Tuesday, July 23, 2024
Google search engine
Homeಜಸ್ಟ್ ನ್ಯೂಸ್ದಿನ ಭವಿಷ್ಯ

ದಿನ ಭವಿಷ್ಯ

ನಿತ್ಯ ಪಂಚಾಂಗ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ದಿನಾಂಕ 23/ 4 /2020,  ಗುರುವಾರ , ಶ್ರೀ ಶಾರ್ವರಿ ನಾಮ ಸಂವತ್ಸರ ,ಚೈತ್ರ ಮಾಸ, ಉತ್ತರಾಯಣ, ವಸಂತಋತು, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ 7: 56 ನಿಮಿಷದವರೆಗೆ, ನಂತರ ಪಾಡ್ಯಮಿ ತಿಥಿ, ನಕ್ಷತ್ರ :- ಅಶ್ವಿನಿ ಮತ್ತು ಭರಣಿ, ಯೋಗ:- ಪ್ರೀತಿ ಮತ್ತು ಆಯುಷ್ಮಾನ್ ,ಕರಣ – ನಾಗವ, ಮಳೆ ನಕ್ಷತ್ರ:- ಅಶ್ವಿನಿ, ದಿಕ್ಕು ಶೂಲೆ:- ದಕ್ಷಿಣ, ಪರಿಹಾರ:- ಎಳ್ಳು, ರಾಜಯೋಗ :- ಈ ದಿನ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭ. ರಾಹುಕಾಲ:-1:52pm to 3:26pm, ಗುಳಿಕಕಾಲ:-09:13am to 10:46am, ಯಮಗಂಡಕಾಲ:-06:06am to 07:39am ಸೂರ್ಯೋದಯ:-6:06am, ಸೂರ್ಯ ಅಸ್ತ:-6:32pm.

ರಾಶಿ ಭವಿಷ್ಯ

ಮೇಷ ರಾಶಿ

ಈ ದಿನ  ಸಮಸ್ಯೆಗಳು  ಹೆಚ್ಚು ಆಗುತ್ತವೆ ಮಾಡುವ ವೃತ್ತಿಯಲ್ಲಿ ತೊಂದರೆಗಳು ಮಿತ್ರರಿಂದ ನೆರೆಹೊರೆಯವರಿಂದ  ಸಹಕಾರ  ಸಿಗದೆ  ಬೇಸರ  ಉಂಟಾಗಬಹುದು ಆದರೂ ಆದರೂ ಸ್ವಲ್ಪ ಪ್ರಮಾಣದ  ನೆಮ್ಮದಿ ತಾಯಿ ಕಡೆಯಿಂದ ದೊರೆಯಬಹುದು ,ವಾಹನ, ಜಮೀನಿನ ಆರ್ಥಿಕ ಚಟುವಟಿಕೆ  ಸ್ವಲ್ಪ ಅನುಕೂಲ ಸಮಾಧಾನ ತರುತ್ತದೆ.

 ವೃಷಭ ರಾಶಿ

  ಈ ದಿನ ಮಿತ್ರರಿಂದ, ನೆರೆಹೊರೆಯವರಿಂದ  ಸಹಾಯ ಸಹಕಾರ ಸಿಗದಿದ್ದರೂ ಬೇರೆ ರೀತಿಯಿಂದ ಅನುಕೂಲ ಸಿಗುತ್ತದೆ,  ಸಂಪಾದನೆ ವಿಚಾರದಲ್ಲಿ ಲಾಭ ಸಿಗುತ್ತದೆ, ಮಾಡುವ ಕೆಲಸಗಳು ಯಶಸ್ಸು ಪಡೆಯುತ್ತವೆ , ಆದರೂ ಸ್ವಲ್ಪ ಪ್ರಮಾಣದ ಅನಾರೋಗ್ಯ, ಭಯ, ಖರ್ಚು ಸಾಯಂಕಾಲದವರೆಗೂ ಇರುತ್ತದೆ.

ಮಿಥುನ ರಾಶಿ

 ಈ ದಿನ ಸಂಗಾತಿಗೆ  ಸುಸ್ತು  ಕಾಣಿಸಬಹುದು  ಇನ್ನುಳಿದಂತೆ ನೀವು ಮಾಡುವ  ಕೆಲಸಗಳಲ್ಲಿ ಯಶಸ್ಸು ಕಾಣುವ ಸಮಯ, ಈ ದಿನ ಶ್ರಮ  ಸ್ವಲ್ಪ  ಲಾಭ ಹೆಚ್ಚು.

