Thursday, April 25, 2024
Google search engine
Homeಜನಮನಮಂಜುಳಮ್ಮನಿಗೆ ಅನುಪಮಾ ಸೇವಾ ಪ್ರಶಸ್ತಿ ಪುರಸ್ಕಾರ

ಮಂಜುಳಮ್ಮನಿಗೆ ಅನುಪಮಾ ಸೇವಾ ಪ್ರಶಸ್ತಿ ಪುರಸ್ಕಾರ

Publicstory. in


ತುರುವೇಕೆರೆ: ಶಿಕ್ಷಣ ಕ್ಷೇತ್ರದಲ್ಲಿ ವಿನೂತ ಸಾಧನೆ ಮಾಡಿದ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ದೇವಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯಶಿಕ್ಷಕಿ ಮಂಜುಳಮ್ಮ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅನುಪಮಾ ಸೇವಾಪುರಸ್ಕಾರ ನೀಡಿ ಗೌರವಿಸಲಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಸೇವೆ ಪರಿಗಣಿಸಿ ‘ಅನುಪಮ ಸೇವಾ’ ಪ್ರಶಸ್ತಿಯನ್ನು ಇವರಿಗೆ ಮಾ.8ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

ಮಂಜುಳಮ್ಮ ಅವರು ದೇವಿಹಳ್ಳಿ ಗ್ರಾಮದ ಶಾಲೆ ಒಂದರಲ್ಲೇ ಕಳೆದ 29 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಜನಮನ್ನಣೆ ಗಳಿಸಿದ್ದಾರೆ.

ಇವರಿಗೆ ಇಬ್ಬರು ಮಕ್ಕಳಿದ್ದು ಅವರಲ್ಲಿ ಭಾಗ್ಯಜ್ಯೋತಿ ತಾಯಿಯಂತೆಯೇ ಶಿಕ್ಷಕಿಯಾಗಿದ್ದು ಮತ್ತೊಬ್ಬ ಮಗ ಶಶಿಕಿರಣ್ ರಾಜ್ಯ ರಸ್ತೆ ಸಾರಿಗೆ ಬಸ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಮಂಜುಳಮ್ಮ ಅವರ ಪರಿಣಾಮಕಾರಿ ಬೋಧನೆ, ತರಗತಿಭಾಗವಹಿಸುವಿಕೆ, ಮಕ್ಕಳೊಂದಿಗಿನ ಅನ್ಯೋನ್ಯತೆ, ವಿಶಿಷ್ಟ ರೀತಿ ಪಾಠೋಪಕರಣಗಳ ತಯಾರಿಕೆ, ಸಾಮಾಜಿಕ ಸೇವೆ, ಹೆಣ್ಣು ಮಕ್ಕಳ ಆರೋಗ್ಯ, ಸಂಪನ್ಮೂಲ ವ್ಯಕ್ತಿಯಾಗಿ, ಮಕ್ಕಳ ತಾಲ್ಲೂಕು ಮಟ್ಟದ ವಿಜ್ಞಾನ ಹಬ್ಬಗಳಲ್ಲಿ ತೊಡಗಿಸಿಕೊಳ್ಳುವಿಕೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಪ್ರತಿಭಾವಂತರಾಗಿ ದುಡಿದವರು.

ಇವರ ಶಿಕ್ಷಣ ಕ್ಷೇತ್ರದ ಅವಿರತ ಸೇವೆಯನ್ನು ಮನಗಂಡು ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ನಲಿಕಲಿ ಉತ್ತಮ ಶಾಲಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಳೆದ ಸಾಲಿನಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಸಾಧಕಿಯರಿಗೆ ಸನ್ಮಾನ ಹಾಗು ದೇವಿಹಳ್ಳಿ ಗ್ರಾಮಸ್ಥರಿಂದ ಅನೇಕ ಸನ್ಮಾನ ಮತ್ತು ಅಭಿನಂದನೆಗಳ ಮಹಾಪೂರವೇ ಬಂದಿವೆ.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯನವರು ಮಂಜುಳಮ್ಮ ಅನುಪಮಾ ಪ್ರಶಸ್ತಿ ಪಡೆದಿರುವುದು ತಾಲ್ಲೂಕಿನ ಶಿಕ್ಷಣ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಿದ್ದು ಎಲ್ಲ ಶಿಕ್ಷಕರು ಮತ್ತು ಇಲಾಖಾ ವತಿಯಿಂದ ಆತ್ಮೀಯ ಅಭಿನಂದನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?