Monday, July 22, 2024
Google search engine
Homeತುಮಕೂರ್ ಲೈವ್ಇಲ್ಲಿ ಸೂರ್ಯಗ್ರಹಣ ನೋಡಿ ಖುಷಿಪಟ್ಟರು...

ಇಲ್ಲಿ ಸೂರ್ಯಗ್ರಹಣ ನೋಡಿ ಖುಷಿಪಟ್ಟರು…

ತುಮಕೂರು: ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಿಸಿ ಜನರು ಖುಷಿಪಟ್ಟರು.

ಇದಲ್ಲದೇ ಹಲವಾರು ಶಾಲಾ ಕಾಲೇಜುಗಳ ಬಳಿಯೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯರು, ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ರವಿಶಂಕರ್, ಸಿ.ಯತಿರಾಜು, ವಿಶ್ವನಾಥ್, ಕೆ.ಎನ್.ಉಮೇಶ್, ಪತ್ರಕರ್ತರಾದ ಸಾ.ಚಿ.ರಾಜ್ ಕುಮಾರ್, ಬೈರೇಶ್, ಉಪನ್ಯಾಸಕಿ ಶ್ವೇತರಾಣಿ ಇತರರು ಇದ್ದರು.

ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಕೇಂದ್ರದ ಆವರಣದಲ್ಲಿ ದೂರದರ್ಶಕ, ಸೂಜಿರಂಧ್ರ ಬಿಂಬಗ್ರಾಹಿ, ಸನ್ ಪ್ರೊಜೆಕ್ಟರ್ ಹಾಗೂ ಸೋಲಾರ್ ಫಿಲ್ಟರ್ ಮೂಲಕ ಗ್ರಹಣವನ್ನು ವೀಕ್ಷಿಸಿದರು.

ಶೇಕಡ 89.1ರಷ್ಟು ಸೂರ್ಯನನ್ನು ಚಂದ್ರನ ಮರೆಮಾಡುವ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಿದರು.

ಬೆಳಗ್ಗೆ 8.06 ಗಂಟೆಗೆ ಗ್ರಹಣದ ಪ್ರಥಮ ಸ್ಪರ್ಶ ನಂತರ ಗರಿಷ್ಠ ಗ್ರಹಣವು 9.27ರಿಂದ 9.30ರವರೆಗೆ ಶೇಕಡ 89.1ರಷ್ಟು ಗ್ರಹಣ ಆವರಿಸಿಕೊಂಡಿತು.

3 ಗಂಟೆ 40 ಸೆಕೆಂಡ್‍ಗಳ ಕಾಲ ಸಂಭವಿಸಲಿರುವ ಇಂತಹ ಗ್ರಹಣವನ್ನು ಮತ್ತೊಮ್ಮೆ ನೋಡಲು 17ನೇ ಫೆಬ್ರವರಿ 2064ನೇ ಇಸವಿಯವರೆಗೆ ಕಾಯಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?