Saturday, July 27, 2024
Google search engine
Homeತುಮಕೂರು ಲೈವ್ಕಳ್ಳನಕೆರೆಗೆ ಬಂದೇ ಬಿಟ್ಟವು ಗಿಡಗಳು...

ಕಳ್ಳನಕೆರೆಗೆ ಬಂದೇ ಬಿಟ್ಟವು ಗಿಡಗಳು…

ತುರುವೇಕೆರೆ: ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಹಲವೆಡೆ ಗಿಡಗಳನ್ನು ಶುಕ್ರವಾರ ನೆಡಲಾಯಿತು.

ಅರಣ್ಯ ಇಲಾಖೆಗಳ ವತಿಯಿಂದ ಕಳ್ಳನಕೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂರಾರು ವಿವಿಧ ಬಗೆಯ ಸಸಿಗಳನ್ನು ಶಾಸಕ ಮಸಾಲ ಜಯರಾಂ ನೆಟ್ಟು ನೀರುಣಿಸಿದರು. ಗ್ರಾಮಸ್ಥರಿಗೆ ಹಾಗು ಶಾಲಾ ಶಿಕ್ಷಕರುಗಳಿಗೆ ಸಸಿಗಳನ್ನು ಚನ್ನಾಗಿ ಬೆಳೆಸಬೇಕೆಂದು ಮನವಿ ಮಾಡಿದರು.

ತಹಶೀಲ್ದಾರ್ ಆರ್.ನಯಿಂಉನ್ನೀಸಾ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಗಿಡಗಳನ್ನು ನೆಟ್ಟು ಸಿಬ್ಬಂದಿಗಳಿಗೆ ಗಿಡಗಳನ್ನು ಬೆಳಸಿ ಪರಿಸರ ಉಳಿಸೋಣವೆಂದು ಕಿವಿ ಮಾತು ಹೇಳಿದರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಕೋರ್ಟ್ ಆವರಣದಲ್ಲಿ ನ್ಯಾಯಾದೀಶರ ಸಮ್ಮುಖದಲ್ಲಿ ವೈವಿಧ್ಯ ಬಗೆಯ ಗಿಡಗಳನ್ನು ನೆಡಲಾಯಿತು. ಹಾಗು ತಾಲ್ಲೂಕಿನ ಎಲ್ಲ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಇನ್ನು ಕೆಲವೆಡೆ ವಿವಿಧ ಸಂಘ ಸಂಸ್ಥೆಗಳಿಂದ ಸಸಿ ನೆಟ್ಟಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶ ಬಾಲಸುಬ್ರಹ್ಮಣ್ಯಂ, ಸಿವಿಲ್ ನ್ಯಾಯಾಧೀಶ ರಮೇಶ್ಬಾಬು, ಅರಣ್ಯ ವಲಯಾಧಿಕಾರಿ ನಿಸ್ಸಾರ್ ಅಹ್ಮದ್ ಚುನಾವಣಾ ಇಲಾಖೆಯ ಕಾಂತರಾಜ್, ಕಂದಾಯಾಧಿಕಾರಿ ಶಿವಕುಮಾರ್, ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?