Saturday, July 27, 2024
Google search engine
Homeಜನಮನಪಾವಗಡ, ಕೊರಟಗೆರೆ ವಿದ್ಯಾರ್ಥಿಗಳ ಝಲಕ್ ಗೆ ಮನಸೋತ ಉತ್ತರಖಂಡ್ ಜನ...

ಪಾವಗಡ, ಕೊರಟಗೆರೆ ವಿದ್ಯಾರ್ಥಿಗಳ ಝಲಕ್ ಗೆ ಮನಸೋತ ಉತ್ತರಖಂಡ್ ಜನ…

ಡಾ.ಓ.ನಾಗರಾಜ್


Tumkuru: ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವ ಸಂಗೀತ ನೃತ್ಯಕಲೆಯು ಭಿನ್ನಭಾಷಿಗರ ನಡುವೆ ಭಾವನಾತ್ಮಕಅನು ಸಂಧಾನವನ್ನು ಮತ್ತು ಪ್ರೀತಿ ಸ್ನೇಹಗಳ ಬಾಂದವ್ಯವನ್ನು ಕ್ಷಣ ಮಾತ್ರದಲ್ಲಿ ವೃದ್ಧಿಸುವ ಕಾರ್ಯಕಾರಣ ಸಂಬಂಧದ ಪ್ರಕ್ರಿಯೆ ನಿಜಕ್ಕೂಅಚ್ಚರಿ ಮೂಡಿಸುವಂತದ್ದು.

ಪರಸ್ಟರ ಭಾವನೆಗಳ ವಿನಿಮಯಕ್ಕೆ ಭಾಷೆ ಮಾಧ್ಯಮವಾಗಿರುವುದು ಸಾಮಾನ್ಯ ಸಂಗತಿ.ಅದೇಅನ್ಯಭಾಷಿಗರ ಮಧ್ಯೆ ಸಂವಹನ ಏರ್ಪಟ್ಟಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮತ್ತು ಪ್ರತಿಕ್ರಿಯಿಸುವಾಗಿನ ಭಾಷಾತೊಡಕು ಅಷ್ಟಿಷ್ಟಲ್ಲ.

ಪರಿಚಿತವಲ್ಲದ ಭಾಷೆ ಅದನ್ನಾಡುವಜನರ ಪ್ರಾದೇಶಿಕತೆಯ ವಿಚಾರ ಹಾಗೂ ಅವರಜೀವನಾಡಿಯಾಗಿರುವ ಪರಂಪರೆಯೊಂದಿಗೆ ಮಗದೊಂದು ಭಾಷಿಕ ಹಿನ್ನೆಲೆಯುಳ್ಳವರಿಗೆ ಮುಖಾಮುಖಿಯಾಗುವಾಗ ಖಂಡಿತ ಅಲ್ಲೊಂದು ಸಣ್ಣ ಆತಂಕ ಏರ್ಪಡುತ್ತದೆ.

ಸಂವಾದಿಸಲಾಗದ ಕೀಳರಿಮೆಯೊಂದು ಸುಳಿದಾಡುತ್ತದೆಇಂತಹ ಆತಂಕ : ಕೀಳರಿಮೆಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಪ್ರೇರಿತವಾದ ಸಂಗೀತ ನೃತ್ಯದಂತಹ ಲಲಿತ ಕಲೆ ಸಮೂಹ ಮಾಧ್ಯಮಿಕ ಭಾಷೆಯಾಗಿ ನೆರವಿಗೆ ಬಂದು ಪರಸ್ಟರ ಬೆಸುಗೆಗೆ ಕಾರಣವಾಗಿ ಎರಕದಂತೆ ಪಾತ್ರ ನಿರ್ವಹಿಸುವುದು ನಿಜಕ್ಕೂ ಸೋಜಿಗದ ಸಂಗಂತಿ.

