Sunday, July 21, 2024
Google search engine
Homeತುಮಕೂರು ಲೈವ್ತಿಪಟೂರಿನ ಅಕ್ಕನ ಮನೆಗೆ ಹೋದವನಿಗೂ ಕೊರೊನಾ, ಪಾವಗಡದಲ್ಲಿ Sslc ಪರೀಕ್ಷಾ ಕೇಂದ್ರಕ್ಕೆ ಬಂದ ಸೋಂಕಿತ ಅಧಿಕಾರಿ

ತಿಪಟೂರಿನ ಅಕ್ಕನ ಮನೆಗೆ ಹೋದವನಿಗೂ ಕೊರೊನಾ, ಪಾವಗಡದಲ್ಲಿ Sslc ಪರೀಕ್ಷಾ ಕೇಂದ್ರಕ್ಕೆ ಬಂದ ಸೋಂಕಿತ ಅಧಿಕಾರಿ

ಚಿಕ್ಕನಾಯನಕಹಳ್ಲಿಯಲ್ಲಿ ಸೀಲ್ಡ್ ಡೌನ್ ಗೆ ಮುನ್ನ ಪೊಲೀಸ್ ಕಾವಲು

ತುಮಕೂರು: ಹುಷಾರಿಲ್ಲ ಎಂದು ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿಗೆ‌ ಹೋದ ತಮ್ಮನಿಗೆ ಕೊರೊನಾ ಸೋಂಕು ತಗುಲಿದೆ.

ಪಾವಗಡದಲ್ಲಿ ಹೊಸಕೋಟೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕನಿಗೆ ತೆರಳಿದ್ದ ಬಿಸಿಎಂ ಅಧಿಕಾರಿಗೂ ಸೋಂಕು ತಗುಲಿದೆ.

ಈ ಅಧಿಕಾರಿ ಕ್ವಾರಂಟೈನ್ ಇರಬೇಕಿದ್ದರೂ ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಭಯದಲ್ಲೇ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ, ಪೋಷಕರಿಗೆ ಜಿಲ್ಲಾಡಳಿತದ ಮೇಲೆ ವಿಶ್ವಾಸ ಕಡಿಮೆ ಮಾಡುವ ಪ್ರಕರಣ ಇದಾಗಿದೆ. ಪರೀಕ್ಷಾ ಕೆಲಸಕ್ಕೆ ತೆಗೆದುಕೊಂಡ ಸಿಬ್ಬಂದಿಗೆ ಮೊದಲು ಖಾತರಿ ಮಾಡಿಕೊಂಡು ಕೆಲಸಕ್ಕೆ ನಿಯೋಜಿಸಬೇಕು ಎಂದು sfi ಮಾಜಿ ಜಿಲ್ಲಾ ಕಾರ್ಯದರ್ಶಿ ಎಸ್.ರಾಘವೇಂದ್ರ ಹೇಳಿದರು.

ಈ ಅಧಿಕಾರಿ ಯಾವುದೇ ವಿದ್ಯಾರ್ಥಿಯ ಸಂಪರ್ಕಕ್ಕೆ ಬಂದಿಲ್ಲ. ಸಂಪರ್ಕಕ್ಕೆ ಬಂದ ಆರು ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರ ಹೇಳಿಕೆಯನ್ನು ವಿಜಯ ಕರ್ನಾಟಕ ಪತ್ರಿಕೆ ಪ್ರಕಟಿಸಿದೆ.

ತಾಲ್ಲೂಕಿನ ಕಾಡೇನಹಳ್ಳಿಯ 21 ವರ್ಷದ ಯುವಕ ತಿಪಟೂರಿನ ತಾಲ್ಲೂಕಿನ ಕೋಟನಾಯಕನಹಳ್ಳಿಗೆ ಹೋಗಿದ್ದರು. ಆದರೆ ಅಲ್ಲಿ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ. ಈಗ ಎರಡೂ ಗ್ರಾಮಗಳನ್ನು ಸೀಲ್ಡ್ ಡೌನ್ ಮಾಡಲಾಗಿದೆ.

ಪಾವಗಡ ತಾಲೂಕಿನಲ್ಲಿ ನಾಲ್ವರು, ಸಿರಾ ಮೂರು, ತುಮಕೂರು ಎರಡು, ತಿಪಟೂರು 2 ಮತ್ತು ಗುಬ್ಬಿ 2 ಪ್ರಕರಣಗಳು ಶುಕ್ರವಾರ ವರದಿಯಾಗಿವೆ.

ಇನ್ನೂ, ಪಾವಗಡ ತಾಲೂಕಿನ ಮದ್ದಬಂಡೆಯಲ್ಲಿ 45 ವರ್ಷದ ವ್ಯಕ್ತಿಗೆ ಕೊರೊನ ಇರುವುದು ದೃಢಪಟ್ಟಿದ್ದು, ಇದೇ ಮೊದಲ ಬಾರಿಗೆ ಪಾವಗಡದಲ್ಲಿ ಹಳ್ಳಿಗೂ ಕೊರೊನ ವ್ಯಾಪಿಸಿದೆ.

ತುಮಕೂರಿನ ಅಮರಜ್ಯೋತಿ ನಗರ ಮತ್ತು ವಿನಾಯಕನಗರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೊನ ಹರಡಿದೆ. ಈ ಎರಡು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವೇಳೆಯಲ್ಲೇ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವುದು ಪೋಷಕರಲ್ಲಿ ಆತಂಕ ಉಂಟುಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?