Saturday, July 27, 2024
Google search engine
Homeತುಮಕೂರು ಲೈವ್ಇಂಥ ಅಧಿಕಾರಿಗಳು ಸಾವಿರವಾಗಲಿ....

ಇಂಥ ಅಧಿಕಾರಿಗಳು ಸಾವಿರವಾಗಲಿ….

ತುಳಸೀತನಯ


ಅವರ ಹುಟ್ಟು ಹಬ್ಬಕ್ಕೆ ಇಂತ ಅಧಿಕಾರಿಗಳು ಸಾವಿರ, ಸಾವಿರ ಪಟ್ಟು ಬೆಳೆಯುತ್ತಾ ಹೋಗಲಿ ಎಂದು ಹಾರೈಸುವುದೇ ಸರಿ. ಅದರಲ್ಲೂ ಜನಪರವಾದ ಪೊಲೀಸರು ಇದ್ದಲ್ಲಿ ನೋವುಂಡವರಿಗೆ ಸಮಾಜ ಎನ್ನುವುದು ಸ್ವರ್ಗವಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಂದ್ರಶೇಖರ್ ಅವರನ್ನು ಅಣ್ಣಾ ಎನ್ನುವ ಜನರೇ ಹೆಚ್ಚು. ಅವರು ಕೆಲಸ ಮಾಡಿದ ಠಾಣೆಗಳ ಸರಹದ್ದಿನಲ್ಲಿ ವಿಚಾರಿಸುತ್ತಾ ಹೋದರೇ ಅವರಿಗೆ ಕೃತಜ್ಞತೆ ಸಲ್ಲಿಸುವವರ ಸಂಖ್ಯೆ ನೂರು, ಇನ್ನೂರು ಹೀಗೆ ಏರುತ್ತಾ ಹೋಗುತ್ತದೆ.

ರಾಮನಗರದ ಎಸಿಬಿ ಅಧಿಕಾರಿಯಾಗಿರುವ ಚಂದ್ರಶೇಖರ್ ಅವರ ಹುಟ್ಟುಹಬ್ಬ ಇಂದು. ಸರಳ ಸಜ್ಜನಿಕೆಯ ಪೊಲೀಸರು ಇವರು.

ನನಗಿನ್ನೂ ನೆನಪಿದೆ.‌ಕ್ಷಣ ಯಾಮಾರಿದರೆ ನಾನು ಚಿರತೆಯ ಬಾಯಿಗೆ ಆಹಾರವಾಗಬೇಕಿತ್ತು. ಕ್ಷಣಮಾತ್ರದಲ್ಲಿ ಅವರ ಪ್ರಾಣ ಲೆಕ್ಕಿಸದೇ ಚಿರತೆಯ ಬಾಯಿಗೆ ಕೈ ಹಾಕಿ ಹಿಡಿದೇ ಬಿಟ್ಟರು. ಅದರ ಕುತ್ತಿಗೆಯನ್ನು ಅವರ ಅದುಮಿ ಹಿಡಿದಿಟ್ಟರು.

ನನಗೆ ಗೊತ್ತಿದೆ, ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಅವರೊಂದಿಗೆ ಆ ದರೋಡೆಕೋರರನ್ನು ಹಿಡಿದಿದ್ದ ತಂಡದಲ್ಲಿ ನಾನು ಇದ್ದೆ. ಅವರೊಂದಿಗೆ ಇದ್ದ ಎಲ್ಲರಿಗೂ ಪ್ರಶಸ್ತಿ ಕೊಡುವುದಾದರೆ ಮಾತ್ರ ಪ್ರಶಸ್ತಿಗೆ ಅರ್ಜಿ ಹಾಕುವೆ ಎಂದು ಆಗಿನ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಹೇಳಿಯೇ ಬಿಟ್ಟರು. ಅವರು ಪ್ರಶಸ್ತಿ ಗೊಡವೆಗೆ ಹೋಗಲಿಲ್ಲ ಎಂದು ನೆನೆಯುತ್ತಾರೆ ಅವರೊಂದಿಗೆ‌ ಕೆಲಸ ಮಾಡಿದ್ದ ಕೊರಟಗೆರೆ ಠಾಣೆಯಲ್ಲಿ ಚಂದ್ರಶೇಖರ್ ಅವರೊಂದಿಗೆ ಸಿಬ್ಬಂದಿ.

ನಮಗೆ ದಿಕ್ಕೆ ತೋಚದಂತಾಗಿತ್ತು. ಸುಳ್ಳು ದೂರಿನಲ್ಲಿ ನನ್ನ ಮಗನನ್ನು ಜೈಲಿಗೆ ತಳ್ಳಲಾಗಿತ್ತು. ವಕೀಲರಿಗೆ ಕೊಡಲು ಹಣವೂ ಇರಲಿಲ್ಲ. ವಕೀಲರೊಬ್ಬರ ಹೆಸರು ಹೇಳಿದರು. ಜೈಲಿನಲ್ಲಿದ್ದ‌ ಮಗ ಬಿಡುಗಡೆಯಾದ.

ಅದು ಪೊಲೀಸರ ಭವನ ಚಿಲುಮೆ. ಸಾವಿರಾರು ಜನರು ಕಿಕ್ಕಿರಿದು ದುಂಬಿದ್ದರು. ಅವರು ವೇದಿಕೆಗೆ ಬರುವಾಗ ಹೂವಿನ ಸುರಿಮಳೆ.‌ಯಾವ ಸಿನಿಮಾ ನಾಯಕನಿಗೂ ಇಲ್ಲದಷ್ಟು.

ಒಬ್ಬ ಅಧಿಕಾರಿ ಬಗ್ಗೆ ಇಷ್ಟು ಹೇಳಿದರೆ ಸಾಕಲ್ಲವೇ? ನನ್ನನ್ನು ತಮ್ಮನಂತೆಯೇ ಪ್ರೀಯಿಯಿಂದ ನೋಡಿಕೊಳ್ಳುವ ಅವರಿಗೆ ಜನ್ಮ ದಿನದ ಶುಭಾಶಯಗಳು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?