Saturday, July 27, 2024
Google search engine
Homeತುಮಕೂರ್ ಲೈವ್ಇಂಧನ ಉಳಿಸಿ, ಆದಾಯ ಹೆಚ್ಚಿಸಿ

ಇಂಧನ ಉಳಿಸಿ, ಆದಾಯ ಹೆಚ್ಚಿಸಿ

Publicstory.in


ತುಮಕೂರು: ಇಂಧನ ಉಳಿತಾಯ ಮಾಡುವ ಮೂಲಕ ದೇಶದ ಆದಾಯ ಹೆಚ್ಚಿಸಿ. ಎಲ್ಲರೂ ಇಂಧನವನ್ನು ಮಿತವಾಗಿ ಬಳಸಿ- ಉಳಿಸುವ ಮೂಲಕ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದು ಎಸ್‍ಎಸ್‍ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಮ್.ಎಸ್ ರವಿಪ್ರಕಾಶ್ ತಿಳಿಸಿದರು.

ನಗರದ ಎಸ್.ಎಸ್.ಐ.ಟಿ ಕಾಲೇಜಿನ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜು ಆವರಣದಿಂದ ಟೌನ್ ಹಾಲ್ ಸರ್ಕಲ್‍ವರೆಗೆ ಹಮ್ಮಿಕೊಂಡಿದ್ದ ಇಂಧನ ಉಳಿತಾಯ ಸಂರಕ್ಷಣಾ ಸಪ್ತಾಹ ಜಾಥಾ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ಕಾರ್ಯ ನಡೆಯುತ್ತಿದೆ ಎಂದರು.
ಜನ ವಿದ್ಯುತ್ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಂಡು ಸರ್ಕಾರದ ಜತೆ ಕೈಜೋಡಿಸಬೇಕು ಎಂದರು.

ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎಮ್.ಝೆಡ್.ಕುರಿಯನ್ ಮಾತನಾಡಿ, ಇಂಧನ ಉತ್ಪಾದನಾ ಮೂಲಗಳು ಕಡಿಮೆಯಾಗಿದೆ. ವೈಯಕ್ತಿಕವಾಗಿ ಯಾರೂ ಇಂಧನ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ನಮ್ಮಿಂದ ಸಾಧ್ಯವಾದಷ್ಟು ಇಂಧನ ಉಳಿತಾಯ ಮಾಡಿ ಎಂದು ಕರೆ ನೀಡಿದರು.

ಪ್ರತಿಯೊಬ್ಬರು ವಿದ್ಯಾರ್ಥಿ ತಮ್ಮ ಮನೆಯಿಂದ ಆಚೆ ಬರುವಾಗ ಫ್ಯಾನ್, ಟಿ.ವಿ ಸ್ವಿಚ್ ಆಫ್ ಮಾಡಿ, ಹಾಗೆ ಎಲ್ಲಿಯಾದರೂ ನೀರು ಪೋಲ್ ಆಗುವುದನ್ನು ತಡೆಯಿರಿ. ಸಾರ್ವಜನಿಕರು ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ಇಂಧನ ಉಳಿತಾಯ ಮಾಡಿ. ಅನವಶ್ಯಕವಾಗಿ ವ್ಯರ್ಥ ಮಾಡುತ್ತಿರುವ ಇಂಧನವನ್ನು ಉಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?