Saturday, April 13, 2024
Google search engine
Homeತುಮಕೂರ್ ಲೈವ್ಕೇಳು ಮಗುವೇ ಕಥೆ

ಕೇಳು ಮಗುವೇ ಕಥೆ

Publicstory.in


ರಾಣಿ ಚಂದ್ರಶೇಖರ್ ಕತೆ ಹೇಳಿದರು.

ತುಮಕೂರು; ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ, ಪ್ರತಿ ಶನಿವಾರ ಕನ್ನಡ ಶಾಲೆಯ ಮಕ್ಕಳಿಗೆ ಕಥೆ ಹೇಳಲು ಹಮ್ಮಿಕೊಂಡಿರುವ ಕೇಳು ಮಗುವೇ ಕಥೆಯ ಸರಣಿಯ ಐದನೇ ಕಾರ್ಯಕ್ರಮವನ್ನು ತುಮಕೂರಿನ ಹೊರಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನಡೆಸಲಾಯಿತು.

ಲೇಖಕಿ ರಾಣಿಚಂದ್ರಶೇಖರ್ ಅವರು ಕುವೆಂಪುರವರ ನನ್ನ ಗೋಪಾಲ ನಾಟಕವನ್ನು ಕಥೆಯಾಗಿಸಿ ಮಕ್ಕಳಿಗೆ ಚೆಂದವಾಗಿ ಹೇಳಿದರು .

ಅತಿಥಿಗಳಾಗಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷೆ ಸಿ.ಎನ್.ಸುಗುಣಾದೇವಿ ಕಥೆ ಕೇಳುವುದರಿಂದ ಮಕ್ಕಳಲ್ಲಿ ಆಲಿಸುವ ಗುಣ ಬೆಳೆಯುತ್ತದೆ , ಕಥೆ ಹೇಳುವ ಮೂಲಕ ಮಕ್ಕಳಲ್ಲಿ ಬುದ್ದಿ ಶಕ್ತಿ ತೀಕ್ಷಣಗೊಳ್ಳುತ್ತದೆ.,ವಿದ್ಯೆ ಕಲಿಸುವ, ,ಚಾಕಚಕ್ಯತೆ ಬೆಳೆಸುವ ವಿಧಾನ ಹಿಂದಿನಿಂದಲೂ ನಮ್ಮಲ್ಲಿ ಇರುವುದಾಗಿ ಹೇಳಿ ,ಪಂಚತಂತ್ರ ಕಥೆಗಳನ್ನು ಉದಾಹರಿಸಿದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಮಾತನಾಡಿ ,ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ಯು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವ, ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸಂಘವು ,ಕೇಳು ಮಗುವೇ ಕಥೆಯಾ ಸರಣಿ ಕಾರ್ಯಕ್ರಮ ಮುನ್ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಡಿ.ಗಿರಿಜಾ ಅಧ್ಯಕ್ಷತೆ ವಹಿಸಿದ್ದರು. ಸದರಿ ಶಾಲೆಯಲ್ಲಿ ಎಪ್ಪತ್ತು ಮಕ್ಕಳು ಹಾಜರಿದ್ದು ಎಲ್ಲರಿಗೂ ಕಥೆಪುಸ್ತಕ ,ಪೆನ್ನು ಪೆನ್ಸಿಲ್ ಕ್ರಯಾನ್ಸ್ ಮತ್ತು ಬಾಳೆ ಹಣ್ಣು ವಿತರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?