Friday, March 29, 2024
Google search engine
Homeಜಸ್ಟ್ ನ್ಯೂಸ್ಬ್ಯಾಂಕ್ ಸಿಬ್ಬಂದಿಯ ಹಿತಕ್ಕಾಗಿ ಬ್ಯಾಂಕ್ ಒಳಗೆ ಜನರ ನಿರ್ಬಂಧ?

ಬ್ಯಾಂಕ್ ಸಿಬ್ಬಂದಿಯ ಹಿತಕ್ಕಾಗಿ ಬ್ಯಾಂಕ್ ಒಳಗೆ ಜನರ ನಿರ್ಬಂಧ?

ತುರುವೇಕೆರೆ:
ಕೊರೋನಾ ಭೀತಿಯ ಹಿನ್ನಲೆಯಲ್ಲಿ ಇಲ್ಲಿನ ಎಸ್‍ಬಿಐ ಶಾಖೆಯಲ್ಲಿ ಗ್ರಾಹಕರ ಗುಂಪು ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಗ್ರಾಹಕರು ಗಂಟೆಗಟ್ಟಲೆ ಸಾಲುಗಟ್ಟಿ ಬ್ಯಾಂಕಿನಾಚೆ ನಿಂತು ಸಂಯಮ ಮೆರೆದರು.
ಹೆಚ್ಚು ಜನರು ಒಂದೇ ಬಾರಿಗೆ ಗುಂಪಿನಲ್ಲಿ ಬ್ಯಾಂಕಿನೊಳಗೆ ವ್ಯವಹರಿಸುವುದನ್ನು ತಡೆಗಟ್ಟಲು ಒಬ್ಬೊಬ್ಬರೇ ಗ್ರಾಹಕರನ್ನು ಒಳಗೆ ಬಿಡಲಾಗುತ್ತಿತ್ತು. ಇದರಿಂದಾಗಿ ಗ್ರಾಹಕರು ಅದರಲ್ಲೂ ವಿಶೇಷವಾಗಿ ಸಂತೆ ಇಲ್ಲವೆಂಬುದನ್ನು ತಿಳಿಯದೆ ಪಟ್ಟಣಕ್ಕೆ ಬಂದ ಹಳ್ಳಿಗರು ಬ್ಯಾಂಕಿನ ಮುಂಭಾಗ ತಮ್ಮ ಸರದಿ ಕಾಯುತ್ತಾ ಸಾಲುಗಟ್ಟಿ ನಿಂತಿದ್ದರು. ಅವರಲ್ಲಿ ಕೆಲವರು ಕೊರೋನಾ ಭೀತಿಯಿಂದ ಮಾಸ್ಕ್ ಧರಿಸಿದ್ದರೆ ಮತ್ತೆ ಬಹಳಷ್ಟು ಜನ ಮಾಮೂಲಾಗೇ ಯಾವುದೇ ಅಳುಕು ಇಲ್ಲದೆ ನಿಂತಿದ್ದರು.ಗ್ರಾಹಕರು ಒಬ್ಬರಿಗೊಬ್ಬರು ದೂರ ಕಾಯ್ದುಕೊಳ್ಳದೆ ಒತ್ತಟ್ಟಿಗೇ ಸಾಲುಗಟ್ಟಿ ನಿಂತಿದ್ದರಿಂದ ಬ್ಯಾಂಕ್ ಒಳಗಿನ ಪ್ರವೇಶ ನಿರ್ಬಂಧ ಅಷ್ಟೇನೂ ಪ್ರಯೋಜನಕಾರಿ ಎನಿಸಲಿಲ್ಲ. ಗ್ರಾಹಕರಲ್ಲಿ ಬ್ಯಾಂಕ್ ಸಿಬ್ಬಂದಿ ಪರಸ್ಪರ ದೂರ ಕಾಯ್ದುಕೊಳ್ಳುವ ಜಾಗೃತಿ ಮೂಡಿಸಬೇಕಿತ್ತು ಎಂದು ಹಲವು ನಾಗರಿಕರು ಅಭಿಪ್ರಾಯಪಟ್ಟರು. ಪಾಸ್‍ಬುಕ್ ಎಂಟ್ರಿ, ಶಿಲ್ಕು ವಿಚಾರಣೆ, ಆಧಾರ್ ತಿದ್ದುಪಡಿ ಈ ಸೇವೆಗಳನ್ನು ಬ್ಯಾಂಕ್ ನಿರ್ಬಂಧಿಸಿದ್ದರಿಂದ ಇದರ ಅರಿವಿರದ ಹಲವು ಅನಕ್ಷರಸ್ಥರು ಬಹಳಷ್ಟು ಸಮಯ ಸಾಲಿನಲ್ಲಿ ನಿಂತು ನಂತರ ವಿಷಯ ತಿಳಿದು ನಿರಾಸೆಯಿಂದ ಹಿಂದಿರುಗಿದರು. ಬ್ಯಾಂಕಿನ ಸರ್ವರ್ ಸಹ ಬಹಳ ಹೊತ್ತು ಕೈ ಕೊಟ್ಟಿದ್ದರಿಂದ ಸಾಲಿನಲ್ಲಿ ನಿಂತ ಹಲವು ವ್ಯವಹಾರಸ್ಥರು ನಗದು ಜಮಾ ಮಾಡಲು ಹಾಗೂ ಹಣ ವರ್ಗಾವಣೆ ಮಾಡಲು ತೀವ್ರ ಸಮಸ್ಯೆ ಎದುರಿಸಬೇಕಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?