Thursday, July 25, 2024
Google search engine
Homeಜನಮನಕೊರೊನಾ ನಿಯಂತ್ರಣ: ತುಮಕೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳಿವೆ ಎಂದ ಮಂಜು‌ನಾಥ್

ಕೊರೊನಾ ನಿಯಂತ್ರಣ: ತುಮಕೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳಿವೆ ಎಂದ ಮಂಜು‌ನಾಥ್

ತುಮಕೂರು‌ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ‌ ಮಂಜುನಾಥ್ ಹೆತ್ತೇನಹಳ್ಳಿ ಅವರು‌ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ‌ ಸಿಗದ ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ಎಡವುತ್ತಿರುವ ಬಗ್ಗೆ, ಗುಣಮಟ್ಟದ ಆರೋಗ್ಯ ಸೇವೆ, ಹೆಚ್ಚು ಸಾವು ಸಂಭವಿಸಲು ಕಾರಣವೇನು ಎಂದು ಪ್ರಶ್ನೆ ಕೇಳಿ ನೀಡಿರುವ ಪತ್ರಿಕಾ ಹೇಳಿಕೆಯನ್ನು ಇಲ್ಲಿ ಯಥಾವತ್ ಪ್ರಕಟಿಸಲಾಗಿದೆ.

ತುಮಕೂರು: ಕೊರೋನಾ ಮಹಾಮಾರಿಗೆ ಜಗತ್ತೇ ತಲ್ಲಣಿಸಿದೆ, ಇದಕ್ಕೆ ತುಮಕೂರು ಹೊರತಲ್ಲಾ, ತುಮಕೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹೆಚ್ಚುತ್ತಿರುವ ಸೋಂಕು ತುಮಕೂರು ಜಿಲ್ಲೆಯಲ್ಲಿ ದಿನಗೂಲಿ ಕಾರ್ಮಿಕರನ್ನು, ರೈತರನ್ನು, ವಿಧ್ಯಾರ್ಥಿಗಳನ್ನು ಮತ್ತು ಯುವ ಜನತೆಯನ್ನು ಆತಂಕದಲ್ಲಿಟ್ಟಿರುವುದು ಶೋಚನೀಯ & ಗಂಭೀರ ವಿಷಯವಾಗಿದೆ.

“ಸಮಸ್ಯೆ ಎಲ್ಲಿ ಹೆಚ್ಚಿರುತ್ತದೊ ಅಲ್ಲೇ ಪರಿಹಾರವಿರುತ್ತದೆ” ಎಂಬ ಹಿರಿಯರ ನಾಣ್ಣುಡಿಯನ್ನು ಸರ್ಕಾರ & ಜಿಲ್ಲಾಡಳಿತ ಮರೆತಂತೆ ಕಾಣುತ್ತಿದೆ & ಸತ್ಯವೂ ಕೂಡಾ ಆಗಿದೆ. ಇಂದಿಗೆ ತುಮಕೂರಿನ ಒಟ್ಟು ಕೊರೋನಾ ಸೋಂಕಿತರು ೫೬೨ ಆಗಿದೆ.

ಆದಾಗ್ಯೂ ಕೂಡಾ ವಿಪರ್ಯಾಸ ಎಂದರೆ ಇಲ್ಲಿಯವರೆವಿಗೂ ಅಧಿಕಾರಿಗಳು AC ಕೊಠಡಿಬಿಟ್ಟು ಹೊರಬರದೇ ಇರುವುದು, ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲಿ, ಜಿಲ್ಲಾ ಸರ್ಜನ್ ಆಗಲಿ ಇದುವರೆವಿಗೂ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿಯೇ ಇಲ್ಲ.

. ಒಂದು ಸೀಲ್ ಡೌನ್ ಪ್ರದೇಶಕ್ಕೆ ಮೀಸಲಿಟ್ಟ ಹಣವೆಷ್ಟು.? ಸೋಂಕಿತ ವ್ಯಕ್ತಿಗೆ ಚಿಕಿತ್ಸೆಗೆ ಬರಿಸುವ ವೆಚ್ಚವೆಷ್ಟು..?

