Saturday, July 27, 2024
Google search engine
Homeತುಮಕೂರ್ ಲೈವ್ಅತ್ಯಾಚಾರ: ತಿಪಟೂರಿನಲ್ಲಿ ಕಟ್ಟೆಯೊಡೆದ ಆಕ್ರೋಶ

ಅತ್ಯಾಚಾರ: ತಿಪಟೂರಿನಲ್ಲಿ ಕಟ್ಟೆಯೊಡೆದ ಆಕ್ರೋಶ

ತಿಪಟೂರು: ಪಶು ವೈದ್ಯೆ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಮೊಂಬತ್ತಿ ಬೆಳಗಿ ನಗರದ ನಗರಸಭೆ ವೃತ್ತದ ಬಳಿಪ್ರತಿಭಟಿಸಿದವು.

ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷರಾದ ಸಿ ಬಿ ಶಶಿಧರ್ ಮಾತನಾಡಿ ಅತ್ಯಾಚಾರದಂತ ಹೇಯ ಕೃತ್ಯಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹದು . ಹಲವರು ಈ ಪ್ರಕರಣವನ್ನು ಧರ್ಮದ ಆಧಾರದ ಮೇಲೆ ವಿಂಗಡಿಸುವ ಕೆಟ್ಟ ಪ್ರಯತ್ನಕ್ಕೆ ಕೈಹಾಕಿರುವುದು ಖಂಡನೀಯ. ನನ್ನ ಪ್ರಕಾರ ಅತ್ಯಾಚಾರಿಗಳಿಗೆ ಯಾವುದೇ ದರ್ಮವಿಲ್ಲ ಎಂದರು.

ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಇದೆ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಇಂತಹ ಪ್ರಕರಣಗಳು ಬೆಳಕಿಗೆ ಬರಬೇಕು ಎಂದರು.

ಸೌಹಾರ್ದ ತಿಪಟೂರು ನ ಕಾರ್ಯದರ್ಶಿ ಅಲ್ಲಾಬಕಾಶ್ ಎ ಮಾತನಾಡಿ ಅತ್ಯಾಚಾರಕ್ಕೆ ಒಳಗಾದ ಎಲ್ಲ ಹೆಣ್ಣು ಮಕ್ಕಳ ಕುಟುಂಬಗಳಿಗೂ ನ್ಯಾಯ ಸಿಗಬೇಕು ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷರಾದ ಜಹೇರಾ ಜಬೀನ್ ರವರು ಮಾತನಾಡಿ ಇಂದಿನ ಸ್ಥಿತಿ ನೋಡಿದರೆ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ ನ ತಿಪಟೂರು ಕೃಷ್ಣ , ಜಯಕರ್ನಾಟಕ ವೇದಿಕೆಯ ಕುಮಾರ್ , ದಲಿತ ಮುಖಂಡರಾದ ಬಜಗೂರು ಮಂಜುನಾಥ್, ಜೈಭಾರತ ಯುವ ಸೇನೆಯ ಸಿಂದೂದರ್, ಭೋಮಿ ಸಾಂಸ್ಕೃತಿಕ ವೇದಿಕೆಯ ಸತ್ತೀಶ್, ಮತ್ತಿತರರು ಮಾತನಾಡಿದರು ಈ ಪ್ರತಿಭಟನೆಯಲ್ಲಿ ಮಹಿಳಾ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಬಾಗ್ಯ ಮೂರ್ತಿ, ರೈತ ಸಂಘದ ಮುಖಂಡರಾದ ಬಸ್ತಿಹಳ್ಳಿ ರಾಜಣ್ಣ , ಮನೋಹರ್ ಪಟೇಲ್, ಬೇಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಮುಸ್ಲಿಂ ಜಮಾಯತ್ ನ ಶಫಿಉಲ್ಲಾ ಶರೀಫ್, ಸಮೀವುಲ್ಲಾ ,ಸೈಯದ್ ಮಹಮೂದ್, ತನ್ವೀರುಲ್ಲಾ ಶರೀಫ ಭೌದ್ದ ಮಹಾಸಭಾ ದ ಮೋಹನ್ ಸಾಗಿ , ರಘು ವಸಂತ್ ,ಚೆನ್ನಪ್ಪ, ಜೈಭಾರತ ಯುವಸೇನೆಯ ಜಿಲ್ಲಾ ಅಧ್ಯಕ್ಷರಾದ ವರುಣ ಅಧ್ಯಕ್ಷರಾದ ಬಳ್ಳೆಕಟ್ಟೆ ಶಿವಕುಮಾರ್ ಚಿಕ್ಕನಾಯಕನಹಳ್ಳಿ ಅಧ್ಯಕ್ಷರಾದ ಗುರುಪ್ರಸಾದ್, ಅಂಬೇಡ್ಕರ್ ಸೇನೆ ಯ ಜಿಲ್ಲಾ ಉಪಾಧ್ಯಕ್ಷರಾದ ಅನಂದ್ , ಸೇರಿದಂತೆ ಸಮಾನ ಮನಸ್ಕ ಸಂಘಟನೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೊನೆಯಲ್ಲಿ ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?