Friday, March 29, 2024
Google search engine
HomeUncategorizedದೇವರಹಳ್ಳಿ ಧನಂಜಯ ಬರೆದ ಲಾಕ್ಡೌನ್ ಕವಿತೆ

ದೇವರಹಳ್ಳಿ ಧನಂಜಯ ಬರೆದ ಲಾಕ್ಡೌನ್ ಕವಿತೆ

ಕಾಲ ನಿಂತಂತಿದೆ. ಉಸಿರೂ
ನಿಲ್ಲಬಹುದು. ಸಮಯ
ಹೆಚ್ಚಿಲ್ಲ .ಏನಾದರೂ ಒಳ್ಳೆಯದ ಮಾಡಬೇಕು.
ನಡೆಯಲ್ಲದ ನಡೆಯ ನಿಲ್ಲಿಸಿ,
ಸರಿ ನಡೆಯ ನಿಂತು ಯೋಚಿಸಬೇಕು.

ಸೋಪು, ಸ್ಯಾನಿಟೈಸರ್ ಬಳಸಿ ,
ಕೈ ತೊಳೆಯಬೇಕು.
ಹೃದಯದ ನೆಲ್ಲಿಕಾಲ ಮೇಲೆ,
ಪ್ರೀತಿಪಾತ್ರರ ಒಳಿತಿಗೆ ಮನಸು
ಕಾವು ಕುಂತಿದೆ.
ಶುದ್ಧ ಹಸ್ತನೂ, ಶುದ್ಧ ಮನಸ್ಕನೂ,
ಆಗುವ ಹಂಬಲ ಹೆಚ್ಚಾಗಿದೆ.

ಜತೆಗೇ ಇದ್ದು ,ಸಂಬಂಧಗಳ ಒಟ್ಟಿಗೆ,
ಫಾರಿನರ್ ಆಗಿರುವೆ.
ನನ್ನ ನಾ ,ಮರೆತು, ಮಗನೊಟ್ಟಿಗೆ ಆಡಬೇಕು.
ಅಪ್ಪನ ಮಂಡಿ ನೋವು,ಅಮ್ಮನ ಬಿಪಿ ಜತೆ ಮಾತನಾಡಬೇಕು
ಮಡದಿಯ ಕನಸು ಆಲಿಸಬೇಕು
ಕ್ವಾರನ್ ಟೈನ್ ಆಗಬೇಕು.

ಮೊದಲೆಲ್ಲಾ ಹೀಗೆ ಆಗುತ್ತಿರಲಿಲ್ಲ.
ಕಂಡ ಮುಖ ಗಳಲ್ಲೆಲ್ಲ
ಪ್ರೀತಿಪಾತ್ರರು ಇಣುಕುತ್ತಿರಲಿಲ್ಲ.
ಪೊಲೀಸ್ ಮುಖದಲ್ಲಿ ಅಣ್ಣ,
ನರ್ಸ್ ಮುಖದಲ್ಲಿ ತಂಗಿ,
ಸಂಬಂಧಗಳು ಕಾಣುತ್ತಿವೆ
ರಸ್ತೆಗಿಳಿದಾಗ ಮಾಸ್ಕ್ ಧರಿಸಬೇಕು.

ಎಲ್ಲರೂ ನಮ್ಮವರೇ
ಎಂದು ಹೇಳಲು
ಮದ್ದಿಲ್ಲದ ರೋಗವೇ ಬರಬೇಕಾ?
ಮನಸ್ಸು ಕೇಳಿದೆ
ನೀನು ಮನುಷ್ಯನಾ?


ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರಹಳ್ಖಿಯವರಾದ ಧನಂಜಯ ವೃತ್ತಿಯಲ್ಲಿ ಶಿಕ್ಷಕರು. ಕೆಲಕಾಲ ಪ್ರಜಾವಾಣಿ ವರದಿಗಾರರಾಗಿದ್ದ ಅವರು ಹಲವು ಮಹತ್ವದ ವರದಿಗಳನ್ನು ಮಾಡಿದ್ದಾರೆ. ಸಮಾಜ, ಪರಿಸರ, ಸಮಾನತೆ, ನೀರು, ಕಾಡು ಹೀಗೆ ಅನೇಕ‌ ಹೋರಾಟಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?