Saturday, July 20, 2024
Google search engine
Homeಜನಮನತಿಪ್ಪೂರು ಘಟನೆ: ರಾಜಸ್ವ ನಿರೀಕ್ಷಕರನ್ನು ರಕ್ಷಿಸುತ್ತಿದೆಯೇ ಸರ್ಕಾರ?

ತಿಪ್ಪೂರು ಘಟನೆ: ರಾಜಸ್ವ ನಿರೀಕ್ಷಕರನ್ನು ರಕ್ಷಿಸುತ್ತಿದೆಯೇ ಸರ್ಕಾರ?

https://youtu.be/FS31pxPGVkA

ಲಕ್ಷ್ಮೀಕಾಂತರಾಜು ಎಂಜಿ


ಗುಬ್ಬಿ: ತಾಲ್ಲೂಕಿನ ತಿಪ್ಪೂರು ಗ್ರಾಮದ ಉಡುಸಲಮ್ಮ ದೇವಸ್ಥಾನದ ಇನಾಂ ಜಮೀನಿನ ಒತ್ತುವರಿ ತೆರವು ಪ್ರಕರಣದಲ್ಲಿ ತಹಸೀಲ್ದಾರ್ ಹಾಗೂ ವಿಎ ತಲೆದಂಡವಾದರೂ ಪ್ರಕರಣದ ಮತ್ತೊಬ್ಬ ಭಾಗಿದಾರ ಗುಬ್ಬಿ ಕಸಬಾ ರಾಜಸ್ವ ನಿರೀಕ್ಷಕರ ಮೇಲೆ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ರಾಜಸ್ವ ನಿರೀಕ್ಷಕರ ವರದಿ ಉಲ್ಲೇಖ ಮಾಡಿರುವ ತಹಶೀಲ್ದಾರ್

ಹೌದು. ತಾಲ್ಲೂಕಿನ ತಿಪ್ಪೂರು ಒತ್ತುವರಿ ತೆರವು ಪ್ರಕರಣದಲ್ಲಿ ಕಸಬಾ ಆರ್ ಐ ಅವರನ್ನ ಇಲಾಖೆ ರಕ್ಷಸುತ್ತಿದೆಯಾ ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.

ಗುಬ್ಬಿ ತಹಸೀಲ್ದಾರ್ ಆಗಿದ್ದ ಮಮತಾ ಅವರು ತೆರವು ಸಂದರ್ಭದಲ್ಲಿ ಅಲ್ಲಿನ ಆರ್ ಐ ವರದಿಯ ಆಧಾರದ ಮೇರೇಯೆ ತೆರವು ಆದೇಶ ಹೊರಡಿಸಿದ್ದು ಅರ್ ಐ ತನ್ನ ವರದಿಯಲ್ಲಿ ಒತ್ತುವರಿ ತೆರವುಗೊಳಿಸಬಹುದೆಂದು ತಹಸೀಲ್ದಾರ್ ಅವರಿಗೆ ಮಾಹಿತಿ ಒದಗಿಸಿ ತಪ್ಪು ಮಾಹಿತಿ ನೀಡಿ ನಡೆದಿರುವ ಮರಗಳ ಮಾರಣ ಹೋಮಕ್ಕೆ ಕಾರಣವಾಗಿರುವಂಥೂ ಸತ್ಯ.

ರಾಜಸ್ವ ನಿರೀಕ್ಷಕರ ವರದಿ ಆಧರಿಸಿಯೇ ತೆರವು ನಡೆದಿರುವದರಿಂದ ಆರ್ ಐ ಕೂಡ ಪ್ರಕರಣದ ಜವಬ್ದಾರಿ ಹೊರಬೇಕಿದ್ದು ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ತಾಲ್ಲೂಕಿನ ರೈತಾಪಿ ವರ್ಗದಲ್ಲಿ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಯಾವುದೇ ತಹಸೀಲ್ದಾರ್ ಅವರುಗಳು ತಮ್ಮ ಆದೇಶಗಳನ್ನ ಗ್ರಾಮ ಲೆಕ್ಕಿಗ ಹಾಗೂ ಆರ್ ಐ ವರದಿಯ ಅನ್ವಯವೇ ಆದೇಶ ಮಾಡುವುದು ವಾಡಿಕೆ.

ಅದರಂತೆ ಗುಬ್ಬಿ ತಹಸೀಲ್ದಾರ್ ಅವರೂ ಕೂಡ ಸ್ಥಳ ಪರಿಶೀಲಿಸದೆ ವರದಿಯನ್ನೇ ಆಧರಿಸಿ ತೆರವು ಆದೇಶ ಹೊರಡಿಸಿ ಎಡವಟ್ಟು ಮಾಡಿಕೊಂಡಿರುವುದೇ ಈ ಮರಗಳ ಮಾರಣ ಹೋಮಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಶ್ರೀ‌ಉಡುಸಲಮ್ಮ‌ದೇವಸ್ಥಾನದ ಬಳಿ ಈಗಾಗಲೇ ಸಾಕಷ್ಟು ಜಾಗವನ್ನ ಒತ್ತುವರಿದಾರರು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿರುವ ಮಾಹಿತಿಯನ್ನ ಮರೆಮಾಚಿ ತಹಸೀಲ್ದಾರ್ ಅವರನ್ನ ತಪ್ಪು ದಾರಿಗೆ ಎಳೆದಿದ್ದಾರೆ ಎಂಬುದು ಅಲ್ಲಿನ ಗ್ರಾಮಸ್ಥರ ಆರೋಪವಾಗಿದೆ.

ಕಂದಾಯ ಇಲಾಖೆಯು ಪ್ರಕರಣದಲ್ಲಿನ ಒಂದು ಭಾಗವಾಗಿರುವ ಕಸಬಾ ಆರ್ ಐ ಅವರನ್ನ ಪ್ರಕರಣದಿಂದ ಕೈ ಬಿಟ್ಟಿರುವುದು ರಾಜಕೀಯ ಕಾರಣಗಳಿರುವುದು ಕಂಡುಬರುತ್ತಿದೆ.

ಆರ್ ಐ ರಮೇಶ್ ಅವರನ್ನ ಈ ಕೂಡಲೇ ಅಮಾನತ್ತುಪಡಿಸದಿದ್ದಲ್ಲಿ ಹೋರಾಟ ಮಾಡುವ ಎಚ್ಚರಿಕೆಯನ್ನ ಅನೇಕ ಸಂಘಟನೆಗಳು ಎಚ್ಚರಿಸಿವೆ.

ರಾಜಸ್ವ ನಿರೀಕ್ಷಕರ ಅಮಾನತು ಆಗಲೇಬೇಕು:ಶಾಸಕ ಶ್ರೀನಿವಾಸ್

ತಹಶೀಲ್ದಾರ್ ಮತ್ತು ಗ್ರಾಮಲೆಕ್ಕಿಗರ ಮೇಲೆ ಶಿಸ್ತುಕ್ರಮ ಜರುಗಿಸಿದ ಕಂದಾಯ ಇಲಾಖೆ ಆರ್ ಐ ಅವರನ್ನ ರಕ್ಷಿಸುತ್ತಿದೆ. ಈ ಕೂಡಲೇ ರಾಜಸ್ವ ನಿರೀಕ್ಷರನ್ನೂ ಅಮಾನತು ಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು.ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು.


ಎಸ್ ಆರ್ ಶ್ರೀನಿವಾಸ್
ಶಾಸಕರು ,ಗುಬ್ಬಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?