Saturday, July 20, 2024
Google search engine
Homeತುಮಕೂರು ಲೈವ್ಡಿಜಿಟಲ್ ಮಾಧ್ಯಮ: ಗಂಭೀರ ಪ್ರಶ್ನೆಗಳನ್ನು ಎತ್ತಿದ ವಿಜಯಕರ್ನಾಟಕ ವೆಬ್ನಾರ್

ಡಿಜಿಟಲ್ ಮಾಧ್ಯಮ: ಗಂಭೀರ ಪ್ರಶ್ನೆಗಳನ್ನು ಎತ್ತಿದ ವಿಜಯಕರ್ನಾಟಕ ವೆಬ್ನಾರ್

ಬಿ.ಟಿ.ಮುದ್ದೇಶ್

Publicstory.in


ತುಮಕೂರು: ವಿಜಯಕರ್ನಾಟಕದ ಮಧುಗಿರಿ ತಂಡ ಸೋಮವಾರ ಸಂಜೆ ಆಯೋಜಿಸಿದ್ದ ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ ಸ್ಥಿತಿಗತಿ ಕುರಿತ ವೆಬ್ ನಾರ್ ನಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿತು.

ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಪರುಶರಾಮ್ ಮಾತನಾಡಿ, ಜನರ ಕೈಗೆ ಮೊಬೈಲ್ ಕೊಟ್ಟರೆ ಸಾಲದು ಡಿಜಿಟಲ್ ಡಿವೈಡ್ ಸರಿಪಡಿಸುವ ಕೆಲಸಕ್ಕೆ ಕೈಹಾಕಬೇಕು ಎಂದರು.

ಮುಂದಿನ ಕೆಲವೇ ವರ್ಷಗಳಲ್ಲಿ ಡಿಜಿಟಲ್ ಬಳಕೆ ಇನ್ನೂ ಹೆಚ್ಚಲಿದೆ. ವಿಜ್ಞಾನ, ಗಣಿತದ ಸಂಶೋಧನೆಗಳು, ದೇಶ ವಿದೇಶಗಳ ಸುದ್ದಿಗಳು, ವಿಶ್ಲೇಷಣೆ ಡಿಜಿಟಲ್ ಮಾಧ್ಯಮಗಳಲ್ಲಿ ಕನ್ನಡದಲ್ಲಿ ಬರಬೇಕಾಗಿದೆ ಎಂದರು.

ಭಾಷೆಯ ಅಂತರರಾಷ್ಟ್ರೀಯ ರಾಜಕಾರಣಕ್ಕೆ ಸವಾಲು ಒಡ್ಡುವ, ತಮ್ಮ ಭಾಷೆಯನ್ನು ಅಂತರರಾಷ್ಟ್ರೀಯಕರಣಗೊಳಿಸುವ ಸಶಕ್ತಿಯನ್ನು ತಮಿಳಿನವರು ಬಳಸಿಕೊಂಡಿದ್ದಾರೆ. ಈ ಕೆಲಸವನ್ನು ವಿದೇಶದಲ್ಲಿರುವ ಕನ್ನಡಿಗರು, ಸರ್ಕಾರಗಳು ಮಾಡಬೇಕಾಗಿದೆ ಎಂದರು.

ಎಸ್ ಎಸ್ ಐಟಿ ನಿರ್ದೇಶಕರಾದ ಡಾ

ಮುದ್ದೇಶ್ ಮಾತನಾಡಿ, ಕನ್ನಡದ ಮಾಧ್ಯಮ ಡಿಜಿಟಲ್ ಸೌಲಭ್ಯವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದೆ. ಆದರೆ ಟಿ.ವಿ ಮಾಧ್ಯಮ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಬೇಸರಪಡಿಸಿಕೊಂಡರು.

ಅಶ್ಲೀಷ, ಕ್ಲೀಷ, ಕಂಗ್ಲಿಷ್ ಭಾಷೆಯ ಬಳಕೆ ಕನ್ನಡಕ್ಕೆ ಮಾತ್ರ ಕುಂದು ತರುತ್ತಿಲ್ಲ. ಮಾಧ್ಯಮ ಕ್ಷೇತ್ರಕ್ಕೂ ಅನಾಹುತಕಾರಿಯಾಗಿದೆ. ಟಿವಿ ಮಾಧ್ಯದಮವರೂ ಕನ್ನಡ ಕಲಿಯುವ ಕೆಲಸ, ಕನ್ನಡ ಹದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದರು.

