Sunday, December 10, 2023
spot_img
Homeತುಮಕೂರು ಲೈವ್ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ

ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ

Publicstory


ಗುಬ್ಬಿ: ಕಸಬ ಹೋಬಳಿ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ಚಿರತೆಯು ದಾಳಿ ಮಾಡಿ ಶಿವಣ್ಣ ಎಂಬುವರಿಗೆ ಸೇರಿದ 8 ಕುರಿಗಳನ್ನು ಸಾಯಿಸಿರುವ ಘಟನೆ ನಡೆದಿದೆ. ರಾತ್ರಿ ಕುರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿದ್ದ ವೇಳೆಯಲ್ಲಿ ಚಿರತೆಯು ದಾಳಿ ಮಾಡಿ ಮಾಡಿದೆ ಎಂದು ರೈತ ಶಿವಣ್ಣ ತಿಳಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಧಿಕಾರಿ ದುಗ್ಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ,ಚಿರತೆ ದಾಳಿಯಿಂದ ಸತ್ತಿರುವ ಕುರಿಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚಿರತೆಯನ್ನು ಸೆರೆಯನ್ನು ಹಿಡಿಯಲು ಆಯಕಟ್ಟಿನ ಜಾಗದಲ್ಲಿ ಬೋನನ್ನು ಇಡುವ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು