ಶಿಲ್ಪಾ ತಾರೀಕಟ್ಟೆ
ಗ್ರಹಣದ ಭಯ ಮನೆಗೂ ಮನುಷ್ಯನಿಗೂ ಮನಸ್ಸುಗಳಿಗೂ
ಹಬ್ಬಿಸಿದವರೂ ಯಾರು ಅದೇ ವೇಷ ಹಾಕಿರುವ ಜ್ಯೊತಿಷಿಗಳು.
ನಾವು ತುಂಬಾ ಚಿಕ್ಕ ವರಿದ್ದಾಗು ಯಾವ ಗ್ರಹಣದ ಭಯವೂ ಇರಲಿಲ್ಲ ಅರಾಮಾಗಿ ಆಡಲು ಬಿಡುತ್ತಿದ್ದರು ಈಗ ಮಕ್ಕಳನ್ನು ಒಳಗೆ ಕೂಡಿ ಹಾಕಿದ್ದಾರೆ.
ಭಯಕ್ಕೆ ದಬೆ೯ ಯನ್ನೆ ನೋಡದವರು ದಬೆ೯ ಹುಡುಕಿ ತಂದು ಹುಡುಕಿ ಪ್ರತಿಯೊಂದು ಪದಾರ್ಥಕ್ಕೂ ಹಾಕಿ ಗ್ರಹಣ ಈ ದಿನ ಎಂದು ಕೆಟ್ಟ ದಿನ ಆಚರಿಸುತ್ತಿದ್ದಾರೆ .
ತೋಟದಲ್ಲಿ ಕೆಲಸಕ್ಕೆ ಹೋಗಬೇಕಾದವರೆಲ್ಲ ಮನೆಲೇ ಲಾಕ್ ಆಗಿದ್ದಾರೆ ಗ್ರಹಣ ಶುರುವಾಗುವ ಮುಂಚೆಯೆ ಊಟ ಮುಗಿಸಿದ್ದಾರೆ.
ಹಸು ಕರುಗಳನ್ನು ಕಟ್ಟಿಹಾಕಿ ಮೇವು ಹಾಕಿದ್ದಾರೆ ಆರಾಮಾಗಿ ಮೇಯುವ ಹಸುಗಳೆಲ್ಲ ಮನೆಲಿ ಗ್ರಹಣ ದಿನ ಆಚರಿಸುತ್ತಿದ್ದಾವೆ.
ಬೆಳ್ಳಿಗ್ಗೆ ಎದ್ದು ತೋಟಕ್ಕೆ ಹೋದವರೆಲ್ಲ ನಿಜವಾಗಿಯೂ ತೋಟ ನೋಡಿದರೂ ಇಲ್ಲವೂ ದಬೆ೯ ಮಾತ್ರ ಹುಡುಕಿ ತಂದಿದ್ದಾರೆ .
ಮೊದಲೆಲ್ಲ ಜನ ಅರಾಮಾಗಿದ್ದರು ಭಯ ವಿಲ್ಲದೆ ಮೊದಲೆಲ್ಲ ದಬೆ೯ ಎಂದರೆ ಅದು ಬ್ರಾಹ್ಮಣರ ಸ್ವತ್ತು ಎಂದೆ ಭಾವಿಸಿದ್ದರು.
ಮನೇಯ ಮೇಲಿನ ನೀರಿನ ಟ್ಯಾಂಕ್ ಗಳಿಗೂ ದಬೆ೯ ಯ ದಶ೯ನ ಮಾಡಿಸಿದ್ದಾರೆ.
ಅನಿಸುತ್ತಿದೆ ಮೊದಲಿನ ಜನಗಳೆ ಸ್ವಲ್ಪ ವಿದ್ಯಾವಂತರಂತೆ ವತಿ೯ಸಿತ್ತಿದ್ದರು ಎಂದು ಕಾರಣ ನಿಜವಾಗಿಯೂ ನಾವು ಚಿಕ್ಕವರಿದ್ದಾಗ ಗ್ರಹಣದ ಛಾಯೆ ನಮಗೆ ಬಿದ್ದಿರಲಿಲ್ಲ .
ಅದರ ಭಯವೂ ಹಿರಿಯರು ಹುಟ್ಟಿಸಿರಲಿಲ್ಲ.
