Saturday, July 27, 2024
Google search engine
Homeತುಮಕೂರ್ ಲೈವ್ನಿಧನ ವಾರ್ತೆ

ನಿಧನ ವಾರ್ತೆ

ಎಚ್.ಜಿ.ರಾಮಮೂರ್ತಿ
ಕೊರಟಗೆರೆ:
ಸಾಗ್ಗೆರೆ ಐನೋರು ಎಂದೇ ಪ್ರಖ್ಯಾತಿ ಹೊಂದಿದ್ದ ತಾಲ್ಲೂಕಿನ ಚಿಕ್ಕಸಾಗ್ಗೆರೆಯ ಎಚ್.ಜಿ.ರಾಮಮೂರ್ತಿ(57) ಅನಾರೋಗ್ಯದಿಂದ ಶುಕ್ರವಾರ ಬೆಳಗಿನಜಾವ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಮೂಲತಃ ತಾಲ್ಲೂಕಿನ ಹೊಳವನಹಳ್ಳಿಯವರಾದ ರಾಮಮೂರ್ತಿ ಅವರು ಚಿಕ್ಕಸಾಗ್ಗೆರೆಯಲ್ಲಿ ನೆಲೆಸಿದ್ದರು. ತಾಲ್ಲೂಕು ಸಮಾಜಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ 2013ರಿಂದ ಕೆಲಸ ನಿರ್ವಹಿಸುತ್ತಿದ್ದರು. ಈ ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದರು. ತಾಲ್ಲೂಕಿನ ಸುಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಲಕ್ಷದೀಪೋತ್ಸವವನ್ನು ಹನುಮಜಯಂತಿಯಂದು ಕಳೆದ ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಸ್ವಂತ ಖರ್ಚಿನಲ್ಲಿ ಪ್ರಾರಂಭಿಸಿದ್ದರು. ಹಾಗಾಗಿಯೇ ನಾಲ್ಕು ವರ್ಷದಿಂದ ಪ್ರತೀ ವರ್ಷ ಸ್ಥಳೀಯರೆ ಸಹಕಾರದೊಂದಿಗೆ ಇವರ ನೇತೃತ್ವದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗುತ್ತಿತ್ತು. ಜೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ಅವರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕು ಹಾಗೂ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜನರಲ್ಲಿ ಅಪಾರವಾದ ಪ್ರಖ್ಯಾತಿ ಪಡೆದಿದ್ದರು. ಜ್ಯೋತಿಷ್ಯದಲ್ಲಿ ಅಪಾರ ಜ್ಞಾನ ಹೊಂದಿದ್ದರೂ ಕೂಡ ಯಾವುದೇ ಬೂಟಾಟಿಕೆ ಮಾಡದೇ ಹಾಗೂ ಜನರಿಂದ ಯಾವುದೇ ರೀತಿಯ ಹಣಕ್ಕೆ ಆಸೆ ಪಡೆದೆ ಅನೇಕ ಜನಸಾಮಾನ್ಯರೂ ಸೇರಿದಂತೆ ಜನಪ್ರನಿಧಿಗಳ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದರು. ಸಮಸ್ಯೆಯಿಂದ ಬಳಲುವ ಸಾಕಷ್ಟು ಜನರು ರಾಮಮೂರ್ತಿ ಅವರ ಬಳಿ ಬಂದ ನಂತರ ಪರಿಹಾರ ಕಂಡುಕೊಂಡು ಉತ್ತಮ ಸ್ಥಿತಿ ತಲುಪಿರುವ ಬಹಳಷ್ಟು ಉದಾಹರಣೆ ಸಿಗುತ್ತವೆ. ಆ ಕಾರಣದಿಂದಾಗಿ ಮೃತರ ಅಂತಿಮ ದರ್ಶನಕ್ಕೆ ವಿವಿಧ ಕಡೆಗಳಿಂದ ಸಾವಿರಾರು ಜನ ಬಂದಿದ್ದರು. ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಸೇರಿದಂತೆ ಅನೇಕ ಗಣ್ಯರು ಹಾಗೂ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಚಿಕ್ಕಸಾಗ್ಗೆರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರು ಸುಮಾರು ಎಂಟು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಮೃತರ ಅಂತ್ಯಸಂಸ್ಕಾರ ಚಿಕ್ಕಸಾಗ್ಗೆರೆಯಲ್ಲಿ ನೆರವೇರಿತು. ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?