Thursday, April 18, 2024
Google search engine
Homeತುಮಕೂರು ಲೈವ್ತಿಪಟೂರು ಕೊಬ್ಬರಿಗೆ GI ಬನ್ನಿ ಕೈ ಜೋಡಿಸಿ....

ತಿಪಟೂರು ಕೊಬ್ಬರಿಗೆ GI ಬನ್ನಿ ಕೈ ಜೋಡಿಸಿ….

ಶ್ರೀಕಾಂತ್ ಕೆಳಹಟ್ಟಿ


ಸುರಿ ನಿಗದಿತ ಸ್ಥಳ ಸಂಬಂಧವನ್ನು ಬೆಸೆದುಕೊಂಡ ಅಥವಾ ಆ ಮೂಲಕ ಕೆಲವು ಉತ್ಪನ್ನಗಳ ಗುಣಮಟ್ಟ ಅಥವಾ ಲಕ್ಷಣಗಳು ನಿರ್ಧರಿತವಾಗುವ ಆ ಉತ್ಪನ್ನಗಳನ್ನು ಜನಸಾಮಾನ್ಯರು ಸದಾ ಅವುಗಳೊಂದಿಗೆ ಗುರುತಿಸಿ ಬಳಸುತ್ತಿರುವರು. ಅಂತಹ ಸ್ಥಳನಾಮ ಬಳಸುವಿಕೆಯನ್ನು ನಾವು ಭೌಗೋಳಿಕ ಸಂಕೇತಗಳೆನ್ನುತ್ತೇವೆ (Geographical Indications). ಭಾರತದಲ್ಲಿ ಅತಿ ಸಾಧಾರಣವಾಗಿ ಡಾರ್ಜಲಿಂಗ್ ಚಹಾವನ್ನು ಉದಾಹಣೆಯಾಗಿ ನೀಡುವರು. ಜಾಗತಿಕ ಮಟ್ಟದಲ್ಲಿ ಷಾಂಪೇನ್ ವೈನ್ ಹೆಸರುವಾಸಿ ’ಜಿಐ’ಯಾಗಿರುವುದು.

ಸಾರ್ವಜನಿಕರನ್ನು ದಾರಿತಪ್ಪಿಸುವಿಕೆ ಮತ್ತು ಅನುಚಿತ ಪೈಪೋಟಿಯನ್ನು ನಿವಾರಿಸುವ ಸಲುವಾಗಿ ಡಬ್ಲೂಟಿಒ ಸದಸ್ಯರು ಟ್ರಿಪ್ಸ್ ಒಡಂಬಡಿಕೆ ಮಾಡಿಕೊಂಡು ‘ಜಿಐ’ಗಳಿಗೆ ಕೆಲವು ಹಂತದ ರಕ್ಷಣೆಗಳನ್ನು ನೀಡಲು ಮುಂದಾಗಿರುವರು. ಉತ್ಪನ್ನಗಳ ವಿಶೇಷ ಗುಣಮಟ್ಟ ಅಥವಾ ಲಕ್ಷಣಗಳಿಗೆ ಭೌಗೋಳಿಕ ಮೂಲದೊಂದಿಗೆ ಸಂಬಂಧ ಕಲ್ಪಸಿಕೊಡುವುದರೊಂದಿಗೆ ಮಾರುಕಟ್ಟೆಯಲ್ಲಿ ಗಣ್ಯಸ್ಥಾನ ಗಳಿಸಿ ಹೊಸದೊಂದು ಆಯಾಮ ಕಂಡುಕೊಳ್ಳಲು ‘ಜಿಐ’ ರಕ್ಷಣೆಯು ಎಡೆ ಮಾಡಿಕೊಟ್ಟಿದೆ.

ಕೃಷಿ ಉತ್ಪನ್ನ, ಜವಳಿ, ಕರಕುಶಲ ಮುಂತಾದ ಸುಮಾರು 100ಕ್ಕೂ ಹೆಚ್ಚು ನೋಂದಾಯಿತ ಭೌಗೋಳಿಕ ಸಂಕೇತಗಳು ಇಂದು ಭಾರತದಲ್ಲಿದೆ.

ಈ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ‘ತಿಪಟೂರು ಕೊಬ್ಬರಿ’ಯೆಂದೇ ಖ್ಯಾತವಾಗಿರುವ ನಮ್ಮ ಹೆಮ್ಮೆಯ ಉತ್ಪನ್ನವನ್ನು ‘ಜಿಐ’ಗಾಗಿ ನೋಂದಾಯಿಸಲು ತುರ್ತು ಕೆಲಸವಾಗಬೇಕಾಗಿದೆ.

ಆದುದರಿಂದ ಕಾಳಜಿಯುಳ್ಳ ಆಸಕ್ತ ವ್ಯಕ್ತಿಗಳು, ಸಂಸ್ಥೆಗಳು, ಎನ್ ಜಿ ಓ ಗಳು ತಮ್ಮ ತಿಳಿವು, ಪರಿಣಿತಿ, ಅನುಭವ, ದಾಖಲೆ ಹಾಗು ಉತ್ಪನ್ನದ ಕುರಿತಾದ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ಶ್ರಮ ಮತ್ತು ಸಮಯ ವಿನಿಯೋಗಿಸುವುದಾದರೆ ತಮಗೆ ಆತ್ಮೀಯ ಸ್ವಾಗತ.

ಬನ್ನಿ ನಾವೆಲ್ಲರೂ ಸೇರಿ ನಮ್ಮ ಪೂರ್ವಜರ ಸಾಂಪ್ರದಾಯಿಕ ವಿಧಾನದಿಂದ ತಯಾರಿಸಿದ ಕೊಬ್ಬರಿಗೆ, ಅನುಚಿತ ಪೈಪೋಟಿಯನ್ನು ತಪ್ಪಿಸಿ ದೇಶೀಯ ಹಾಗು ವಿದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳೋಣ.

ಆಸಕ್ತರು ಕರೆ ಅಥವಾ ಮೆಸೆಜ್ ಮಾಡಿ,
ಶ್ರೀಕಾಂತ್, 9632904901
srikanthkelahatti@gmail.com
ರಾಜ್ಯ ಕಾರ್ಯದರ್ಶಿ, ಬೆಲೆ ಕಾವಲು ಸಮಿತಿ, ತಿಪಟೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?