ಕಟಕ ರಾಶಿ

  ಈ ದಿನ ಇತರೆ  ತೊಂದರೆ ಕಡಿಮೆಯಾಗಿ ಸಮಸ್ಯೆ ಪರಿಹಾರವಾಗುವ ಅವಕಾಶವಿದೆ ,ಈ ದಿನ ಸಂಗಾತಿಯಿಂದ ಸಹಕಾರ ,ಉತ್ತಮ ಆಹಾರ , ಪಾನೀಯ ಅನುಭವ ,ಸಂತೋಷ ಲಭ್ಯ.

ಸಿಂಹ ರಾಶಿ

  ಈ ದಿನ 75% ರಷ್ಟು ಅಶುಭ ಫಲ ಪಡೆಯುವ ಅವಕಾಶ ಇದೆ, ಇನ್ನುಳಿದಂತೆ ಕೆಲವು ಸಮಸ್ಯೆಗಳು ಹಾಗೆ ಮುಂದುವರೆಯುತ್ತವೆ  , ಸಂತಾನದಿಂದ ಕಿರಿಕಿರಿ ಯಾಗಲಿ ಅಥವಾ ಅನಾರೋಗ್ಯ ವಾಗಲಿ , ಅಥವಾ  ಮಾನಸಿಕ ಕಿರಿಕಿರಿ ಇಲ್ಲವೇ ಭಯದಿಂದ ಉದ್ವೇಗಕ್ಕೆ ಒಳಗಾಗುವ ಎಲ್ಲಾ ಅವಕಾಶಗಳು ಗೋಚರವಾಗುತ್ತವೆ.

ಕನ್ಯಾ ರಾಶಿ

  ಈ ದಿನ ಕೂಡ 75% ರಷ್ಟು ತಲೆ ಬಿಸಿ ಹೆಚ್ಚಾಗುವ  ಅವಕಾಶವಿದೆ ,  ತಾಯಿ ,ವಾಹನ, ಜಮೀನಿನ ಕಿರಿಕಿರಿ ನಿಮಗೆ ಅನಾರೋಗ್ಯ ಅಥವಾ ಅಸಮಾಧಾನ, ಅದೇ ರೀತಿ ವಾಹನದ ಅಪಘಾತ ಭಯವೂ ಇದೆ ,ವಿದ್ಯುತ್ ಆಗಾತ ವಾಗಲಿ ಅಥವಾ ಸರ್ಪದ ವಿಷ ಭಯವಾಗಲಿ ಸಾಯಂಕಾಲದವರೆಗೂ ಹೆಚ್ಚಾಗಿ ಕಾಡುವ ಸಂಭವ ಇದೆ ,ಎಚ್ಚರಿಕೆ ಅಗತ್ಯ.

ತುಲಾ ರಾಶಿ

  ಈ ದಿನ ಬೇರೆಯವರಿಂದ ಸಹಕಾರ ದೊರೆಯುತ್ತಿಲ್ಲ ಎಂಬ ಸ್ವಲ್ಪ ಬಾದೆ ಬಿಟ್ಟರೆ ಇನ್ನುಳಿದಂತೆ ಎಲ್ಲಾ  ಶುಭ ಫಲಗಳು ಬರುತ್ತವೆ, ಆಕಸ್ಮಿಕವಾಗಿ ಅನುಕೂಲಗಳು ಆಗಬಹುದು ,ಲಾಭ ಆಗಬಹುದು, ಆನಂದ ಸಿಗಬಹುದು, ನಿಮ್ಮ ನಿರೀಕ್ಷೆಯಷ್ಟು ಲಾಭ ಬರಬಹುದಾದ ಲಕ್ಷಣಗಳು ಇರುವುದರಿಂದ ಬೇಸರ ದೂರವಾಗುತ್ತದೆ, ಆದ್ದರಿಂದ ಮನೆಯವರೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಅವಕಾಶಗಳು ಇದೆ.

ವೃಶ್ಚಿಕ ರಾಶಿ

  ಈ ದಿನ  75%  ರಷ್ಟು ಹಣದ ಸಮಸ್ಯೆ ಮನಸ್ಸಿಗೆ ಬೇಸರ ಕಾಡುವ ಅವಕಾಶವಿದೆ, ಅಂದುಕೊಂಡ ಕಾರ್ಯಗಳು ಪೂರ್ಣಪ್ರಮಾಣದಲ್ಲಿ ಸಫಲವಾಗದೇ  ಊಟ ಹಾಗೂ ಮಾತಿನ ವಿಚಾರದಲ್ಲಿ ಲಯ ತಪ್ಪುತ್ತದೆ ಆದರೂ ನಿಮಗೆ ಯಾರಾದರೂ ಸಹಾಯ ಮಾಡುವ ಅವಕಾಶ ಇದೆ.

