Thursday, March 28, 2024
Google search engine
Homeತುಮಕೂರು ಲೈವ್ಇಲ್ಲೊಬ್ಬ ನಕಲಿ IAS ಸಾಧಕ!

ಇಲ್ಲೊಬ್ಬ ನಕಲಿ IAS ಸಾಧಕ!

ಲಕ್ಷ್ಮೀಕಾಂತರಾಜು ಎಂಜಿ


Gubbi: ನಕಲಿ ಐಎಎಸ್ ,ಐಪಿಎಸ್ ಅಧಿಕಾರಿಗಳು ರೇಡು ಮಾಡುವ ನೆಪದಲ್ಲಿ ಬಂದು ಸಿಕ್ಕಿಬೀಳುವುದನ್ನ ನೀವು ನೋಡಿದ್ದೀರಿ. ಆದರೆ ,ಐಎಎಸ್ ನಕಲಿ ಸಾಧಕರನ್ನ ಇದುವರೆಗೂ ನೀವು ಕಂಡಿಲ್ಲ. ಆ ನಕಲಿ ಸಾಧಕ‌ ಬೇರೆ ಯಾರು ಅಲ್ಲ ಬೆಂಗಳೂರಿನ ಬಿಎಂಟಿಸಿ ಯ ನಿರ್ವಾಹಕ ಮಧು.
ಹೌದು.
ಬಿಎಂಟಿಸಿಯಲ್ಲಿ ನಿರ್ವಾಹಕನಾಗಿರುವ ಮಧು ಎಂಬಾತ ತನ್ನ ನಿರಂತರ ಬಿಡುವಿಲ್ಲದ ಕೆಲಸದ ನಡುವೆಯೇ ಐಎಎಸ್ ಮುಖ್ಯಪರೀಕ್ಷೆಯನ್ನ ಪಾಸು ಮಾಡಿ ಬರಲಿರುವ ಮಾರ್ಚ್ ಇಪ್ಪತ್ತೈದರಂದು ನಡೆಯುವ ಸಂದರ್ಶನಕ್ಕೆ ತಯಾರುಗುತ್ತಿರುವ ಸುಳ್ ಸುದ್ದಿ ಕೆಲ ಮಾಧ್ಯಮಗಳಲ್ಲಿ ವೈಭವಿಕರಿಸಿ ಸುದ್ದಿ ಮಾಡಲಾಗಿತ್ತು.

ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ಸಿನ ನಿರ್ವಾಹಕನಾಗಿ ಕೆಲಸ ಮಾಡುತ್ತಾ ಕಬ್ಬಿಣದ ಕಡಲೆಯಾಗಿರುವ ಐಎಎಸ್ ಮುಖ್ಯ ಪರೀಕ್ಷೆಯನ್ನ ಪಾಸು ಮಾಡುವುದು ಸುಮ್ಮನೆ ಮಾತಲ್ಲ. ಈ ಕಾರಣಕ್ಕಾಗಿಯೇ ಈ ಸುದ್ದಿಯನ್ನ ಜನರು ನಂಬಿ,ಆತನಿಗೆ ಹೆಚ್ಚು ಅಭಿನಂದಿಸಿದ್ದರು.

ಬೆಂಗಳೂರಿನ ಆಂಗ್ಲ ಪತ್ರಿಕೆಯೊಂದು ಈ ಸುಳ್ ಸುದ್ದಿಯನ್ನ ಮುಖಪಟದಲ್ಲಿ ಪ್ರಕಟಿಸಿತ್ತು. ಇದೇ ಸುದ್ದಿಯನ್ನ ರಾಜ್ಯ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಫೇಸ್ ಬುಕ್ನಲ್ಲಿ ಶೇರ್ ಮಾಡಿದ್ದರ ಪರಿಣಾಮ ನಾನೂ ಓದಿದ್ದೆ.

ಮಾರನೇಯ ದಿನ ರಾಜ್ಯದ ಕೆಲ ಪ್ರಮುಖ ಪತ್ರಿಕೆಗಳು ಕೂಡ ಆಂಗ್ಲ ಪತ್ರಿಕೆಯ ಸುದ್ದಿಯನ್ನ ಯಥಾವತ್ತು ಅನುವಾದ ಮಾಡಿ ಪ್ರಕಟಿಸಿದ್ದವು. ವಿಪರ್ಯಾಸವೆಂದರೆ, ಸುದ್ದಿಯ ನೈಜತೆ ತಿಳಿಯುವದಿರಲಿ ಸುದ್ದಿಯನ್ನೂ ಎಡಿಟ್ ಮಾಡದೇ ನಕಲಿಸಿ ಅಂಟಿಸಿದ‌ ಸುದ್ದಿಯಾಗಿತ್ತು

ಇದೆಲ್ಲದೆ ಪರಿಣಾಮ‌ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಾಧಕ ಮಧು ಎಂಬಾತನಿಗೆ ಅಭಿನಂದನೆಗಳ ಸುರಿಮಳೆಯ ಜೊತೆಗೆ ಸುದ್ದಿ ಸಖತ್ ವೈರಲ್ ಆಗಿತ್ತು.

ಇದನ್ನರಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ಸಂಸ್ಥೆಯ ವತಿಯಿಂದ ಅಭಿನಂದನಾ ಪತ್ರವನ್ನ ನೀಡಿದರು. ಅಷ್ಟೆ ಯಾಕೆ , ಬಿಎಂಟಿಸಿ ಎಂಡಿ ಶಿಖಾ ಕೂಡ ಆತನನ್ನ ಸಂದರ್ಶನಕ್ಕೆ ತಯಾರಿ ಮಾಡುತ್ತಿದ್ದಾರೆಂಬ ಸುದ್ದಿಗಳು ಪ್ರಕಟವಾದವು.

ಒಂದು ನೈಜ ಸುದ್ದಿಗಿಂತ ಒಂದು ಸುಳ್ ಸುದ್ದಿ ಹರಡುವಿಕೆಯ ವೇಗ ಹೆಚ್ಚು ಎಂಬುದು ಈ ಸುದ್ದಿಯಿಂದ ಮತ್ತೊಮ್ಮೆ ಸಾಬೀತಾಯ್ತು. ವರದಿಗಳನನ್ನ ಪ್ರಕಟಿಸುವ ಮುನ್ನ ಅವುಗಳ ನೈಜತೆ ಪರಿಶೀಲಿಸುವ ಕನಿಷ್ಟತೆ ವೃತ್ತಿ ಪರತೆ ಮೆರೆಯುವ ಕೆಲಸಕ್ಕೆ ಕೆಲ ಮಾಧ್ಯಮಗಳು ಮುಂದಾಗದಿದ್ದು‌ ಸೋಜಿಗದ ಸಂಗತಿಯಾಗಿದೆ.

ಈ ಸುಳ್ ಸುದ್ದಿಯ ಸ್ವಾರಸ್ಯಕರ ಸಂಗತಿ ಎಂದರೆ ಸುದ್ದಿಯ ಅಸಲಿಯತ್ತು ತನಿಖೆಯಿಂದ ಬಹಿರಂಗವಾಗಿಲ್ಲ. ನಕಲಿ ಸಾಧಕ ಮಧು ಸ್ವಯಂ ತಪ್ಪೊಪ್ಪೊಗಿಯಿಂದ ನೈಜತೆ ಹೊರಬಿದ್ದಿದೆ.

ಸುದ್ದಿಯನ್ನು ನಂಬಿ ನಿಗಮದ ಉನ್ನತ ಅಧಿಕಾರಿಗಳು, ಸಚಿವರು ಈಗ ಜನರ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?