ಒಂದರ್ಥದಲ್ಲಿ ಸಂಗೀತ ನೃತ್ಯರೂಪಕವು ಕಲೆಯಾಗಿ ಮತ್ತು ವಿಶ್ವಾತ್ಮಕ ಪರಿಭಾಷೆಯಾಗಿ ರೂಪಾಂತರಗೊಳ್ಳುವುದು ಪವಾಡವೆ ಸರಿ. ಹಾಗಾಗಿ ಕಲೆಯಾಗಿ ಮತ್ತು ಹೃನ್ಮನಗಳ ಬೆಸೆಯುವ ವಿಶಿಷ್ಟ ಭಾಷೆಯಾಗಿ ಸಂಗೀತ ನೃತ್ಯರೂಪಕ ದ್ವಿಪಾತ್ರವನ್ನು ನಿರ್ವಹಿಸುತ್ತದೆ ಎಂದರೆ ತಪ್ಪಾಗಲಾರದು.

ಅಂತಹದೊಂದು ಗಮನ ಸೆಳೆಯುವ ವಿದ್ಯಮಾನ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಪಾವಗಡ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ತಲಾ 25 ವಿದ್ಯಾರ್ಥಿಗಳಂತೆ 50 ಜನರುಳ್ಳ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ತಂಡವೊಂದು ಉತ್ತರ ಭಾರತದ ಉತ್ತರಖಂಡ ರಾಜ್ಯದ ಉದಾಮ್ ಸಿಂಗ್ ನಗರಜಿಲ್ಲೆಯ ಕಾಶೀಪುರದ ರಾಧೇಹರಿ ಸರ್ಕಾರಿ ಸ್ನಾತಕೋತ್ತರವಿದ್ಯಾಲಯಕ್ಕೆ ಭೇಟಿಕೊಟ್ಟಾಗಜರುಗಿತು.

ಭಾರತ ಸರ್ಕಾರದ ಎಂ.ಹೆಚ್.ಆರ್.ಡಿಯ ರಾಷ್ಟ್ರೀಯ ಉಚ್ಚ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಇತ್ತೀಚೆಗೆ ಭಾರತದಅಖಂಡತೆ ಬಗ್ಗೆ ಭಾವೈಕ್ಯತೆ ಮೂಡಿಸುವ ಸಲುವಾಗಿ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಘೋಷ ವಾಕ್ಯದೊಂದಿಗೆ ಪ್ರಾದೇಶಿಕ ಸಾಂಸ್ಕೃತಿಕ ವಿನಮಯ ಏರ್ಪಡಿಸಿ ಆ ಮೂಲಕ ಮಕ್ಕಳಲ್ಲಿ ಪರಸ್ಪರ ಸಾಂಸ್ಕೃತಿಕ ಅನುಸಂಧಾನ ಕ್ಕೆ ಅವಕಾಶ ಕಲ್ಪಿಸಿತ್ತು.

ದಿನಾಂಕ : 01.3.2020 ರಿಂದ 05.3.2020ರ ವರೆಗೆ 5 ದಿನಗಳ ಕಾಲ ನಡೆದ ಸಾಂಸ್ಕೃತಿಕ ವಿನಿಮಯ ಶಿಭಿರದಲ್ಲಿ ಉತ್ತರಖಂಡ ಮತ್ತುಕರ್ನಾಟಕ ರಾಜ್ಯಗಳ ಭೌಗೋಳಿಕತೆ, ಸಾಂಸ್ಕøತಿಕ ಪರಂಪರೆ, ಇತಿಹಾಸ ಹಾಗೂ ಭಾಷಿಕವಾದ ಮಹತ್ತರ ಅಂಶಗಳನ್ನು ಪರಿಚಯ ಮತ್ತು ವಿನಿಮಯ ಮಾಡಿಕೊಳ್ಳುವ ಸದಾವಕಾಶವನ್ನು ಒದಗಿಸಿತ್ತು.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಈ ಎರಡು ಕಾಲೇಜಿನ ವಿದ್ಯಾರ್ಥಿಗಳು ಶಿಭಿರದಲ್ಲಿ ಕನ್ನಡನಾಡು ನುಡಿ ನೆಲ ಜಲ ಮತ್ತುಕರ್ನಾಟಕ ಸಂಸ್ಕೃತಿ ಬಗೆಗಿನ ಅಭಿಮಾನ ಪೂರಕವಾದ ಲಲಿತ ಕಲೆಗಳನ್ನು ಪ್ರದರ್ಶಿಸುವ ಸಾರ್ಥಕ ಕೆಲಸ ಮಾಡಿದರು.ಡಿ.ಎಸ್‌ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ,ಚೆನ್ನಪ್ಪಚನ್ನೇಗೌಡ, ಚೆಲುವಯ್ಯ ಚೆಲುವೋ ತಾನಿ ತಂದಾನ, ಹುಟ್ಟಿದರೆಕನ್ನಡ ನಾಡಲ್ಲಿ ಹುಟ್ಟಬೇಕು ಮತ್ತುಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ ಮುಂತಾದ ಜನಪದ ನೃತ್ಯರೂಪಕ ಹಾಗೂ ಜನಪದ ಸೊಗಡಿನ ಕೋಲಾಟ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ಬೆರಗುಗೊಳಿಸಿದರು.

