Tuesday, July 23, 2024
Google search engine
Homeತುಮಕೂರು ಲೈವ್ಬಡತನ ಶಾಪವಲ್ಲ;ಶ್ರೀಮಂತಿಕೆ ವರವಲ್ಲ

ಬಡತನ ಶಾಪವಲ್ಲ;ಶ್ರೀಮಂತಿಕೆ ವರವಲ್ಲ

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರದ ಮೂಲಕ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗಾಗಿ ” ಯುವಜನತೆಯ ಮುಂದಿರುವ ಸವಾಲುಗಳು ಎಂಬ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿದರು.

‘ತಾಯಿಗೆ ಮಣಿದವರು ಜಗತ್ತಿನಲ್ಲಿ ಯಾರು ಸೋತಿಲ್ಲ ತಾಯಿ ಮಕ್ಕಳ ಸಂಬಂಧ ಜಗತ್ತಿನಲ್ಲಿ ಶ್ರೇಷ್ಠವಾದ ಸಂಬಂಧ. ನೀವು ನಿಮ್ಮ ತಂದೆ ತಾಯಿಗೆ, ಶಿಕ್ಷಕರಿಗೆ ಮೋಸ ಮಾಡಿದರೆ ಅದು ತಪ್ಪು ಮತ್ತು ನಿಮಗೆ ನೀವೇ ಮೋಸ ಮಾಡಿಕೊಂಡಂತೆ’ ಎಂದರು.
‘ಪ್ರಯತ್ನವೇ ಪರಮೇಶ್ವರ ಎಂಬುದು ಕೇವಲ ಮಾತಲ್ಲ, ಸರ್ವ ಶ್ರೇಷ್ಠವಾದ ಮಂತ್ರ . ಇದು ಜೀವನವೆಂಬ ಸಾಧನೆಯ ಪ್ರತಿಫಲದ ಮೂಲ, ಬೌದ್ಧಿಕ ಜ್ಞಾನಾರ್ಜನೆಯೊಂದಿಗೆ ಭಾವನಾತ್ಮಕ ಮನುಷ್ಯನಾಗಿ ರೂಪುಗೊಳ್ಳಬೇಕು’ ಎಂದರು.

‘ಪರಿಮಳವನ್ನು ದುಂಬಿ ಹುಡುಕುವಂತೆ ಪ್ರಾಜ್ಞನನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಯಶಸ್ಸಿನ ಶಿಖರವನ್ನು ತಾವೇ ಕಟ್ಟಿಕೊಳ್ಳಬೇಕು. ಬಡತನ ಶಾಪವಲ್ಲ ಶ್ರೀಮಂತಿಕೆ ವರವಲ್ಲ, ಸ್ವಾಭಿಮಾನಕ್ಕಿಂತ ಬೇರೆ ಸಂಪತ್ತಿಲ್ಲ. ಅನ್ಯಾಯ ಮಾರ್ಗದ ಗೆಲುವಿಗಿಂತ ನ್ಯಾಯ ಮಾರ್ಗದ ಸೋಲು ಶ್ರೇಷ್ಠವಾದದ್ದು, ಸಾಧನೆಗೆ ಸ್ವ ಪ್ರಯತ್ನ ಮುಖ್ಯ’ಎಂದು ಅಭಿಪ್ರಾಯಪಟ್ಟರು.

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಸವರಾಜು ಬಿ ವಿ.ರವರು ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಸಿದ್ದಲಿಂಗಯ್ಯ ಅವರು ಸ್ವಾಗತಿಸಿ ಪರಿಚಯಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗಂಗಾಧರ್ ಕೆ ವಿ ಅವರು ವಂದಿಸಿದರು.

ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕರು ಹಾಗೂ ಕನ್ನಡ ಉಪನ್ಯಾಸಕಿಯಾದ ಡಾ. ಶ್ವೇತಾರಾಣಿ ಹೆಚ್ ಅವರು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಯೋಜಿಸಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?