ಈಗ ಸಣ್ಣ ಮಕ್ಕಳು ಇಂದು ಗ್ರಹಣ ಅಂತೆ ಗ್ರಹಣ ಎಂದು ಒಳಗೆ ಸೇರುವ ಭಯಕ್ಕೆ ಬಂದು ಬಿಟ್ಟಿದ್ದಾರೆ ಮುಂದಿನ ಪೀಳಿಗೆಯನ್ನು ಮೂಢರಾಗಿಸಿದ್ದಾರೆ.
ಮೊದಲೆಲ್ಲ ಇದರ ಭಯವಿಲ್ಲವೆಂದರೆ ಆಗ ಭಯ ಹುಟ್ಟಿಸುವ ಜ್ಯೆೋತಿಷಿಗಳು ಇರಲಿಲ್ಲ ಅವರನ್ನು ಕೂರಿಸಿ ಗಂಟೆಗಟ್ಟಳೆ ಪ್ರೊಗ್ರಾಮ್ ಕೊಡುವ ಅಂದರೆ ಭಿತ್ತರಿಸುವ ಮಾಧ್ಯಮಗಳು ಇರಲಿಲ್ಲ .
ಊರಿಗೊಂದು ಎರಡು ಟಿ ವಿ ಗಳು ಇರುತ್ತಿದ್ದವೂ. ಈಗ ಇವೆಲ್ಲವೂ ಲಭ್ಯ ಆದರೆ ಯಾವುದರ ಜಾಗ್ರತಿ ಬೇಕೂ ಅದು ಮೂಡಿಸದೆ ಜನರನ್ನು ಹೆದರುವಂತೆ ನೆಮ್ಮದಿ ಇಲ್ಲದಂತೆ ಮಾಡುತ್ತಿವೆ.
ಜನರಲ್ಲೂ ಇದು ಮೂಢ ನಂಬಿಕೆ ಎನ್ನುವ ಸ್ಪಷ್ಠತೆ ಇದೆ ಆದರೂ ಆ ಗುರೂಜಿ ಹೇಳಿದರೂ ಈ ಗುರೂಜಿ ಹೇಳಿದರೂ ಎಂದು ಅವರು ಹೇಳಿದ್ದೆಲ್ಲ ಮಾಡಿಕೊಂಡಿದ್ದಾರೆ .
ಆದರೆ ಮತ್ತೆ ಅವರೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ
ಪಕ್ಷಿ ಪ್ರಾಣಿ ತೆಂಗಿನ ಮರ ಅದರಲ್ಲಿನ ಎಳನೀರು ಕಾಯಿಗೆ ಗ್ರಹಣ ಬಿದ್ದಿಲ್ಲವ ಎಂದು ಪ್ರಶ್ನೆ ಹಾಕಿಕೊಳ್ಳುತ್ತ ನಾವು ಮೂಡರಲ್ಲ ಆದರೆ ಭಯಕ್ಕೆ ಮೂಢರಂತೆ ವತಿ೯ಸುತ್ತಿದ್ದಾರೆ ಎಂದು ಗೊತ್ತಾಗದಂತೆ ತಿಳಿಸುತ್ತಿದ್ದಾರೆ…
ಇದನೆಲ್ಲ ವಿರೋಧಿಸುವವರನ್ನು ಬಲವಂತವಾಗಿ ಮೂಢತೆಗೆ ತಳ್ಳುತ್ತಿದ್ದಾರೆ. ಮುಂದೊದು ದಿನ ಗ್ರಹಣದ ದಿನವನ್ನು ವ್ಯೆಜ್ಞಾನಿಕವಾಗಿ ನಂಬುವಂತಾಗಲಿ ಅದರ ಕೂತೂಹಲಗಳನ್ನು ವೀಕ್ಷಿಸುವಂತಾಗಲಿ ಮಕ್ಕಳನ್ನು ಭಯದಿಂದ ಹೊರತರುವಂತಾಗಲಿ.ಮೂಢನಂಬಿಕೆಗಳಿಂದ ಆಚೆ ಬರುವಂತಾಗಲಿ.
ಗ್ರಹಣದಲ್ಲಿ ಬರೀ ಗಣ್ಣಿನಿಂದ ಸೂರ್ಯ ವೀಕ್ಷಣೆ ಅಪಾಯಕಾರಿ. ಬರೀಗಣ್ಣಿನಿಂದ ವೀಕ್ಷಿಸಬಾರದು.