Monday, December 11, 2023
spot_img
HomeUncategorizedಈಜಾಡಲು ಹೋಗಿ ಸಾವು

ಈಜಾಡಲು ಹೋಗಿ ಸಾವು

Publicstory


ಮಧುಗಿರಿ : ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ಶುಕ್ರವಾರ ನಡೆದಿದೆ.

ತುಮಕೂರಿನ ಗುಬ್ಬಿ ಗೇಟ್ ನಿವಾಸಿ ಆಸೀಫ್ (21) ಮೃತಪಟ್ಟ ದುರ್ದೈವಿ. ತುಮಕೂರಿನಿಂದ ಮೂವರು ಸ್ನೇಹಿತರೊಂದಿಗೆ ಸಿದ್ದಾಪುರದ ದರ್ಗಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಿದ್ದಾಪುರ ಕೆರೆಯಲ್ಲಿ ಮೂವರು ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದಾರೆ. ಆಸೀಫ್ ಈಜಾಡುತ್ತಿದ್ದಾಗ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಆತನ ಸ್ನೇಹಿತರು ಚೀರಾಟದಿಂದ ಅಕ್ಕ – ಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಧಾವಿಸಿ ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.ತಕ್ಷಣ ಕಾರ್ಯಪ್ರೌವೃತ್ತರಾದ ಅಗ್ನಿಶಾಮ ಠಾಣೆಯ ಸಿಬ್ಬಂಧಿಗಳು ಆಸೀಫ್ ಮೃತ ದೇಹವನ್ನು ಅರ್ಧ ತಾಸು ಹುಟುಕಾಟ ನಡೆಸಿದ ನಂತರ ದೇಹ ಪತ್ತೆಯಾಯಿತು. ಈ ವಿಷಯ ತಿಳಿದ ನೂರಾರು ಜನರು ಕೆರೆಯ ಸಮೀಪ ಜಮಾಯಿಸಿದರು.ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು