Saturday, April 20, 2024
Google search engine
Homeಜನಮನನನಗೆ ನನ್ನ ಭಾರತ ಬೇಕು

ನನಗೆ ನನ್ನ ಭಾರತ ಬೇಕು

ಲೇಖನ: ಮನೋಹರ ಪಟೇಲ್


“ಜಗತ್ತಿಗೆ ಸಹಿಷ್ಣುತೆ ಮತ್ತು ವಿಶ್ವವ್ಯಾಪಿ ಸ್ವೀಕಾರ ಮನೋಧರ್ಮವನ್ನು ಕಲಿಸಿದ ಧರ್ಮಕ್ಕೆ ಸೇರಿದವನೆಂದು ನನಗೆ ಹೆಮ್ಮೆಇದೆ. ನಾವುಗಳು ವಿಶ್ವವ್ಯಾಪಿ ಸಹಿಷ್ಣತೆಯಳ್ಳವರು ಮಾತ್ರವಲ್ಲ, ಜಗತ್ತಿನ ಎಲ್ಲಾ ಧರ್ಮಗಳು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ಈ ಭೂಮಿಯ ಮೇಲಿನ ಎಲ್ಲಾ ರಾಷ್ಠ್ರಗಳ ಧರ್ಮಗಳ ನಿರಾಶ್ರಿತರು ಮತ್ತು ಕಿರುಕುಳಕ್ಕೆ ಒಳಪ್ಪಟ್ಟವರಿಗು ಆಶ್ರಯ ನೀಡಿದ ದೇಶಕ್ಕೆ ಸೇರಿದವನು ಎಂದು ನನಗೆ ಹೆಮ್ಮೆ ಇದೆ. “
~ ಸ್ವಾಮಿ ವಿವೇಕಾನಂದ, ಸೆಪ್ಟಂಬರ್ 11,1893. ಅಮೇರಿಕಾದ ಚಿಕ್ಯಾಗೋದಲ್ಲಿ ನೆಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣದ ಕೆಲವು ವಿಚಾರ.

ವಿವೇಕಾನಂದರು ಹೇಳಿದ ಭಾರತ ಅದು.

“ಹೇಗೆ ವಿವಿಧ ಜಲತೊರೆಗಳು ಹರಿದು ಕೊನೆಗೆ ಸಮುದ್ರವನ್ನು ಸೇರುತ್ತದೆಯೋ ; ಹಾಗೆಯೇ, ಓ ದೇವ ! ಭಿನ್ನ ಭಿನ್ನವಾದ ಪ್ರವೃತ್ತಿಗಳ ಮೂಲಕ ಮನುಷ್ಯರು ಆಯ್ದುಕೊಳ್ಳುವ ವಿಭಿನ್ನ ಮಾರ್ಗಗಳು, ನೇರವಾಗಿಯೋ ಅಥವ ವಕ್ರವಾಗಿಯೋ, ಬಗೆಬಗೆಯಾಗಿ ಕಾಣಿಸಿದರು ಕೂಡ, ಅವೆಲ್ಲವೂ ನಿಮ್ಮನೇ ಸೇರುತ್ತವೆ.” ಎಂದು ದಿನವು ಪ್ರಾರ್ಥನೆ ಮಾಡುತ್ತಿದ್ದ ಭಾರತ ಅದು.

“ ಜಾತಿ,ನೀತಿ,ಕುಲ,ಗೋತ್ರದಿಂದ ಅನಂತ ದೂರಕ್ಕಿರುವ, ನಾಮ,ರೂಪ,ಗುಣ,ದೋಷಗಳಿಂದ ವರ್ಜಿತವಾಗಿರುವ, ಸತ್ಯವು-ಪ್ರಜ್ಙೆಯಳ್ಳ-ಆನಂದ ಸ್ವರೂಪಿಗಳು ನಾವುಗಳೆಲ್ಲರೂ ಎಂದು ಧ್ಯಾನಿಸುತ್ತಿದ್ದ ಭಾರತವದು.

ಬುದ್ದ, ಬಸವ, ಅಂಬೇಡ್ಕರ್ ಮತ್ತು ಗಾಂಧಿಯವರ ಪರಮ ಸತ್ಯವು, ಸಮಾನತೆಯು, ಅಹಿಂಸಯುತವು ಮತ್ತು ಸೌಹಾರ್ದಯುತವು ಆಗಿ ನೆಡೆದ ಭಾರತ.

ಆದರೆ , ಇಂದು ನನ್ನ ಬಂಧುಗಳು, ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರುಗಳು ತಿಳಿದು ಕೊಂಡಿರುವ ಭಾರತ ಪರಧರ್ಮ ಅಸಹಿಷ್ಣುತೆ ಮತ್ತು ತಿರಸ್ಕಾರ ಮನೋಧರ್ಮ ದ ಭಾರತ.

ಜ್ಞಾನ-ಶಾಂತಿ-ಸೌಹಾರ್ಧತೆಯ ಸನ್ಯಾಸ ಭಾರತದಲ್ಲಿ ಇಂದು ಅಜ್ಞಾನಿ-ಕಪಟಿ-ಕ್ರೂರಿ- ಸನ್ಯಾಸಿಗಳ! ಭಾರತದವಾಗಿದೆ.

ಪುರೋಹಿತ ಶಾಹಿಗಳಜೋತಿಷ್ಯ-ಹೋಮ-ಹವನಗಳೇ ಹಿಂದು ಧರ್ಮವೆಂದು ತಿಳಿದುಕೊಂಡ ಭಾರತವಾಗುತ್ತಿದೆ.

ಜ್ಞಾನಿಗಳು ಕುಳಿತು ಹೋದ ಸ್ಥಳವನ್ನು ಸಗಣಿಯಿಂದ ಶುದ್ದಿ ಮಾಡಿಕೊಳ್ಳವ ಭಾರತವಾಗುತ್ತಿದೆ.!!

ದೇವರು-ಧರ್ಮದ ಹೆಸರಲ್ಲಿ ಚೀಟಿಹರಿದು ವ್ಯಾಪಾರ ಮಾಡುತ್ತಿರುವ ಭಾರತವಾಗುತ್ತಿದೆ.

ಆತ್ಮಸಾಕ್ಷಾತ್ಕಾರ ಮಾರ್ಗ ನೀಡಿದ ಪತಂಜಲಿ ಯೋಗಿಯ ಹೆಸರನ್ನು ಇಂದು ಟಾಯ್ಲೆಟ್ ಕ್ಲೀನಿಂಗ್ ದ್ರವದ ಹೆಸರನ್ನಾಗಿಸಿದ ಭಾರತ, ಆಧ್ಯಾತ್ಮಿಕವಾಗಿ ಸೋತಿದೆ.

ನೀವು ನಾವೆಲ್ಲರೂ ಭಾರತವನ್ನು ಸೋಲಿಸಿದ್ದೇವೆ. ನನಗೆ ನನ್ನ ಭಾರತ, ಭಾರತವಾಗಿಯೇ ಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?