Sunday, July 21, 2024
Google search engine
Homeತುಮಕೂರು ಲೈವ್ಉದ್ಯಮಿಗಳು, ಶ್ರೀಮಂತರು ನೆರವಿನ ಕೈಚಾಚಲಿ: ಸುರೇಶಗೌಡ

ಉದ್ಯಮಿಗಳು, ಶ್ರೀಮಂತರು ನೆರವಿನ ಕೈಚಾಚಲಿ: ಸುರೇಶಗೌಡ

Publicstory. in


ನಾಗವಲ್ಲಿ: ಕರೊನಾ, ಲಾಕ್ ಡೌನ್ ಕಾರಣದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಾಂತರ ಕ್ಷೇತ್ರದಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಉದ್ಯಮಿಗಳು, ಶ್ರೀಮಂತರು, ಸಾಪ್ಟವೇರ್ ಎಂಜಿನಿಯರ್ ಗಳು ಕ್ಷೇತ್ರಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಮನವಿ ಮಾಡಿದರು.


ಕಾರ್ಟೂನ್ ಕಾರ್ನರ್: ಮುಸ್ತಫ ಕೆ.ಎಂ. ರಿಪ್ಪನ್ ಪೇಟೆ


ನಾಗವಲ್ಲಿ ಬಡ ಜನರಿಗೆ ಆಹಾರ ಸಾಮಾಗ್ರಿ, ಮಾಸ್ಕ್ ವಿತರಿಸಿ ಮಾತನಾಡಿದರು. ಎಲ್ಲರೂ ಸಹಾಯದ ಹಸ್ತ ಚಾಚಬೇಕಾಗಿದೆ. ಈಗಾಗಲೇ ಅವರರವರ ನೆಲೆಯಲ್ಲಿ ಸಹಾಯ ಮಾಡುತ್ತಿದ್ದೇವೆ. ಇದರಲ್ಲಿ ಯಾರೂ ಯಾವುದೇ ರಾಜಕೀಯ ಹಿತಾಸಕ್ತಿ ಹುಡುಕಬಾರದು. ಈಗ ನಾವು ಮಾಡುತ್ತಿರುವ ನೆರವಿನ ಕೆಲಸ ಏನೇನು ಸಾಲದಾಗಿದೆ ಎಂದು ನೊಂದು ನುಡಿದರು.

ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾದೆ. ಮುಂದೆ ಅವರ ಮಕ್ಕಳ ಶಿಕ್ಷಣ ಕೊಡಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಮಣ್ಣಿನ ಋಣ ತೀರಿಸಲು ದಾನಿಗಳು ಮುಂದೆ ಬರಬೇಕು, ಪ್ರತಿಭಾವಂತ ಬಡ ಮಕ್ಕಳನ್ನು ಶೈಕ್ಷಣಿಕ ದತ್ತು ತೆಗೆದುಕೊಂಡು ಉನ್ನತ ಶಿಕ್ಷಣ ಕೊಡಿಸಬೇಕು. ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ನೀಡಿಸಬೇಕು. ಆಗಷ್ಟೇ ಬಡವರು ಒಂದಿಷ್ಟು ನಿರಾಳರಾಗಬಹುದು ಎಂದು ಅಭಿಪ್ರಾಯಪಟ್ಟರು.

ಕೆರೆ ತುಂಬಿಸದಿದ್ದರೆ ಈ ಕಷ್ಟ ಬರುತ್ತಿರಲಿಲ್ಲ: ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಿದ್ದರೆ ರೈತರಿಗೆ ಇಷ್ಟೊಂದು ಕಷ್ಟ ಬರುತ್ತಿರಲಿಲ್ಲ. ನೀರಿಲ್ಲದ ಕಾರಣ ಸಾವಿರಾರು ಕೊಳವೆಬಾವಿಗಳು ಒಣಗಿಹೋಗಿವೆ. ಇದು ರೈತರನ್ನು ಮತ್ತಷ್ಟ ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

ತಾವು ಶಾಸಕರಾಗಿದ್ದಾಗ ಪ್ರತಿ ಹೋಬಳಿಗೊಂದು ಶಾಲೆಗಳನ್ನು ಅಭಿವೃದ್ಧಿಪಡಿಸಿದೆ. ಈಗ ಈ ಶಾಲೆಗಳಲ್ಲಿ ವಿದ್ಯಾರ್ಥಗಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಿದೆ. ಇದು ಸಂತಸ ತರುವ ವಿಷಯವಾಗಿದೆ ಎಂದರು. ನಾಗವಲ್ಲಿ ಪಂಚಾಯಿತಿ ಹಲವು ಗ್ರಾಮಗಳಿಗೆ ಮನೆ ಮನೆಗೆ ಆಹಾರದ ಕಿಟ್, ಮಾಸ್ಕ್ ವಿತರಿಸುವ ಕೆಲಸಕ್ಕೂ ಚಾಲನೆ ನೀಡಿದರು. ಬಿಜೆಪಿಯ ಹಲವು ಮುಖಂಡರು, ಗ್ರಾಮ ಪಂಚಾಯತ್ತಿ ಸದಸ್ಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?