Saturday, July 27, 2024
Google search engine
Homeತುಮಕೂರು ಲೈವ್ತುರುವೇಕೆರೆಯಲ್ಲಿ ಮನೆ ಮಾತಾದ ಈ ಒಬ್ಬ ಮತದಾರ!

ತುರುವೇಕೆರೆಯಲ್ಲಿ ಮನೆ ಮಾತಾದ ಈ ಒಬ್ಬ ಮತದಾರ!

Publicstory. in


ತುರುವೇಕೆರೆ: ತಾಲ್ಲೂಕಿನ 2 ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆದು ಶೇ.90.30ರಷ್ಟು ದಾಖಲೆಯ ಮತದಾನವಾಗಿದೆ.

ಮತಗಟ್ಟೆಯೊಂದರಲ್ಲಿ ಕೋವಿಡ್ ಸೋಂಕಿತ ಮತದಾರರೊಬ್ಬರು ಪಿಪಿಇ ಕಿಟ್ ಧರಿಸಿಕೊಂಡು ಬಂದು ಮತ ಚಲಾಯಿಸಿದ್ದು ಗಮನ ಸೆಳೆಯಿತು.

ಸೋಂಕಿತನ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಯಿತು. ಮತಗಟ್ಟೆ ಸಿಬ್ಬಂದಿ ಯಾವುದೇ ಭಯ ತೋರದೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಬೆಳಗ್ಗೆ 7 ಗಂಟೆ ಮತದಾನ ಆರಂಭವಾದರೂ 9 ಗಂಟೆಯ ತನಕ ತೀರ ನಿಧಾನಗತಿಯಲ್ಲಿ ಸಾಗಿತು. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಕೃಷಿ ಕಾರ್ಯಚಟುವಟಿಕೆ ಹಾಗು ದನಕರುಗಳ ಮೇಯಿಸಲು ಒಂದೇ ಸಮನೆ ಬಂದಿದ್ದರಿಂದ ಬಿರುಸಿನ ಮತದಾನ ನಡೆಯಿತು.

ವಯಸ್ಸಾದವರು, ವೃದ್ದರು, ಗರ್ಭಿಣಿಯರು, ಅಂಗವಿಕಲು ಮತ್ತು ರೋಗಿಗಳನ್ನು ಬೈಕ್ ಆಟೋಗಳಲ್ಲಿ ಕರೆ ತಂದು ಮತದಾನ ಮಾಡಿಸಲಾಗುತ್ತಿತ್ತು.

ಕೆಲ ಗ್ರಾಮಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಮತ ಚಲಾಯಿಸಲು ಬರುವವರಿಗೆ ಮಾಸ್ಕ್, ತಂಪು ಪಾನೀಯಗ ಹಾಗು ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಿದ್ದರು.

ತಾಲ್ಲೂಕಿನ ವಡಕೇಘಟ್ಟ ಮತಗಟ್ಟೆ ಕೇಂದ್ರದಲ್ಲಿ ಎರಡು ಗುಂಪುಗಳ ನಡುವೆ ಕೆಲ ನಿಮಿಷ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ತಾಲ್ಲೂಕಿನಾದ್ಯಂತ ಮಹಿಳೆಯರು. ಯುವತಿಯ, ಬಹಳ ಉರುಪಿನಿಂದ ಬಂದು ಮತದಾನ ಮಾಡುತ್ತಿದ್ದದು ಕಂಡು ಬಂದಿತು.

ಮಾಜಿ ಶಾಸಕ ಎಚ್.ಬಿ.ನಂಜೇಗೌಡ ವಡಕೇಘಟ್ಟದಲ್ಲಿನ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.

ತಾಲ್ಲೂಕಿನಲ್ಲಿ ಒಟ್ಟು 128236 ಮತದಾರರಿದ್ದು ಆ ಪೈಕಿ115735 ಮತಗಳು ಚಲಾವಣೆಯಾಗಿವೆ.
ತಾಲ್ಲೂಕಿನ 14 ಕೋವಿಡ್ ಸೋಂಕಿತರಲ್ಲಿ ಕೋಳಾಲ1, ಮೇಲಿನವಳಗೇರಹಳ್ಳಿ2, ಮಂಗಿಕುಪ್ಪೆ1, ಹುಲಿಕೆರೆ2, ಒಟ್ಟು 6 ಸೋಂಕಿತ ವ್ಯಕ್ತಿಗಳು ತಮಗೆ ನಿಗಧಿಪಡಿಸಿದ ಸಮಯದಲ್ಲಿ ಮತಚಲಾಯಿಸಿದರು.

ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅವರು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಎಲ್ಲಿಯೂ ಅಹಿತಕರ ಘಟನೆಯು ನಡೆಯದಂತೆ ಪಿಎಸ್ಐ ಪ್ರೀತಂ ಬಂದೋಬಸ್ತ್ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?