ಹಾಗೆಯೆ, ರಾಧೇ ಹರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರಾಖಂಡದಎರಡು ದೇಸಿ ಪರಂಪರೆಯಕುಮಾಯಿ ಮತ್ತುದಡ್‍ಕರ್ ಸಂಸ್ಕೃತಿ ಪ್ರಾತಿನಿಧಿಕ ನೃತ್ಯ ಪ್ರಸಂಗಗಳನ್ನು ಅಭಿನಯಿಸಿ ಕನ್ನಡದ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.

ಒಟ್ಟಾರೆ ರೋಸಾ ಪ್ರಾಯೋಜಿತವಾದ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಹೆಸರಿನ ಶ್ರೇಷ್ಠ್ ಭಾರತ್’ ಹೆಸರಿನ ಅರ್ಥ ಪೂರ್ಣಕಾರ್ಯಕ್ರಮವು ನಮ್ಮ ಸಂವಿಧಾನದ ಪ್ರಿಯಾಂಬಲ್‍ನಲ್ಲಿ ತಿಳಿಸಿರುವ ಸ್ವಾತಂತ್ರ್ಯ ಸಮಾನತೆಜಾತ್ಯತೀತತೆ ಮತ್ತು ಬ್ರಾತೃತ್ವದ ಪರಿಕಲ್ಪನೆಯನ್ನು ಸಾಂಸ್ಕೃತಿಕ ಪ್ರಸರಣ ಪ್ರಕ್ರಿಯೆ ಮೂಲಕ ಪರಿಚಯಾತ್ಮಕ ವಾಗಿ ಕಟ್ಟಿಕೊಡುವ ಮಹತ್ತರ ಕೆಲಸವನ್ನು ಮಾಡಿದೆಎಂದು ಹೇಳಬಹುದು.

ಕೊರಟಗೆರೆ ಮತ್ತು ಪಾವಗಡ ಕಾಲೇಜುಗಳ ವಿದ್ಯಾರ್ಥಿ ತಂಡವನ್ನು ಶ್ವೇತಾ ಎಂ., ಡಾ. ಓ ನಾಗರಾಜು, ಪೂಜಾ ಮತ್ತು ರವಿಕುಮಾರ್ ಹಾಗೂ ಸಹಾಯಕರಾಗಿ ಜಯನರಸಿಂಹಮೂರ್ತಿ ರವರನ್ನು ಒಳಗೊಂಡ ಅಧ್ಯಾಪಕ ತಂಡ ಉತ್ತರ ಖಂಡಕ್ಕೆ ಕರೆದೊಯ್ದು ಮತ್ತು ಈ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರವಾಸಕ್ಕೆ ಅನುವು ಮಾಡಿಕೊಟ್ಟ ಕಾರಣಕ್ಕೆ ಕೊರಟಗೆರೆ ಕಾಲೇಜಿನ ಪ್ರಾಂಶುಪಾಲರಾದ ಪಶು ಪಾಲ ರಾದ.ಬಾಳಪ್ಪ ಹಾಗೂ ಪಾವಗಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್‍ರಾಧಾಕೃಷ್ಣರವರಿಗೆಎರಡುಕಾಲೇಜಿನ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.


ಲೇಖಕರು ಕನ್ನಡ ಸಹ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊರಟಗೆರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?