Saturday, April 13, 2024
Google search engine
Homegovernanceಮಳೆರಾಯನ ಅಬ್ಬರಕ್ಕೆ ಕುಸಿದ ಮನೆಯ ಗೋಡೆ

ಮಳೆರಾಯನ ಅಬ್ಬರಕ್ಕೆ ಕುಸಿದ ಮನೆಯ ಗೋಡೆ


Publicstory/prajayoga

ಪ್ರಾಣಾಪಾಯದಿಂದ ಕುಟುಂಬ ಪಾರು| ಉಕ್ಕಿ ಹರಿದ ಹಳ್ಳಜನ ಸಂಚಾರ ಅಸ್ತವ್ಯಸ್ಥ

ತುರುವೇಕೆರೆ : ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆರಾಯನ ಅಬ್ಬರಕ್ಕೆ ಬಾಣಸಂದ್ರ ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ.

ತಾಲೂಕಿನ ಬಾಣಸಂದ್ರ ಗ್ರಾಮದ ಅಜೀಜ್ ಎಂಬುವರಿಗೆ ಸೇರಿದ ಮನೆಯಗೋಡೆ ಕುಸಿದು ಬಿದ್ದ ಹಿನ್ನಲೆಯಲ್ಲಿ ಸೂರು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆಯಲ್ಲಿದ್ದ  ಸಾಮಾನು ಸರಂಜಾಮುಗಳು ನುಜ್ಜುಗುಜ್ಜಾಗಿವೆ.  ಮನೆಯ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಹಶೀಲ್ದಾರ್ ಸ್ಥಳಕ್ಕೆ ಭೇಟಿ

ಘಟನೆಯ ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್  ಬೇಟಿ ನೀಡಿ ಮನೆ ಕಳೆದುಕೊಂಡು ಸಂತ್ರಸ್ಥರಾಗಿರುವ ಅಜೀಜ್ ಕುಟುಂಬಸ್ಥರಿಗೆ ಸಾಂತ್ವನ  ಹೇಳಿದರು. ಸರ್ಕಾರದ ಮಾನದಂಡದನ್ವಯ ಪರಿಹಾರ ದೊರಕಿಸಿಕೊಡುವ ಭರವಸೆ  ನೀಡಿದರು.  ಮಳೆಯ ಆರ್ಭಟ ಹೆಚ್ಚಾಗಿ ವಾಸದ ಮನೆಗಳು ಕುಸಿಯುತ್ತಿರುವ ಹಿನ್ನಲೆಯಲ್ಲಿ ಕಂದಾಯ ಇಲಾಖೆ  ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು  ಕೇಂದ್ರ ಸ್ಥಾನದಲ್ಲಿದ್ದು  ವರದಿ ನೀಡುವಂತೆ ಅವರು ಸೂಚನೆ ನೀಡಿದರು.

ತಾಲೂಕು ವ್ಯಾಪ್ತಿಯಅರಳೀಕೆರೆ ಬಳಿಯ ಹಳ್ಳದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮಾದಿಹಳ್ಳಿ ಮಾರ್ಗವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಾದಿಹಳ್ಳಿ ಶಾಲೆಗೆ ತೆರಳುವ ಮಕ್ಕಳು ಶಿಕ್ಷಕರು ಪರದಾಡಬೇಕಾಯಿತು. ತಾಲೂಕಿನ ವ್ಯಾಪ್ತಿಯ ತೋಟ, ಹೊಲ ಗದ್ದೆಗಳು  ಜಲಾವೃತಗೊಂಡಿವೆ. ಮಣೆಚಂಡೂರು ಗ್ರಾ.ಪಂ. ವ್ಯಾಫ್ತಿಯಲ್ಲಿ  8ಕ್ಕೂ  ಅಧಿಕ ವಿದ್ಯುತ್ ಕಂಬಗಳು ನೆಲಕ್ಕೊರಗಿವೆ. ಇಟ್ಟಿಗೆಹಳ್ಳಿ, ಸೀಗೆಹಳ್ಳಿ ಮತ್ತಿತರ ಕಡೆಗಳಲ್ಲಿ ರಸ್ತೆಗಳು ಮಳೆಯ ನೀರಿನಲ್ಲಿ ಕೊಚ್ಚಿಹೋಗಿವೆ. ವರುಣನ ಅರ್ಭಟಕ್ಕೆ ಹಳೆ ಮನೆಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುವ ಜನತೆ ಜೀವಭಯದ ಆತಂಕ ಎದುರಿಸುವಂತಾಗಿದೆ. ಗ್ರಾಮೀಣ  ಪ್ರದೇಶದ ಮಣ್ಣಿನ ರಸ್ತೆಗಳು ಮಳೆಗೆ ತೋಯ್ದು ಕೆಸರು ಗದ್ದೆಗಳಾಗಿವೆ.  ತಾಲೂಕಿನ ಬಹುತೇಕ ಕೆರೆಕಟ್ಟೆಗಳು  ಕೋಡಿ ಬಿದ್ದು ಮೈದುಂಬಿ ಹರಿಯುತ್ತಿವೆ.

ಮಳೆಯ ಪ್ರಮಾಣ

ಮಂಗಳವಾರ ರಾತ್ರಿ ತಾಲೂಕಿನ ವ್ಯಾಪ್ತಿಯ  ಕಸಬಾದಲ್ಲಿ 33.6 ಮಿ.ಮೀ, ದಂಡಿನಶಿವರದಲ್ಲಿ 6.3 ಮಿ.ಮೀ.ಮಾಯಸಂದ್ರದಲ್ಲಿ 51.6 ಮಿ.ಮೀ, ದಬ್ಬೇಘಟ್ಟದಲ್ಲಿ 10.1 ಮಿ.ಮೀ, ಸಂಪಿಗೆಯಲ್ಲಿ 15.8 ಮಿ,ಮೀ. ಮಳೆ ಪ್ರಮಾಣ ದಾಖಲಾಗಿದ್ದು, ಸರಾಸರಿ 24 ಮಿ.ಮೀ. ಮಳೆ ದಾಖಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?