Thursday, March 28, 2024
Google search engine
Homeಜನಮನತುಮಕೂರಿಗೆ ಮೋದಿ: ಫುಡ್ ಪಾರ್ಕ್ ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯೇ?

ತುಮಕೂರಿಗೆ ಮೋದಿ: ಫುಡ್ ಪಾರ್ಕ್ ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯೇ?

ಫುಡ್ ಪಾರ್ಕ್ ಉದ್ಘಾಟನೆ ಸಂದರ್ಭದಲ್ಲಿ ವಿವರ ಪಡೆದ ಪ್ರಧಾನಿ (ಸಂಗ್ರಹ ಚಿತ್ರ)

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜ.3 ರಂದು ರಾಜ್ಯ ಸರ್ಕಾರ ಆಯೋಜಿಸಿರುವ ರೈತರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ವಸಂತನರಸಾಪುರದಲ್ಲಿ ಫುಡ್ ಪಾರ್ಕ್ ಸಮಸ್ಯೆಗೆ ಉತ್ತರ ಸಿಲ್ಕ್ ಯೇ ಎಂಬುದನ್ನು ನೋಡಬೇಕಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಮಂಜೂರಾದ ಈ ಫುಡ್ ಪಾರ್ಕ್ ದೇಶದ ಮೊದಲ ಫುಡ್ ಪಾರ್ಕ್ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರದ ಆಹಾರ ಸಂಸ್ಕರಣೆ ಸಚಿವಾಲಯದ ಅಡಿಯಲ್ಲಿ ಬರುವ ಇದು ಸರ್ಕಾರ- ಖಾಸಗಿ ಸಹಭಾಗಿತ್ವದ ಒಂದು ಯೋಜನೆ. ಅಂದರೆ ಇದಕ್ಕೆ ಕೇಂದ್ರ ಸರ್ಕಾರ ಸಹ ಬಂಡವಾಳ ವಿನಿಯೋಗಿಸಿದೆ. ಇದು ಸರ್ಕಾರದ ಕೈಗಾರಿಕೆಯೂ ಹೌದಾಗಿದೆ.

ಇದನ್ನು ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಈ ಪಾರ್ಕ್ ನಿಂದಾಗಿ ತುಮಕೂರಿನ ಮೂವತ್ತು ಸಾವಿರ ಯುವಕರಿಗೆ ನೇರ ಉದ್ಯೋಗ, ಲಕ್ಷ ಕ್ಕೂ ಅಧಿಕ ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ ಎಂದು ಆಗ ಬಿಜೆಪಿಯ ಮುಖಂಡರು ಹೇಳಿಕೊಂಡಿದ್ದರು. ಆದರೆ ವಾಸ್ತವದಲ್ಲಿ ಹಾಗೇನು ಆಗಲಿಲ್ಲ.

ಸ್ಥಳೀಯರಿಗೆ ಉದ್ಯೋಗ ಇರಲಿ, ರೈತರಿಗೂ ಏ‌ನೇನು ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್.

ಸಂಸದ ಜಿ.ಎಸ್.ಬಸವರಾಜ್

ಮಾಜಿ ಸಂಸದ ಎಸ್ ಪಿಎಂ

ಇಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಹಿಂದಿನ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಫುಡ್ ಪಾರ್ಕ್ ಸಮಸ್ಯೆಯ ಬಗ್ಗೆ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ‌ ಏನೇನು ಅಗಲಿಲ್ಲ. ಆಗ ಮಾಜಿಯಾಗಿದ್ದ ಜಿ.ಎಸ್.ಬಸವರಾಜ್‌ ಅವರು ಫುಡ್ ಪಾರ್ಕ್ ಬರಲು ಕಾರಣರು. ಇದಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ರೈತರ ಭೂಮಿ ಹೋಗಿದೆ. ನಾನು ಸಂಸದನಾದರೆ ಮೊದಲು ಫುಡ್ ಪಾರ್ಕ್ ಗೆ ಭೇಟಿ ನೀಡುತ್ತೇನೆ ಎಂದಿದ್ದರು. ಅವರಿಂದಲೂ ಇನ್ನು ಏನೇನು ಆಗಿಲ್ಲ.

ಮಾಜಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಫುಡ್ ಪಾರ್ಕ್ ಜಮೀನು ಮಾರಲಾಗಿದೆ. ರೈತರಿಗೆ ಟೋಪಿ ಹಾಕಲಾಗಿದೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆಯೂ ಫುಡ್ ಪಾರ್ಕ್ ಕಂಪನಿ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.

ಫುಡ್ ಪಾರ್ಕ್ ಸ್ಥಾಪನೆಯಿಂದ ತುಮಕೂರು ಜಿಲ್ಲೆ ಮಾತ್ರವಲ್ಲದೇ ಪಕ್ಕದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಂದಲೂ ತರಕಾರಿ, ಮಾವು, ಬಾಳೆ ಮತ್ತಿತತ ಕೃಷಿ ಉತ್ಪನ್ನ ಕೊಳ್ಳುತ್ತೇವೆ. ಇದಕ್ಕಾಗಿ ಗುಬ್ಬಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಗ್ರಹಗಾರ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರೈತರು ಇಲ್ಲಿಗೆ ಉತ್ಪನ್ನ ತರಬೇಕು ಎಂದು ಹೇಳಲಾಗಿತ್ತು. ಅದು ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ.

ಕೃಷಿ ಉತ್ಪನ್ನಗಳ ಬೆಲೆ ಕುಸಿತದ ವೇಳೆ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಹೇಳಲಾಗಿತ್ತು. ಫುಡ್ ಪಾರ್ಕ್ ಆರಂಭದ ಬಳಿಕ ಏನ್ನೆಲ್ಲ ಬದಲಾವಣೆ ಆಗಿದೆ ಎಂಬ ಬಗ್ಗೆ ಜಿಲ್ಲಾಡಳಿತ, ಕೇಂದ್ರ. ಸರ್ಕಾರ ಈಗ ಉತ್ತರಿಸಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿ ರೈತರ ಸಮಾವೇಶದಲ್ಲೇ ಫುಡ್ ಪಾರ್ಕ್ ಗೆ ಸಂಬಂಧಿಸಿದಂತೆ ಉತ್ತರ ನೀಡಬೇಕಾಗಿದೆ. ಎಷ್ಟು ಸಾವಿರ ರೈತರ ಆದಾಯ ಹೆಚ್ಚಾಗಿದೆ ಎಂಬ ಬಗ್ಗೆ ಉತ್ತರ ಬೇಕಾಗಿದೆ.

ಸಂಸದರು ಪ್ರಶ್ನೆ ಎತ್ತಲಿ


ಸಂಸದರು ಈ ಬಗ್ಗೆ ಪ್ರಧಾನಿ ಅವರ ಮುಂದೆಯೇ ಪ್ರಶ್ನೆ ಎತ್ತುವ ಮೂಲಕ ಜಿಲ್ಲೆಯ ರೈತರ ಬಗೆಗಿನ ಅವರ ಕಾಳಜಿ ಹೊರ ಹಾಕಬೇಕಾಗಿದೆ ಎನ್ನುತ್ತಾರೆ ತಿಪಟೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಾಜಣ್ಣ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?