ರೋಗಿಗೆ ಯಾವ ರೀತಿಯಾದ ಪೋಷಣೆ ಹಾರೈಕೆ & ಶುಶ್ರುಷೆ ಮಾಡಲಾಗುತ್ತಿದೆ.‌ ಅವರಿಗೆ ಪ್ರತಿದಿನ‌ ಎಷ್ಟು‌ ಖರ್ಚು ಮಾಡಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಹೇಳಿಯೇ ಇಲ್ಲ. ಸುಮ್ಮನಿರುವುದು ಹತ್ತು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ನಿಮ್ಮ ಹೇಳಿಕೆಗೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಾಗಿದೆ, ಮಾತಿನಲ್ಲೇ ಅರಮನೆ ಕಟ್ಟಿ ಪೈಸೆಯಷ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದೇ ಕಣ್ಣೊರಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ. ಇದನ್ನು ನೋಡಿಯೇ,

ಶರಣರು ಹೀಗೇಳೆದ್ದಾರೆ,
“ಚಿತ್ರದ ಹೂವು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದರೆ ಸುಖವಿಲ್ಲಾ, ಮೆಲ್ಲಿದರೇ ರುಚಿಯಿಲ್ಲಾ”, ಎಂದು.

ಚಿತ್ರದ ಜೊತೆ ವಿಚಿತ್ರವನ್ನೇ ತೋರಿಸುತ್ತಿರುವ ನೀವು ಜನಸಾಮಾನ್ಯರಿಗೆ ನೈಜ ಸ್ಥಿತಿ ಹೇಳಿ.

ಅಘೋಷಿತ ವಿಪತ್ತಿನಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸದಿದ್ದರೇ ಹೇಗೆ..? ಬಹುತೇಕ ಜಿಲ್ಲೆಗಳಲ್ಲಿ ICU ನಲ್ಲಿದ್ದ ಕೊರೋನಾ ರೋಗಿಗಳು ಗುಣಮುಖರಾಗಿ ಬಂದಿದ್ದಾರೆ & ಬರುತ್ತಿದ್ದಾರೆ. ಆದರೆ ತುಮಕೂರು ಕೋವಿಡ್ ಆಸ್ಪತ್ರೆಯಲ್ಲೇಕೆ ಸಾಧ್ಯವಾಗುತ್ತಿಲ್ಲಾ ಎನ್ನುವ ಪ್ರಶ್ನೆಯನ್ನು ಅಧಿಕಾರಿಗಳು ನೇರವಾಗಿ ತಮ್ಮನ್ನು ತಾವೇ ಕೇಳಿಕೊಳ್ಳಬೇಕಿದೆ..? ಜೊತೆಗೆ ಉತ್ತರವನ್ನು ನೀಡಬೇಕಿದೆ.

ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ರವರು ಸರ್ಕಾರಗಳ ಕುರಿತು, “ಸರ್ಕಾರಗಳು ಇರಬೇಕಾಗಿರುವುದು ಬಡವರಿಗಾಗಿಯೇ ಹೊರತು ಶ್ರೀಮಂತರಿಗಲ್ಲಾ” ಎಂದೇಳುತ್ತಾರೆ. ವಾಸ್ತವ ಹೇಗಿದೆಯೆಂದರೇ ತುಮಕೂರು ಆಸ್ಪತ್ರೆಗೆ ಬಡವನೇನಾದರೂ ICU ಗೆ ಹೋದರೇ ಜೀವಂತವಾಗಿ ಹೊರಬರುವುದೆ ಸಾಧ್ಯವಿಲ್ಲದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿ & ಸರ್ಕಾರ ಪ್ರಜೆಗಳ ಮನೆಬಾಗಿಲನ್ನು ಕಾಯಬೇಕಾಗಿತ್ತು, ವಿಪರ್ಯಾಸ ಮುಗ್ದ ಅಮಾಯಕ ನಮ್ಮ ಜನಗಳು ಸರ್ಕಾರ & ಅಧಿಕಾರಿಗಳ ಮನೆ ಬಾಗಿಲು ತಟ್ಟಬೇಕಾಗಿದೆ

ಕೆಳಹಂತದ‌ ಕೋವಿಡ್ ಸಿಬ್ಬಂದಿ‌ ನೋವು‌ ಹೇಳತೀರಲಾಗಿದೆ. ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಏಕೆ?

ಸಾಮಾನ್ಯ ಜನಗಳ ಸಹನೆಯನ್ನು ಪರೀಕ್ಷಿಸದಿರಿ, ಸಾಮಾನ್ಯ ಜನಗಳ ಆಕ್ರೋಶದ ಕಟ್ಟೆ ಹೊಡೆದರೇ ಗಂಭೀರವಾದ ಪರಿಸ್ಥಿತಿ ಎದುರಿಸಬೇಕಾಗುತ್ತೆ. ಈಗಲಾದರೂ ಜಿಲ್ಲಾಧಿಕಾರಿಗಳ ನೇತೃತ್ವ, ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಮುಂದಾಗಬೇಕಿದೆ.

