Saturday, April 13, 2024
Google search engine
Homeಜನಮನಜಾನುವಾರುಗಳ ಹಬ್ಬ; ಹೀಗೆ ಮಾಡಿದರೆ ರೋಗ ಬರುವುದಿಲ್ಲವಂತೆ

ಜಾನುವಾರುಗಳ ಹಬ್ಬ; ಹೀಗೆ ಮಾಡಿದರೆ ರೋಗ ಬರುವುದಿಲ್ಲವಂತೆ

ಲೇಖಕರು

ಸ್ಫೂರ್ತಿ ಹೊಸಕೋಟೆ, ವೈ.ಎನ್.ಹೊಸಕೋಟೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಯಲ್ಲಪ್ಪನಾಯಕನ ಹೊಸಕೋಟೆ[ವೈ.ಎನ್.ಹೊಸಕೋಟೆ] ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತಾಪಿವರ್ಗ ದೀಪಾವಳಿ ಹಬ್ಬದ ಸಮಯದಲ್ಲಿ ಗೋವಿನ ಹಬ್ಬ ಆಚರಿಸುವುದು ಈ ಪ್ರದೇಶದ ಸಂಪ್ರದಾಯವಾಗಿದೆ. ಉತ್ತಮ ಫಸಲು ಬಂದು ಹೊಲಗದ್ದೆಗಳು ಹಸಿರಿನಿಂದ ಕಂಗೊಳಿಸುವ ಸಮಯದಲ್ಲಿ ಕೃಷಿಗೆ ಸಹಕರಿಸಿದ ಗೋವು, ಬಸವ, ಕುರಿ, ಮೇಕೆಗಳನ್ನು ಪೂಜಿಸುವ ವಿಧಿಯೇ ಗೋವುಗಳ ಹಬ್ಬವಾಗಿದೆ.

ಅದರಂತೆ ಈ  ವರ್ಷ ವೈ.ಎನ್.ಹೊಸಕೋಟೆ  ರೈತರು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಕಳು ಹಬ್ಬ ಆಚರಿಸಿದರು. ಹಬ್ಬದ ಆಚರಣೆಗಾಗಿ ಊರ ಹೊರವಲಯದಲ್ಲಿ ಆಕಳು ಗೂಡು ಕಟ್ಟಲಾಗಿತ್ತು. ಗ್ರಾಮದೇವತೆ ಗೌರಸಮುದ್ರ ಮಾರಮ್ಮ ಸೇರಿದಂತೆ  ತುಮ್ಮಲಮಾರಮ್ಮ, ನಿಡಗಲ್ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ವಿಗ್ರಹಗಳು ದೇವಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.

ರಾಜ ಮನೆತನದ ಸಿಂಗರಿಸಿದ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯವಿಟ್ಟು ಗೂಡಿನಲ್ಲಿ ಕೂತ್ತಿದ್ದ ದೇವರ ಸುತ್ತಲೂ ಪ್ರದಕ್ಷಿಣೆ ಮಾಡಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ತದನಂತರ ಸಂಸ್ಥಾನದ ಪ್ರಮುಖರ ಗೋವುಗಳನ್ನು ಸುತ್ತಿಸಲಾಯಿತು. ನಂತರ ಗ್ರಾಮಸ್ಥರು  ರಾಸುಗಳನ್ನು ದೇವರ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಕುರಿ ಮತ್ತು ಮೇಕೆಗಳು ತಂಡೋಪತಂಡವಾಗಿ ಸುತ್ತು ತಿರುಗುತ್ತಿದ್ದ ವೇಳೆ ನೆರೆದಿದ್ದ ಜನತೆ ಕೇಕೆ ಹಾಕುತ್ತಾ ಅವುಗಳೊಂದಿಗೆ ತಾವು ಸುತ್ತುತ್ತಾ ಸಂಭ್ರಮಿಸಿದರು.

ರಾಸುಗಳನ್ನು ದೇವರ ಸುತ್ತ ಸುತ್ತಿಸುವುದರಿಂದ ದನಕರುಗಳಿಗೆ ಯಾವುದೇ ರೋಗ ರುಜಿನೆ ಬರುವುದಿಲ್ಲ. ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂಬುದು ಜನತೆಯ ನಂಬಿಕೆ. ಇದಕ್ಕೆಪೂರಕವಾಗಿ 60 ಗಾವುದ ದೂರ ಹೋಗಿ ಆಕಳು ಹಬ್ಬ ನೋಡಬೇಕು 90 ಗಾವುದ ದೂರ ಹೋಗಿ ತೊಗಲುಗೊಂಬೆ ಪ್ರದರ್ಶನ ನೋಡಬೇಕು ಎಂಬ ನಾಲ್ನುಡಿಯೂ ಚಾಲ್ತಿಯಲಿದೆ.

ಜಾನುವಾರುಗಳ ಪ್ರದಕ್ಷಿಣೆ ಮುಗಿದ ನಂತರ ಕಂಬಳಿ ಎಡೆ ಹಾಕಿ ಕುರುಬಗೌಡರ ಮನೆಯಿಂದ ಬಂದಿದ್ದ ಸಿರಿಧಾನ್ಯ ಸಜ್ಜೆಯ ಮುದ್ದೆ ಮತ್ತು ಬದನೆಕಾಯಿ ಚಟ್ನಿಯ ಪ್ರಸಾದವನ್ನು ಸವಿದ ಜನತೆ ದೇವರ ದರ್ಶನ ಪಡೆದು ಊರ ಕಡೆ ಹೆಜ್ಜೆ ಹಾಕಿದರು. ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬಂದ ಉತ್ಸವ ಮೂರ್ತಿಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಉರುಮೆ ವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿದು ಯುವಜನತೆ ಸಂಭ್ರಮಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?