ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ವೀಕ್ಷಿಸಿದರು
Publicstory.in
ಮಧುಗಿರಿ : ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಪ್ರಾರಂಭಿಸುತ್ತಿರುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತಿದೆ.
ಐ.ಡಿ.ಹಳ್ಳಿ ಗ್ರಾಮದಿಂದ ಮಧುಗಿರಿ ಡಿಸಿಸಿ ಬ್ಯಾಂಕ್ ತೆರಳಬೇಕಾದರೆ ದಿನ ವಿಡಿ ಸಮಯ ವ್ಯರ್ಥ ವಾಗುವ ಜೊತೆಗೆ ಬಸ್ ನಲ್ಲೇ ತೆರಳಬೇಕಾಗಿರು ವುದರಿಂದ ಹಣ ಕೂಡ ಖರ್ಚಾಗುತ್ತಿತ್ತು. ಆದರೆ ನಮ್ಮ ಗ್ರಾಮದಲ್ಲೇ ಬ್ಯಾಂಕ್ ಪ್ರಾರಂಭವಾಗುತ್ತಿರುವುದರಿಂದ ಸಮಯ ಹಾಗೂ ಹಣ ಕೂಡ ಉಳಿತಾಯ ವಾಗುತ್ತಿದೆ ಎಂದು ಹರ್ಷ ವ್ಯಕ್ಯಪಡಿಸುತ್ತಿದ್ದಾರೆ.
ಹಣ ಹಾಗೂ ಬಂಗಾರದ ಒಡವೆಗಳ ಕಳ್ಳತನ ಹೆಚ್ಚಾಗುತ್ತಿದ್ದು, ಹಣ ಮತ್ತು ಒಡವೆ ಗಳನ್ನು ಬ್ಯಾಂಕಿನ ಲಾಕರ್ ನಲ್ಲಿಡುವ ಮೂಲಕ ಜೋಪಾನ ಕೂಡ ಮಾಡಬಹುದಾಗಿದೆ ಎಂದು ಹೇಳುತ್ತಾರೆ.
ಗ್ತಾಮೀಣ ಪ್ರದೇಶದಲ್ಲಿ ವಾಣಿಜ್ಯ ಬ್ಯಾಂಕ್ ಮುಚ್ಚುತ್ತಿವೆ. ಆದರೆ ಸಹಕಾರ ಬ್ಯಾಂಕ್ ಶಾಖೆ ತೆರೆಯುತ್ತಿರುವುದು ಗಮನಾರ್ಹವಾಗಿದೆ.
ರಾಜಣ್ಣ ಬಗ್ಗೆ ಮೆಚ್ಚುಗೆ
ಈ ಭಾಗದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಪ್ರಾರಂಭಿಸುತ್ತಿರುವುದಕ್ಕೆ ರಾಜ್ಯ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪ್ರಯತ್ನಕ್ಕೆ ಗ್ರಾಹಕರು ಮೆಚ್ಚುಗೆ ವ್ಯಕ್ತವಾಗುತ್ತಿದೆ.
Comment here