ವಕೀಲ ಸಿ.ಕೆ.ಮಹೇಂದ್ರ ಮಾತನಾಡಿ, ಡಿಜಿಟಲ್ ಮಾಧ್ಯಮ ಸಹ ಅಭಿವ್ಯಕ್ತಿ, ವಾಕ್ ಸ್ವಾತಂತ್ರ್ಯದ ಕೆಳಗೆಯೇ ಬರಲಿದೆ. ಡಿಜಿಟಲ್ ಮಾಧ್ಯಮವನ್ನು ನಿಯಂತ್ರಕ್ಕೆ ತರುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ವೆಬ್ ಪೋರ್ಟಲ್ ಗಳನ್ನು ವಾರ್ತಾ ಸಚಿವಾಲಯದ ಕೆಳಗೆ ತರಲು ಅಧಿಸೂಚನೆ ಹೊರಡಿಸಿದೆ. ಇನ್ನೂ ಮಸೂದೆಯ ಬಗ್ಗೆ ಏನನ್ನು ಹೇಳಿಲ್ಲ. ಮಸೂದೆ ಜಾರಿಗೆ ಬಂದ ಮೇಲೆಯೇ ಇದು ಡಿಜಿಟಲ್ ಮಾಧ್ಯಮದ ಸ್ವಾತಂತ್ರದ ಕುರಿತು ಗೊತ್ತಾಗಲಿದೆ ಎಂದರು.

ಡಿಜಿಟಲ್ ಮಾಧ್ಯಮದಲ್ಲಿ ಸ್ಥಳೀಯ ಭಾಷೆಗಳ ಮೂಲಕ ಮಾರುಕಟ್ಟೆ ಹಿಡಿಯುವ ಕೆಲಸಕ್ಕೆ ಗೂಗಲ್ ಮುಂದಾಗಿದೆ. ಕನ್ನಡದ ಡಿಜಿಟಲ್ ಮಾಧ್ಯಮಕ್ಕೆ ದೊಡ್ಡ ಅವಕಾಶ ಸಿಗಲಿದೆ ಎಂದರು.

ಕನ್ನಡದ ಹೋರಾಟಗಾರರಾದ ನರಸಿಂಹಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು.

ರಾಮ್ ಪ್ರಸಾದ್- ಅವರು ಐಟಿ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಬಳಕೆ: ಸವಾಲುಗಳು ಮತ್ತು ಸಲಹೆಗಳು
ಅಲ್ಲಾಗಿರಿರಾಜ್- ಅವರು ದೃಶ್ಯಮಾಧ್ಯಮ ಮತ್ತು ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ- ಸಾಧಕ ಭಾಧಕಗಳು

ಲಕ್ಷ್ಮೀಕಾಂತ್ ಎಲ್ ವಿ- ಅವರು ಸಾಹಿತ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಕನ್ನಡದ ಬಳಕೆ

ಪ್ರೊ.ಟಿ.ಎನ್ ನರಸಿಂಹಮೂರ್ತಿ ಅವರು- ಗಡಿನಾಡು ಭಾಗದ ಜನರಲ್ಲಿ ಮಾಧ್ಯಮ ತಂತ್ರಜ್ಞಾನದ ಅರಿವು ಮತ್ತು ಕನ್ನಡದ ಬಳಕೆ

.ನವೀನ್ ಭೂಮಿ- ವಿದ್ಯಾರ್ಥಿಗಳಿಗೆ ಮಾಧ್ಯಮ ತಂತ್ರಜ್ಞಾನದ ಅರಿವು: ಕನ್ನಡದ ಬಳಕೆ ಕುರಿತು ಮಾತನಾಡಿದರು.

ವೆಬ್ ನಾರ್ ಎಲ್ಲರ ವಿಷಯ ಮಂಡನೆಗೆ ವಿಜಯ ಕರ್ನಾಟಕ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದರು.


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?