ತುಮಕೂರ್ ಲೈವ್

ತಿಪಟೂರು ಭಾಜಪ ಚುಕ್ಕಾಣಿ ಹಿಡಿದ ಸುರೇಶದ್ವಯರು

ತಿಪಟೂರು: ಜನತಾ ಪಾರ್ಟಿಯ ತಿಪಟೂರು ಮಂಡಳದ ಅಧ್ಯಕ್ಷರಾಗಿ ಬಳ್ಳೇಕಟ್ಟೆ ಸುರೇಶ್ ಹಾಗೂ ನಗರ ಅಧ್ಯಕ್ಷರಾಗಿ (ಗುಲಾಬಿ)ಸುರೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ವೀಕ್ಷಕರಾಗಿ/ಚುನಾವಣಾಧಿಕಾರಗಳಾಗಿ ಬಿಜೆಪಿ
ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್,
ಮಾಜಿ ಶಾಸಕ ನಿರ್ಮಲ ಕುಮಾರ ಸುರಾನ, ಪದಾದಿಕಾರಿಗಳಾದ ಶಿವಪ್ರಸಾದ್, ರಂಗಾನಾಯಕ್, ಸುರೇಶ್, ರುದ್ರೇಶ್, ದಿಲೀಪ್, ಗಂಗರಾಜು, ಶಂಕರಪ್ಪ, ಶಂಕರಣ್ಣ, ಶಿವಣ್ಣ, ಪ್ರಸನ್ನಕುಮಾರ, ಮಂಜುನಾಥ್ ಇತರ ಭಾಗವಹಿಸಿದ್ದರು.

ಸುದರ್ಶನಬಾಬು-ವಂದೇಮಾತರಂ ಹಾಡಿದರು. ದೇವರಾಜು-ಸ್ವಾಗತಿಸಿದರು.
ಗಂಗಾಧರಯ್ಯ ವಂದಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ದಿವಾಕರ್ ಹಾಗೂ ಲೋಕೇಶ್ ನೂತನ ಅಧ್ಯಕ್ಷರುಗಳಿಗೆ ಪಕ್ಷದ ಬಾವುಟ ಹಸ್ತಾಂತರಿಸಿ ವಿದಾಯ ಭಾಷಣ ಮಾಡಿದರು.

ಮಾಜಿ ಶಾಸಕ ನಿರ್ಮಲ ಕುಮಾರ ಸುರಾನ, ಶಾಸಕರಾದ ಜ್ಯೋತಿಗಣೇಶ್ ಹಾಗೂ
ಬಿ ಸಿ ನಾಗೇಶ್ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದರು.

Comment here