕುರುಳಿ ಸಾವನ್ನಪ್ಪಿದ್ದು,15 ಕ್ಕೂ ಹೆಚ್ಚು  ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಈ ಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪಶುವೈದ್ಯಾಧಿಕಾರಿ ಪುಟ್ಟರಾಜ ಹಾಗೂ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

ಈ ವೇಳೆ ಮೃತಪಟ್ಟ ಕುರಿಗಳ ಮಾಲೀಕರಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಅಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?