Friday, March 29, 2024
Google search engine
Homeತುಮಕೂರು ಲೈವ್ಜಾತಿ ವ್ಯವಸ್ಥೆ ಬಲಪಡಿಸುವ ಫ್ಯಾಸಿಸ್ಟ್: ರಾಮಚಂದ್ರನ್

ಜಾತಿ ವ್ಯವಸ್ಥೆ ಬಲಪಡಿಸುವ ಫ್ಯಾಸಿಸ್ಟ್: ರಾಮಚಂದ್ರನ್

ಸಮಾರಂಭದಲ್ಲಿ ಜಿ.ಎಸ್.ಸೋಮಣ್ಣ, ಬರಗೂರು ರಾಮಚಂದ್ರಪ್ಪ, ರಾಮಚಂದ್ರನ್, ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ್ ಇತರರು ಇದ್ದರು

ಕೆ.ಇ.ಸಿದ್ದಯ್ಯ


ತುಮಕೂರು: ಫ್ಯಾಸಿಸ್ಟ್ ಶಕ್ತಿಗಳು ದೇಶದ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿವೆ. ಆ ಶಕ್ತಿಗಳಿಗೆ ಸಂವಿಧಾನ ಮುಖ್ಯವಲ್ಲ. ಬದಲಿಗೆ ಮನುಸ್ಮೃತಿಯೇ ಅವರ ಸಂವಿಧಾನ. ಮನುಸ್ಮೃತಿ ಜಾತಿ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ದಲಿತರ ಮೇಲಿನ ದೌರ್ಜನ್ಯ ‌ಹೆಚ್ಚಿಸುತ್ತದೆ. ಜಾತಿ ವ್ಯವಸ್ಥೆ ಮುಂದುವರೆಯುವಂತೆ ನೋಡಿಕೊಳ್ಳುತ್ತದೆ. ಇದನ್ನು ವಿರೋಧಿಸುವ ಪ್ರಗತಿಪರ ಸಾಹಿತಿಗಳು, ಕಲಾವಿದರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಪ್ರಸಿದ್ದ ಮಲೆಯಾಳಿ ಸಾಹಿತಿ ಹಾಗೂ ಸಿನಿಮಾ ವಿಮರ್ಶಕ ಜಿ.ಪಿ.ರಾಮಚಂದ್ರನ್ ಅಭಿಪ್ರಾಯಪಟ್ಟರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು

ತುಮಕೂರಿನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕತೆ, ಕವನ, ಸಿನೆಮಾ ಎಲ್ಲದರಲ್ಲೂ ರಾಜಕೀಯ ಅಡಗಿದೆ. ರಾಜಕೀಯವಿಲ್ಲದ ಕ್ಷೇತ್ರವೇ ಇಲ್ಲ. ಸಾಹಿತಿಯೂ ಸೇರಿದಂತೆ ಪ್ರತಿಯೊಬ್ಬರೂ ಒಂದಲ್ಲ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿರುತ್ತಾರೆ ತುಮಕೂರಿನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕ್ಷೇತ್ರ ರಾಜಕೀಯದಿಂದ ಕೂಡಿದೆ. ರಾಜಕೀಯ ಪ್ರವೇಶಿಸದ ಕ್ಷೇತ್ರಗಳೇ ಇಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಂಭೀರವಾದ ಮತ್ತು ಆಳವಾದ ರಾಜಕೀಯ ನಡೆಯುತ್ತಿದೆ. ಸಾಹಿತಿಗಳು, ಕಲಾವಿದರು ನಾವೇಕೆ ಬರೆಯುತ್ತಿದ್ದೇವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಶೂನ್ಯ. ಸಾಹಿತಿಗಳು ಒತ್ತಡ ನಿವಾರಣೆಗೆ ಬರೆಯುತ್ತಿರಬಹುದು. ತೃಪ್ತಿಗೆ ಬರೆಯಬಹುದು. ಆದರೆ ಪ್ರತಿಯೊಬ್ಬರೂ ಒದೊಂದು ವಿಷಯವನ್ನು ಪ್ರಚಾರ ಮಾಡುತ್ತಾರೆ. ಅದು ಬಲಪಂಥೀಯ ವಿಚಾರವಿರಬಹುದು. ಎಡಪಂಥೀಯ ವಿಚಾರವಿರಬಹುದು ಎಂದು ತಿಳಿಸಿದರು.

ತುಮಕೂರು ನಗರದ ಕನ್ನಡಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಯುವಬರಹಗಾರರ ಕಾರ್ಯಾಗಾರವನ್ನು ಉದ್ದಾಟಿಸಿ ಅವರು ಮಾತನಾಡಿದರು. ಸಾಹಿತಿಗಳು ಮತ್ತು ಪ್ರಗತಿಪರರು ಜಾತ್ಯತೀತ ನೆಲೆಯಲ್ಲಿ ತಮ್ಮನ್ನು ವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ ಎಂದು ಹೇಳಿದರು.

