Thursday, July 25, 2024
Google search engine
Homeತುಮಕೂರ್ ಲೈವ್ದೇಶಾದ್ಯಂತ ಸಹಜ ಬೇಸಾಯ: ಕೆ.ಎನ್.ಗೋವಿಂದಾಚಾರ್ಯ ಕರೆ

ದೇಶಾದ್ಯಂತ ಸಹಜ ಬೇಸಾಯ: ಕೆ.ಎನ್.ಗೋವಿಂದಾಚಾರ್ಯ ಕರೆ

Publicstory


ತುಮಕೂರು: ನಿಸರ್ಗಾಧಾರಿತ ಕೃಷಿ ಪ್ರಯೋಗಗಳು ಹಾಗೂ ಜೀವ ಪರಿಸರವನ್ನೊಳಗೊಂಡ ಸಹಜಬೇಸಾಯ ಪದ್ಧತಿಯನ್ನು ದೇಶಾದ್ಯಂತ ಕೊಂಡೊಯ್ಯಬೇಕೆಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಕರೆಕೊಟ್ಟರು.

ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನ ಗಾಂಧಿ ಸಹಜ ಬೇಸಾಯಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧೀ ಸಹಜ ಬೇಸಾಯ ಮಾದರಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹಜ ಬೇಸಾಯವನ್ನು ತಮ್ಮ ಪ್ರದೇಶಗಳಲ್ಲಿ ಅನುಸರಿಸುವ ಮೂಲಕ ಜನಂದೋಲನವಾಗಿಸಬೇಕು ಎಂದರು.

ಬಡವರಿಗೆ ಬೇಕಾದ ವ್ಯವಸ್ಥೆಯನ್ನು ದೇಶ ಮತ್ತು ರಾಜಕಾರಣ ಒಪ್ಪಿಕೊಳ್ಳಬೇಕು ಹಾಗೂ ಇಡೀ ದೇಶಕ್ಕೆ ಆಶ್ರಮದ ಮಾದರಿಯನ್ನು ಪಾಲಿಸಿ ರೂಪದಲ್ಲಿ ತರಬೇಕು. ರಾಸಾಯನಿಕ ಗೊಬ್ಬರಗಳನ್ನು ಬಳಸದೆ ರೈತರು ಕಷಿ ಮಾಡಬೇಕು. ಭಾರತದ ಪ್ರತಿಯೊಬ್ಬ ರೈತ ಮತ್ತು ಅವರ ಭೂಮಿ ವಿಶಿಷ್ಟವಾದದ್ದು, ಅದನ್ನು ಗೌರವಿಸಿ ಕೃಷಿ ಮಾಡಿದರೆ ಯಶಸ್ವಿಯಾಗುತ್ತೇವೆ. ಇದರ ತುರ್ತು ಇಂದಿಗಿದೆ ಎಂದರು.

ಸಹಜಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಮಾತನಾಡಿ, ಹವಾಮಾನ ಬದಲಾವಣೆ, ನಿರುದ್ಯೋಗ, ವಲಸೆ, ಅಪೌಷ್ಟಿಕತೆಯಂತಹ ತಾರತಮ್ಯಗಳನ್ನು ಹೋಗಲಾಡಿಸಬೇಕಾದರೆ ವ್ಯವಸ್ಥೆ ವಿಕೇಂದ್ರೀಕರಣವಾಗಬೇಕು. ಇಲ್ಲವಾದರೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತದೆ. ಕಾರ್ಪೊರೇಟೀಕರಣವನ್ನು ಧಿಕ್ಕರಿಸಿ ಗುಡಿ ಕೈಗಾರಿಕೆಗಳತ್ತ ಸಾಗಿದಾಗ ಮಾತ್ರ ಜನರು ನೆಮ್ಮದಿಯಿಂದ ಬದುಕುತ್ತಾರೆ ಎಂದರು.

ಎಡ ಮತ್ತು ಬಲ ಸೇರಿಸಂತೆ ಎಲ್ಲಾ ಪಂಥದವರೂ ಒಂದಾಗಿ ಮಧ್ಯಮ ಮಾರ್ಗದಲ್ಲಿ ಮುನ್ನಡೆಯುವ ಅಗತ್ಯವಿದೆ. ಕೃಷಿ ಮತ್ತು ಗುಡಿ ಕೈಗಾರಿಕೆಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಸ್ಥಳೀಯತೆಯನ್ನು ವಿಸ್ತರಿಸಿಕೊಂಡರೆ ಬಂಡವಾಳ ಶಾಹಿಗಳನ್ನು ಬಗ್ಗು ಬಡಿಯಬಹುದು ಎಂದು ತಿಳಿಸಿದರು. ಈ ವೇಳೆ ಶ್ರೀಲಂಕಾ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಕೃಷಿಗೆ ಬಳಸುವ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಭಾರತದೆಲ್ಲೆಡೆ ಪಾಲಿಸಿ ರೂಪದಲ್ಲಿ ಬರಬೇಕು ಎಂಬ ಚರ್ಚೆಯಾರಿತು.

ಕಾರ್ಯಕ್ರಮದಲ್ಲಿ ಜನ ಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್, ಚಿಂತಕ, ಪರಿಸರವಾದಿ ಸಿ.ಯತಿರಾಜು ಹಾಗೂ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕರ್ತರು ಸೇರಿದಂತೆ ವಿವಿಧ ರಾಜ್ಯದ ಸ್ವಯಂ ಸೇವಕರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?