ಕೊರೋನಾ ಹಣಕಾಸಿನ ನಿರ್ವಹಣೆಯನ್ನು ಪಾರದರ್ಶಕವಾಗಿ ಮಾಡಿ, ಸಾರ್ವಜನಿಕವಾಗಿ ಮಾಹಿತಿ ತಿಳಿಸಿ. AC ಕೊಠಡಿ ಬಿಟ್ಟು ಕೋವಿಡ್ ಕೇರ್ ಸೆಂಟರ್ & ಸೀಲ್ ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಜನಸಾಮಾನ್ಯರಿಗೆ ವಸ್ತುಸ್ಥಿತಿಯನ್ನು ನೈಜವಾಗಿ ತಿಳಿಸಿ ಧೈರ್ಯ ತುಂಬುವಂತಹ ಕೆಲಸ ಮಾಡಬೇಕಿದೆ.

ರೋಗಿಯ ಶುಶ್ರುಷೆಯನ್ನು ಈಗ ಉನ್ನತಿಕರಿಸಬೇಕಿರುವ ಅನಿವಾರ್ಯ & ಅವಶ್ಯಕತೆ ತುಂಬಾ ಇದೆ.

ಸಂವಿಧಾನಾತ್ಮಕ ಹಕ್ಕುಗಳಾದ ಆಹಾರ, ಆರೋಗ್ಯ, ಶಿಕ್ಷಣ ಇದನ್ನು ಭರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ನಿರ್ವಹಿಸಬೇಕು. ಈಗ ತ್ವರಿತವಾಗಿ ಬೇಕಾಗಿರುವ ಆರೋಗ್ಯವನ್ನು ಕಾಪಾಡಬೇಕಾದ ಗುರುತರವಾದ ಜವಾಬ್ದಾರಿ ಸರ್ಕಾರ & ಜಿಲ್ಲಾಡಳಿತದ ಮೇಲಿದೆ ಎಂಬುದನ್ನು ಅರಿತು ಕೆಲಸ ನಿರ್ವಹಿಸಿದರೆ ಒಳಿತಾಗುತ್ತದೆ. ಇಲ್ಲವೆಂದರೆ ಜನಗಳ ಹಿಡಿಶಾಪಕ್ಕೆ ಗುರಿಯಾಗುತ್ತೀರಿ.


ಮಂಜುನಾಥ್ ಹೆಚ್.ಎನ್(ಹೆತ್ತೇನಹಳ್ಳಿ)
ಮಾಜಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು
ತುಮಕೂರು.
ದೂರವಾಣಿ:- 9916222281

RELATED ARTICLES

3 COMMENTS

  1. ಸೂಕ್ತವಾದ ಪ್ರಶ್ನೆಗಳನ್ನು ಕೇಳಿದ್ದೀರಿ ಜಿಲ್ಲಾಡಳಿತ ಇದಕ್ಕೆ ಉತ್ತರಿಸಬೇಕು, ಜಿಲ್ಲಾ ಡಳಿತದ ಬೇಜವಾಬ್ದಾರಿ ತನವೇ ಕರೋನಾ ಹೆಚ್ಚಲು ಕಾರಣವಾಗಿದೆ.

    • Thank u sir, ಇದಕ್ಕೆ ಉತ್ತರ ಇಲ್ಲಾ ಪರಿಹರಿಸಲಾಗಲಿಲ್ಲಾ ಎಂದಾದರೇ ಅನಿರ್ಧಿಷ್ಟವದಿ ಮುಷ್ಕರಕ್ಕೂ ಯುವಜನತೆ ಸಜ್ಜಾಗಬೇಕಿದೆ..

  2. ತುಮಕೂರಿನ ಜನತೆ ಹಾಗೂ ಎಲ್ಲಾ ರಾಜಕೀಯ ಮುಖಂಡರು ಅಧಿಕಾರಿಗಳು
    ಆದಷ್ಟು ಬೇಗ ಹೆಚ್ಚೆತುಕೊಳ್ಳಬೇಕು . ಮಂಜುನಾಥ್ ಅಣ್ಣ ನ ಪ್ರಶ್ನೆಗೆ ಉತ್ತರ ಸಿಗಬೇಕು..

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?