Wednesday, April 24, 2024
Google search engine
Homeಪೊಲಿಟಿಕಲ್ಕೆಪಿಸಿಸಿ ಗದ್ದುಗೆಗೆ ಡಿಕೆಶಿ ಪಟ್ಟು

ಕೆಪಿಸಿಸಿ ಗದ್ದುಗೆಗೆ ಡಿಕೆಶಿ ಪಟ್ಟು

ನವದೆಹಲಿ/ಬೆಂಗಳೂರು: ಶತಾಯಗತಾವಾಗಿ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಮೇಲೆ ಕೂರಲು ಕಸರತ್ತು ನಡೆಸಿರುವ ಡಿಕೆ ಶಿವಕುಮಾರ್ ಮಧ್ಯಪ್ರದೇಶದ ಬಗಲಾಮುಖಿಗೆ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ದೆಹಲಿ ವಿಮಾನ ಏರಿದ್ದು, ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದರು.

ವೇಣುಗೋಪಾಲ್ ಭೇಟಿ ಬಳಿಕ ಡಿಕೆಶಿ ಹೇಳಿದ್ದೇನು..?


ಯಾರನ್ನು ಭೇಟಿಯಾಗಲು ದೆಹಲಿ ಬಂದಿಲ್ಲ ಎನ್ನುತ್ತಲೇ ಶನಿವಾರ ಬೆಳಗ್ಗೆ ಎಐಸಿಸಿ ಕಚೇರಿಗೆ ಭೇಟಿ ನೀಡಿ. ವೇಣುಗೋಪಾಲ್ ಜತೆ 10 ನಿಮಿಷ ಮಾತುಕತೆ ನಡೆಸಿದರು.

ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಯೇ ಬೇಡ ಎಂದು ಪಟ್ಟು ಹಿಡಿದಿರುವ ಡಿಕೆಶಿ, ಕಾರ್ಯಧ್ಯಕ್ಷರ ನೇಮಕದಿಂದಾಗುವ ದುಷ್ಟಪರಿಣಾಮಗಳನ್ನು ವೇಣುಗೋಪಾಲ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಉನ್ನತ ಮಾಹಿತಿಗಳಿಂದ ತಿಳಿದುಬಂದಿದೆ.

ಮೂರ್ನಾಲ್ಕು ಕಾರ್ಯಾಧ್ಯಕ್ಷರ ನೇಮಕದಿಂದ ಪಕ್ಷದ ಸಂಘಟನೆ ಕಷ್ಟ ಕಷ್ಟವಾಗುತ್ತದೆ.

ಕಾರ್ಯಾಧ್ಯಕ್ಷರ ಹುದ್ದೆಗಳು ಜಾಸ್ತಿಯದಂತೆ ಪವರ್ ಸೆಂಟರ್‌ಗಳು ಹೆಚ್ಚಾಗುತ್ತವೆ.

ಬಣ ರಾಜಕಾರಣ ಶುರು


ರಾಜಕಾರಣದಲ್ಲಿ ಯಾರ ಮೇಲೆ ಕೇಸ್ ಇಲ್ಲ ಹೇಳಿ.. ಈ ಬಗ್ಗೆ ಯೋಚನೆ ಅನಗತ್ಯ.

ಹೀಗೆ ಡಿಕೆ ಶಿವಕುಮಾರ್ ತಮ್ಮ ಅಭಿಪ್ರಾಯಗಳನ್ನು ವೇಣುಗೋಪಾಲ್ ಮುಂದೆ ಹೇಳಿದರು. ಬಳಿಕ ವೇಣುಗೋಪಾಲ್ ನಿಮ್ಮೆಲ್ಲಾ ಅಭಿಪ್ರಾಯವನ್ನು ಮೇಡಂಗೆ (ಸೋನಿಯಾ ಗಾಂಧಿ) ತಿಳಿಸುತ್ತೇನೆ ಎಂದು ಹೇಳಿ ತೆರಳಿದರು.

ಬೆಂಗಳೂರಿನಲ್ಲಿ ಸಿದ್ದು ಬಣದ ಸಭೆ:


ದೆಹಲಿಯಲ್ಲಿ ಡಿಕೆಶಿ ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಮಾಜಿ ಸಿದ್ದರಾಮಯ್ಯನವರ ತಂಡದಲ್ಲಿ ಗುರುತಿಸಿಕೊಂಡಿರುವ ನಾಯಕರು ಗುಪ್ತವಾಗಿ ಸಭೆ ನಡೆಸಿದ್ದಾರೆ.
ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಾಂಗ್ರೆಸ್‌ನಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಕಾರ್ಯಧ್ಯಕ್ಷರ ನೇಮಕವಾಗುತ್ತಾ ಅಥವಾ ಇಲ್ಲ ಎನ್ನುವುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?