ಕಾಲ ನಿಂತಂತಿದೆ. ಉಸಿರೂ
ನಿಲ್ಲಬಹುದು. ಸಮಯ
ಹೆಚ್ಚಿಲ್ಲ .ಏನಾದರೂ ಒಳ್ಳೆಯದ ಮಾಡಬೇಕು.
ನಡೆಯಲ್ಲದ ನಡೆಯ ನಿಲ್ಲಿಸಿ,
ಸರಿ ನಡೆಯ ನಿಂತು ಯೋಚಿಸಬೇಕು.
ಸೋಪು, ಸ್ಯಾನಿಟೈಸರ್ ಬಳಸಿ ,
ಕೈ ತೊಳೆಯಬೇಕು.
ಹೃದಯದ ನೆಲ್ಲಿಕಾಲ ಮೇಲೆ,
ಪ್ರೀತಿಪಾತ್ರರ ಒಳಿತಿಗೆ ಮನಸು
ಕಾವು ಕುಂತಿದೆ.
ಶುದ್ಧ ಹಸ್ತನೂ, ಶುದ್ಧ ಮನಸ್ಕನೂ,
ಆಗುವ ಹಂಬಲ ಹೆಚ್ಚಾಗಿದೆ.
ಜತೆಗೇ ಇದ್ದು ,ಸಂಬಂಧಗಳ ಒಟ್ಟಿಗೆ,
ಫಾರಿನರ್ ಆಗಿರುವೆ.
ನನ್ನ ನಾ ,ಮರೆತು, ಮಗನೊಟ್ಟಿಗೆ ಆಡಬೇಕು.
ಅಪ್ಪನ ಮಂಡಿ ನೋವು,ಅಮ್ಮನ ಬಿಪಿ ಜತೆ ಮಾತನಾಡಬೇಕು
ಮಡದಿಯ ಕನಸು ಆಲಿಸಬೇಕು
ಕ್ವಾರನ್ ಟೈನ್ ಆಗಬೇಕು.
ಮೊದಲೆಲ್ಲಾ ಹೀಗೆ ಆಗುತ್ತಿರಲಿಲ್ಲ.
ಕಂಡ ಮುಖ ಗಳಲ್ಲೆಲ್ಲ
ಪ್ರೀತಿಪಾತ್ರರು ಇಣುಕುತ್ತಿರಲಿಲ್ಲ.
ಪೊಲೀಸ್ ಮುಖದಲ್ಲಿ ಅಣ್ಣ,
ನರ್ಸ್ ಮುಖದಲ್ಲಿ ತಂಗಿ,
ಸಂಬಂಧಗಳು ಕಾಣುತ್ತಿವೆ
ರಸ್ತೆಗಿಳಿದಾಗ ಮಾಸ್ಕ್ ಧರಿಸಬೇಕು.
ಎಲ್ಲರೂ ನಮ್ಮವರೇ
ಎಂದು ಹೇಳಲು
ಮದ್ದಿಲ್ಲದ ರೋಗವೇ ಬರಬೇಕಾ?
ಮನಸ್ಸು ಕೇಳಿದೆ
ನೀನು ಮನುಷ್ಯನಾ?
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರಹಳ್ಖಿಯವರಾದ ಧನಂಜಯ ವೃತ್ತಿಯಲ್ಲಿ ಶಿಕ್ಷಕರು. ಕೆಲಕಾಲ ಪ್ರಜಾವಾಣಿ ವರದಿಗಾರರಾಗಿದ್ದ ಅವರು ಹಲವು ಮಹತ್ವದ ವರದಿಗಳನ್ನು ಮಾಡಿದ್ದಾರೆ. ಸಮಾಜ, ಪರಿಸರ, ಸಮಾನತೆ, ನೀರು, ಕಾಡು ಹೀಗೆ ಅನೇಕ ಹೋರಾಟಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ.