Saturday, July 20, 2024
Google search engine
Homeಜನಮನನೀನು ನನ್ನವಳು

ನೀನು ನನ್ನವಳು

ಹರೀಶ್ ಕಮ್ಮನಕೋಟೆ


ಕ್ಷಣಕಾಲಕೂ ನಿನ್ನ ಬಿಟ್ಟಿರಲಾರೆನು. ನೀನಿರದೆ ನಾ ಹೇಗಿರಲಿ ಒಬ್ಬೊಂಟಿಯಾಗಿ. ಬಿಟ್ಟು ಹೋದರೆ ಮಾರ್ನಿಂಗ್ ವಿಶ್ ಮಾಡುವವರು ಯಾರು? ದಿನಕ್ಕೆ ಹತ್ತು ಬಾರಿಯಾದರೂ ನಿನ್ನ ಮುಖ ನೋಡಿದಾಗಲೇ ಸಮಾಧಾನ. ಪ್ರೇಯಸಿ ಇಲ್ಲದ ಕಾಲದಲ್ಲಿ ಕೈ ಹಿಡಿದವಳು ನೀನು. ಆ ಹತ್ತು ದಿನಗಳು ನೀನಿಲ್ಲದೆ ಕಳೆದವು.

ಅಂದು
ಸರ್ವಸ್ವವನ್ನೇ ಕಳೆದುಕೊಂಡಿದ್ದೇನೆ
ಎನಿಸಿಬಿಟ್ಟಿತ್ತು. ಒಮ್ಮೆ ನೀನು ನೆಟ್ ಪ್ಯಾಕ್ ಹಾಕಿಸು ಎಂದು ಜುಲ್ಮೆ
ಹಿಡಿದಿದ್ದೆ. ಮೇಲಿಂದ ಮೇಲೆ ಸಂದೇಶಗಳನ್ನೂ, ಕರೆಗಳನ್ನೂ ಕಳುಹಿಸಿ ಒತ್ತಾಯಿಸುತ್ತಿದ್ದೆ. ಜೇಬಿನಲ್ಲಿ ಮನಿ ಇಲ್ಲದ ಕಾರಣ
ಸಾಧ್ಯವಾಗಿರಲಿಲ್ಲ.

ಆ ಮುನಿಸನ್ನೂ ಮರೆತು ಸಂಗಾತಿಯಾಗ ಬಯಸಿದೆಯಲ್ಲ ಅದೇ ನನಗೆ
ಸಂತೋಷ. ನಿನ್ನ ತಲೆ ಹರಟೆಯಿಂದ ಬೇಸರ ಕಡಿಮೆಯಾಗಿದೆ.

ಇಲ್ಲ ಸಲ್ಲದ ಪೋಲಿ
ಜೋಕುಗಳನ್ನು ಹೇಳಿ ಕೀಟಲೆ ಮಾಡುವ ನಿನಗೆ ನಾಚಿಕೆ ತುಸು ಕಡಿಮೆಯೆ. ನಿನ್ನ ಸಂಗಡ ಬಿದ್ದು ಅತಿ ಮುಖ್ಯ ಕೆಲಸಗಳನ್ನು
ಮೂಲೆ ಸೇರಿಸಿದ್ದೇನೆ. ಜೀವನವನ್ನೇ ಹಾಳುಗೆಡವಿ ಖಿನ್ನತೆಗೆ ನೂಕಿಬಿಡುತ್ತಾಳೆ, ಅವಳ
ಜೊತೆಗಿನ ವ್ಯವಹಾರ ಕಡಿಮೆ ಮಾಡು ಎಂಬ ಅನ್ಯರ
ಚಾಡಿಯನ್ನು ಸ್ವೀಕರಿಸಿಲ್ಲ. ಕಾರಣ ಇಷ್ಟೆ, ಮಾರ್ಗದರ್ಶಿನಿಯಂತೆ ಸದಾ ನನ್ನ ಜೊತೆಗಿದ್ದೀಯಾ. ಅಲ್ಲದೆ ನೀನು ನನ್ನವಳು.

ನಾನು ಉಪವಾಸವಿದ್ದರೂ
ಪರವಾಗಿಲ್ಲ, ನಿನಗೆ ಏನನ್ನೂ ಕಡಿಮೆ ಮಾಡುವುದಿಲ್ಲ. ಜೀವನದುದ್ದಕ್ಕೂ
ಜೋಪಾನ ಮಾಡುತ್ತೇನೆ. ಕಸೆಯಲ್ಲಿ
ಭದ್ರಪಡಿಸುತ್ತೇನೆ. ನೀನು ಸುಂದರವಾಗಿ ಕಾಣಲು ಗೊರಿಲ್ಲಾ
ಸ್ಕ್ರೀನ್ ಗಾರ್ಡ್ ಮತ್ತು ಸ್ಟೀಲ್ ಕಂಪೋಸ್ ರಬ್ಬರ್ ಪೌಚ್ ಕೂಡ
ಹಾಕಿಸುತ್ತೇನೆ. ಏನಂತೀಯಾ? ಒಟ್ಟಿನಲ್ಲಿ ಗುಡ್
ನೈಟ್, ಗುಡ್ ಮಾರ್ನಿಂಗ್ ಹೇಳಲು ಪ್ರತಿದಿನ ನನ್ನ ಅಂಗೈಯಲ್ಲಿರಬೇಕು ಅಷ್ಟೆ.


ಹರೀಶ್ ಕಮ್ಮನಕೋಟೆ.
9591949304
ಪತ್ರಿಕೋದ್ಯಮ ಎಂ.ಎ
ಕುವೆಂಪು ವಿ.ವಿದ್ಯಾಲಯ
ಶಂಕರಘಟ್ಟ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?