Saturday, July 20, 2024
Google search engine
Homeತುಮಕೂರು ಲೈವ್ತುಮಕೂರಿನಲ್ಲಿ ನಾಗರ ಪಂಚಮಿ, ಶ್ರಾವಣ ಸಂಭ್ರಮ

ತುಮಕೂರಿನಲ್ಲಿ ನಾಗರ ಪಂಚಮಿ, ಶ್ರಾವಣ ಸಂಭ್ರಮ

ತುಮಕೂರು; ಜಿಲ್ಲೆಯಲ್ಲಿ ಶನಿವಾರ ಮೊದಲ ಶ್ರಾವಣದ ಸಂಭ್ರಮ ಕಾಣಿಸಿತು. ನಾಗರ ಪಂಚಮಿಯ ಪೂಜೆಯೂ ಜೋರಾಗಿತ್ತು.

ಕೊರೊ‌ನಾ ಕಾರಣ ಹಬ್ಬದ ಗುಂಪು ಸಂಭ್ರಮಕ್ಕೆ ಕಡಿವಾಣ ಹಾಕಿತ್ತಾದರೂ ಅವರರವರ ಮನೆಯಲ್ಲಿ ಪಂಚಮಿಯ ಸಡಗರ ಎಲ್ಲೆ ಮೀರಿತ್ತು.

ಮನೆಯಲ್ಲಿ, ನಾಗರ ಗುಡಿಗಳಲ್ಲಿ ವಿಶೇಷ ಆಲಂಕಾರ ಮಾಡಲಾಗಿತ್ತು.ಪಾವಗಡದ ಉತ್ತರ ಪಿನಾಕಿನಿ ನದಿ ತಟದಲ್ಲಿರುವ ನಾಗಲ ಮಡಿಕೆಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾದ ಬದರೀನಾಥ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಅರ್ಚನೆ, ಅಭಿಷೇಕದ ಸಮೇತ ಪಂಚಮಿಯ ವಿಶೇಷ ಪೂಜೆಗಳು ನಡೆದವು.

ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಸಿ.ಎನ್.ಪಾಳ್ಯದ ರವೀಂದ್ರ ಅವರ ನಾಗ ಕ್ಷೇತ್ರದಲ್ಲಿ ಪೂಜೆ ನಡೆಯಿತು.

ಮೊದಲ ಶ್ರಾವಣದ ಕಾರಣ ದೇವರಾಯನದುರ್ಗದಲ್ಲಿ ವಿಶೇಷ ಪೂಜೆಗಳು ನಡೆದವು.ಶ್ರಾವಣದಲ್ಲಿ ದಾಸಪ್ಪರನ್ನು ಕರೆದು ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುವ ಪರಿಪಾಠ ಜಿಲ್ಲೆಯಲ್ಲಿದೆ.

ಆದರೆ ಕೊರೊನಾ ಕಾರಣ ಸಾಕಷ್ಟು ಕಡೆಗಳಲ್ಲಿ ದಾಸಪ್ಪ ರನ್ನು ಕರೆಸದೇ ಮನೆಯವರೇ ಪೂಜೆ ಸಲ್ಲಿಸಿದ್ದು ಕಾಣಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?