1930-60ರ ದಶಕದಲ್ಲಿ ಬಲಪಂಥೀಯ ಮತ್ತು ಎಡಪಂಥೀಯ ಸಾಹಿತಿಗಳು ಚಳವಳಿಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರಗತಿಪರರ ಹೋರಾಟಕ್ಕೆ ಅಂದಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಕೂಡ ಬೆಂಬಲ ನೀಡಿದ್ದರು. ಆದರೆ ಇಂದು ಅಂತಹ ವಾತಾವರಣ ಇಲ್ಲ. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳಿಂದ ನಮ್ಮ ನಿಲುವುಗಳು ಬದಲಾಗಿವೆ. ಪ್ರಗತಿಪರರು ಮಾತ್ರ ಸಮಾಜದಲ್ಲಿ ಸೌಹಾರ್ದತೆ, ಶಾಂತಿ, ಸಹಿಷ್ಟುತೆ ನೆಲೆಸುವಿಕೆಗಾಗಿ ಹೋರಾಡುತ್ತಿದ್ದಾರೆ. ಬಲಪಂಥೀಯರು ಇದರಲ್ಲಿ ಭಾಗಿಯಾಗುತ್ತಿಲ್ಲ ಎಂದು ದೂರಿದರು.

ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರ ಹಿಡಿದಿರುವುದರಿಂದ ಸಾಮಾನ್ಯರ ನಂಬಿಕೆಗಳನ್ನು, ನೆಮ್ಮದಿಯನ್ನು, ದೇಶವನ್ನು ಸ್ವಾತಂತ್ರ್ಯ ಮತ್ತು ಮೌಲ್ಯಗಳನ್ನು ನಮ್ಮಿಂದಿ ಕಿತ್ತುಕೊಂಡಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ಎಸ್ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಇಂದಿನ ಸಿನಿಮಾ ಬದಲಾವಣೆಯಾಗಿದೆ. ಮಲ್ಟಿಪ್ಲಕ್ಸ್ , ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಕುಳಿತು ಸಿನೆಮಾ ವೀಕ್ಷಿಸುವವರಿಗಾಗಿ ಚಿತ್ರ ನಿರ್ಮಾಣ ಮಾಡಬೇಕಾಗಿ ಬಂದಿದೆ. ಆಟೋ ಚಾಲಕರು, ರಿಕ್ಷಾವಾಲಾಗಳು, ಜನಸಾಮಾನ್ಯರು ಅಲ್ಲಿಗೆ ಹೋಗಿ ಸಿನೆಮಾ ವೀಕ್ಷಿಸಲು ಸಾಧ್ಯವಿಲ್ಲ. ಅಲ್ಲಿ ಶ್ರೀಮಂತರು ಮಾತ್ರ ಕುಳಿತು ಐಶಾರಾಮಿ ಆಗಿ ಸಿನೆಮಾ ವೀಕ್ಷಿಸಬಹುದಾಗಿದೆ. ಸಾಮಾನ್ಯರಿಗೆ ಅಷ್ಟೊಂದು ಹಣ ತೆತ್ತು ನೋಡಲು ಆಗುತ್ತಿಲ್ಲ. ಹೀಗಾಗಿ ನಾನು ಎಂಬುದು ಮಹತ್ವ ಪಡೆದುಕೊಂಡಿದೆ. ನಾವು ನಗಣ್ಯವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಎಂ.ಶ್ರೀನಿವಾಸಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಭೂಮಿ ಬಳಗದ ಅಧ್ಯಕ್ಷ ಸೋಮಶೇಖರ್, ವಕೀಲ ಎಸ್. ರಮೇಶ್, ಕಾರ್ಯಾಗಾರದ ನಿರ್ದೇಶಕ ಭಕ್ತರಹಳ್ಳಿ ಕಾಮರಾಜ್, ಡಾ.ರಂಗಾರೆಡ್ಡಿ ಕೋಡಿರಾಂಪುರ ಉಪಸ್ಥಿತರಿದ್ದರು.

ಚಾರ್ವಾಕ ಪರಂಪರೆ ಮುಂದುವರೆಯಬೇಕು


  1. ದೇಶದಲ್ಲಿ ಚಾರ್ವಾಕ ಪರಂಪರೆಯನ್ನು ಮುಂದುವರಿಸಬೇಕು. ಈ ಮಾರ್ಗದಲ್ಲಿ ಹೆಜ್ಜೆ ಹಾಕಿದ ಹಲವರನ್ನು ಹತ್ಯೆ ಮಾಡಿದ್ದು ಫ್ಯಾಸಿಸ್ಟ್ ಶಕ್ತಿಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸವಾಲಾಗಿವೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ತಮ್ಮ ವಿರೋಧಿಗಳು ಯಾರು ಎಂಬುದನ್ನು ಗುರುತಿಸಿಕೊಂಡು ಯುದ್ದವನ್ನು ಆರಂಭಿಸಿವೆ. ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟಿಸುವ ಮತ್ತು ಪ್ರಶ್ನಿಸುವ ಯುವಕರನ್ನು ಲೇಖಕರು ಬೆಳೆಸಿಕೊಳ್ಳಬೇಕು .


  1. ರಾಮಚಂದ್ರನ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?