ಧನಸ್ಸು ರಾಶಿ

 ಈ ದಿನ ನಿಮ್ಮ ಮಾತಿಗೆ ಅಥವಾ ಅಭಿಪ್ರಾಯಕ್ಕೆ ಬೆಲೆ ಸಿಗುವ ಅವಕಾಶವಿದೆ,  ಶುಭ  ಫಲಗಳನ್ನು  ಪಡೆಯುವ ಅವಕಾಶ ಇದೆ ,ಸಂಜೆ ನಂತರ ಬೇಸರ ಹಾಗೂ ಶರೀರದ ಉಷ್ಣಾಂಶ  ಕಡಿಮೆ ಆಗುತ್ತದೆ. ಮಕರ ರಾಶಿ

  ಈ ದಿನ ಸುತ್ತಲೂ  ಬರುವ  ಸಮಸ್ಯೆಗಳು ನಿಮಗೆ ಅವಮಾನ  ಹೆಚ್ಚು ಮಾಡುತ್ತವೆ ,ಕೆಲವು ವಿಷಯಗಳು ತಲೆ ಕೆಟ್ಟಂತೆ ಮಾಡುತ್ತವೆ ,ಎಲ್ಲಾ ಕಡೆ ಅಶಾಂತಿ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ , ರಾತ್ರಿಗೆ ನಿದ್ದೆ ಸಮಸ್ಯೆ ಉಂಟಾಗುವ ಅವಕಾಶ ಇದೆ, ಆದ್ದರಿಂದ ದೇವರಿಗೆ ಶರಣಾಗುವುದು ಒಂದೇ ದಾರಿ.

ಕುಂಭ ರಾಶಿ

  ಈ ದಿನ ಸ್ವಲ್ಪ ಹಣ ಖರ್ಚು ಅಥವಾ ಮಾತಿನ ಕರ್ಚು ಆಗಬಹುದು ,ಇನ್ನುಳಿದಂತೆ ನಿಮಗೆ ಬೇರೆಯವರ ,ಮಿತ್ರರ ಕುಟುಂಬಸ್ಥರ  ಸಹಾಯ   ದೊರೆಯುತ್ತದೆ ,ಸಾಡೆಸಾತಿ ಶನಿ, ತೊಂದರೆ ಕಡಿಮೆಯಾಗಿ ಶತ್ರು ಬಾದೆ, ರೋಗಬಾಧೆ ,ಸಾಲದ ಬಾದೆ ಬಗೆಹರಿಯುವ ಅವಕಾಶ ಇದೆ ,ಆಕಸ್ಮಿಕ ಅನುಕೂಲಗಳು ಆಗುತ್ತವೆ. 

ಮೀನ ರಾಶಿ

  ಈ ದಿನ  ನೀವು ಮಾಡುವ  ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತೊಂದರೆಗಳು ಉಂಟಾಗಬಹುದು , ಅಷ್ಟು ಬಿಟ್ಟರೆ ಇನ್ನೂ ಎಲ್ಲಾ ರೀತಿಯಿಂದಲೂ ಲಾಭ , ಅನುಕೂಲ, ವಾಹನ, ಮನೆ  ಸಮಸ್ಯೆಗಳು  ಕಡಿಮೆಯಾಗುವ ಅವಕಾಶ ಇದೆ. ಶಾಂತಿ:- ಈ ದಿನ ನಿಮ್ಮ ಇಷ್ಟ ಗುರುಗಳನ್ನು ಸ್ಮರಣೆ ಮಾಡುವುದು ಹಾಗೂ ರಾಘವೇಂದ್ರ ಅಥವಾ ಸಾಯಿಬಾಬಾ ಅಥವಾ ಶಿವನಿಗೆ ನಮಸ್ಕಾರ ಮಾಡಿಕೊಳ್ಳುವುದು ಉತ್ತಮ,” ಓಂ ಗುರುವೇ ನಮಃ” ಈ ಮಂತ್ರ ಗಳನ್ನು 108 ಬಾರಿ ಪಠಿಸುವುದು ಉತ್ತಮ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?