Thursday, March 28, 2024
Google search engine
Homeತುಮಕೂರು ಲೈವ್ಫೆ.1ರಂದು ದೇವರ ಕುದುರೆ ಕುರಿತು ಮಾತುಕತೆ

ಫೆ.1ರಂದು ದೇವರ ಕುದುರೆ ಕುರಿತು ಮಾತುಕತೆ

Chikkanayakana halli: ಪುಸ್ತಕ ಸಂಜೆ – ಕವಿತೆಗಳೊಂದಿಗೆ ವೀಚಿ, ಅನಂತಮೂರ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪಡೆದ ಎಸ್.ಗಂಗಾಧರಯ್ಯನವರ ದೇವರ ಕುದುರೆ ಕಥಾ ಸಂಕಲನದ ಕುರಿತ ಮಾತುಕತೆಯನ್ನು ಚಿಕ್ಕನಾಯಕನಹಳ್ಳಿಯ ಪಟ್ಟಣದ ಎಸ್ಎಂಎಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 1ರಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿ ನಟರಾಜ್ ಬೂದಾಳ್ ವಹಿಸಲಿದ್ದು, ಕಥೆಗಾರ ಕಂಟಲಗೆರೆ ಗುರುಪ್ರಸಾದ್ ಪ್ರಾಸ್ತಾವಿಕ ಮಾತನಾಡುವರು.

ಕೃತಿ ಕುರಿತು ಕಥೆಗಾರ ಜಿ.ವಿ.ಆನಂದಮೂರ್ತಿ ಮಾತನಾಡುವರು. ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಪ್ರತಿಕ್ರಿಯೆ ನೀಡುವರು. ಕಥೆಗಾರ ಎಸ್.ಗಂಗಾಧರಯ್ಯ ಉಪಸ್ಥಿತರಿರುವರು.

ಸಮಾನ ಮನಸ್ಕರ ವೇದಿಕೆ ಚಿ.ನಾ.ಹಳ್ಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ತಂಡ ತತ್ವಪದ ಗಾಯನ ಮಾಡುವರು.

ಇದೇ ವೇಳೆ ಕವಿಗೋಷ್ಠಿ ನಡೆಯಲಿದ್ದು ಪ್ರೊ. ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಸುಪ್ರೀಮ್ ಸುಬ್ರಮಣ್ಯ, ಶ್ರೀಧರ್ ದೇವರಹಳ್ಳಿ, ಬಿ.ಎಸ್. ರಾಧಾಕೃಷ್ಣ, ಡಾ. ಮಲ್ಲಿಕಾರ್ಜುನ್, ಡಾ. ವಿಜಯರಾಘವೇಂದ್ರ, ಡಾ.ಮೋಹನ್, ಡಾ.ವಲಿ, ವರಮಹಾಲಕ್ಷ್ಮಿ, ಹುಳಿಯಾರ್ ಶಬ್ಬೀರ್, ತೇಜಾವತಿ, ರವಿಕುಮಾರ್ ಸಿ. ಸಬ್ಬೆನಹಳ್ಳಿ ನಾಗರಾಜ್, ಮಂಜುಳ ಪ್ರಕಾಸ್, ಧನಂಜಯಮೂರ್ತಿ, ದೇವರಹಳ್ಳಿ ಧನಂಜಯ, ಸರ್ವಮಂಗಳ, ಗಂಗಾಧರ್ ಹಾಲುಗೋಣ ಕವಿತೆಗಳನ್ನು ವಾಚಿಸುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?