Saturday, July 27, 2024
Google search engine
Homeತುಮಕೂರು ಲೈವ್ತುಮಕೂರು: ಬೃಹತ್ ಎಲ್ ಇಡಿ ಪರದೆಯಲ್ಲಿ ಮಹಾನ್ ನಾಯಕ ಅಂಬೇಡ್ಕರ್ ಧಾರವಾಹಿ ವೀಕ್ಷಿಸಲು ಅವಕಾಶ

ತುಮಕೂರು: ಬೃಹತ್ ಎಲ್ ಇಡಿ ಪರದೆಯಲ್ಲಿ ಮಹಾನ್ ನಾಯಕ ಅಂಬೇಡ್ಕರ್ ಧಾರವಾಹಿ ವೀಕ್ಷಿಸಲು ಅವಕಾಶ

Publicstory. in


ತುಮಕೂರು: ಸಂವಿಧಾನ ಶಿಲ್ಪಿ, ವಿಶ್ಚದ ಕಣ್ಮಣಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕತೆ ಆಧರಿಸಿದ ಜಿ.ಕನ್ನಡ ವಾಹಿನಿ ಶನಿವಾರದಿಂದ ಆರಂಭಿಸಿರುವ ಮಹಾನ್ ನಾಯಕ ಬಿ.ಆರ್.ಅಂಬೇಡ್ಕರ್ ಅವರ ಧಾರಾವಾಹಿಯ ವೀಕ್ಷಣೆಗೆ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿದೆ.

ಧಾರವಾಹಿಯೊಂದರ ಆರಂಭಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಂಭ್ರಮಾಚರಣೆ ದೇಶದ ಟಿ.ವಿ.ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಸುಮಾರು 18*12 ಅಡಿ ಎತ್ತರದ ಬೃಹತ್ ಪರದೆಯ ಮೇಲೆ ಧಾರವಾಹಿಯ ಮೊದಲ ಕಂತಿನ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಸಿ.ಗೌರಿಶಂಕರ್ ಉಪಸ್ಥಿತರಿದ್ದು, ಶಾಸಕ ಗೌರಿಶಂಕರ್ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡುವವರು.

ಕಾರ್ಪೋರೇಟರ್ ಜಿ.ಕುಮಾರ್ ಅತಿಥಿಗಳಾಗಿರುವವರು.

ಧಾರವಾಹಿಯ ವೀಕ್ಷಣೆಗೆ ಎಲ್ಲರಿಗೂ ಅವಕಾಶವಿದೆ. ಕಾರ್ಯಕ್ರಮ ಸಂಜೆ 6ರಿಂದ 7 ಗಂಟೆಯವರೆಗೆ ಇರಲಿದೆ. ಈ ಒಂದು ಗಂಟೆ ಧಾರವಾಹಿ ವೀಕ್ಷಣೆಗೆ ಅವಕಾಶವಿದೆ. ಪ್ರತಿ ಶನಿವಾರ, ಭಾನುವಾರ ಎರಡು ದಿನ ಧಾರವಾಹಿ ಜಿ.ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಂಜುನಾಥ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?