ಜಸ್ಟ್ ನ್ಯೂಸ್

ನಾಗಲಮಡಿಕೆಯಲ್ಲಿ ಷಷ್ಠಿಯಂದು ಅನ್ನದ ರಾಶಿ ಇಬ್ಬಾಗವಾಗುತ್ತದೆ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಮಾರ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ, ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆಯಿತು.

ಕುಮಾರ ಷಷ್ಠಿ ಪ್ರಯುಕ್ತ ಬೆಳಿಗ್ಗೆಯಿಂದ ವಿಶೇಷ ಅಲಂಕಾರಏಕಾದಶ ರುಧ್ರಾಭಿಷೇಕಪಂಚಾಮೃತ ಅಭಿಷೇಕಪ್ರಾಕಾರೋತ್ಸವ

ಇತ್ಯಾದಿ ಪೂಜೆಯ ನಂತರ ಉತ್ಸವ ಮೂರ್ತಿಯನ್ನು ಅನ್ನದ ರಾಶಿಯ ಮೇಲಿರಿಸಿ ಪೂಜೆ ಸಲ್ಲಿಸಲಾಯಿತು.

ಅನ್ನದ ರಾಶಿ ಇಬ್ಬಾಗವಾಗುವುದನ್ನು ನೆರೆದಿದ್ದ ಭಕ್ತಾದಿಗಳು ಕುತೂಹಲದಿಂದ ವೀಕ್ಷಿಸಿದರು.

   ಪೂಜೆಗಾಗಿ ಆಗಮಿಸಿದ್ದ ಸಹಸ್ರಾರು ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರುದೇಗುಲ ಪ್ರಾಂಗಣ, ದೇಗುಲದ ಮುಂದಿರುವ ನಾಗರ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.

ಜಾತ್ರೆಯಲ್ಲಿ ಬಳೆ, ಬೆಂಡು ಬತ್ತಾಸು, ಆಟಿಕೆಗಳನ್ನು ಕೊಂಡು ಮಹಿಳೆಯರು ಮಕ್ಕಳು ಸಂಭ್ರಮಿಸಿದರು.

Comment here