Saturday, July 20, 2024
Google search engine
Homeತುಮಕೂರು ಲೈವ್ಮಸಾಲಜಯರಾಂ ಸ್ವಂತ ಖರ್ಚಿನಿಂದ 11 ಲಕ್ಷ ರೂ ಕೋವಿಡ್ ಜೀವರಕ್ಷಕ ಔಷಧಿಗಳ ವಿತರಣೆ ಮಾಡಿದರು.

ಮಸಾಲಜಯರಾಂ ಸ್ವಂತ ಖರ್ಚಿನಿಂದ 11 ಲಕ್ಷ ರೂ ಕೋವಿಡ್ ಜೀವರಕ್ಷಕ ಔಷಧಿಗಳ ವಿತರಣೆ ಮಾಡಿದರು.

ತುರುವೇಕೆರೆ: ತಾಲ್ಲೂಕಿನ ಜನಸಾಮಾನ್ಯರ, ಬಡವರ, ಅಸಹಾಯಕರ ಹಿತ ದೃಷ್ಟಿಯಿಂದ 11 ಲಕ್ಷ ರೂಪಾಯಿಗಳ ವೆಚ್ಚದ ಕೋವಿಡ್ ಜೀವರಕ್ಷಕ ಔಷಧಿಗಳನ್ನು ಸ್ವಂತ ಹಣದಲ್ಲಿ ಔಷಧಿ ಕಂಪನಿಗಳಿಂದ ಖರೀದಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್ ಜೀವರಕ್ಷಕ ಔಷಧಿಗಳ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎರಡು ಸಾವಿರ ಪಿಪಿಇಕಿಟ್ ಕವರ್ಗಳು, 5 ಸಾವಿರ ಜಿನ್ ಮಾತ್ರೆ, ಐದು ಸಾವಿರ ಮಿಟಮಿನ್ ಮಾತ್ರೆ, 4 ಸಾವಿರ ಮಾಸ್, ಸ್ಯಾನಿಟೈಸರ್, ಬೆಡಶೀಟ್, ಎರಡುವರೆ ಸಾವಿರ ಕೈಗವಸ, ಶೂಕವರ್, 2 ಸಾವಿರ ಹೆಡ್ ಕ್ಯಾಪ್, ಇಜೆಕ್ಷನ್, ಮೂರು ವಿದಧ ಮಾತ್ರೆಗಳು ಹಾಗು ಇನ್ನಿತರ ವಸ್ತುಗಳನ್ನು ನೀಡಲಾಯಿತು.
ತಾಲ್ಲೂಕಿನ ಕೋವಿಡ್ ರೋಗಿಗಳಿಗೆ ಔಷಧಿ, ಇಂಜೆಕ್ಷನ್ ಹಾಗು ಇತರೆ ಸೌಲಭ್ಯಗಳಿಲ್ಲವೆಂಬ ಕೊರಗು ಇರಬಾರದು. ಇಲ್ಲಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇನ್ನು ಏನೇನು ಜೀವರಕ್ಷಕ ಸೌಕರ್ಯಗಳು ಬೇಕು ಎಂಬುದರ ಬಗ್ಗೆ ನನ್ನ ಗಮನಕ್ಕೆ ತನ್ನಿ ಮತ್ತಷ್ಟು ಕೊಡಿಸುವುದಾಗಿ ಭರವಸೆ ನೀಡಿದರು.
ಕೋವಿಡ್ ರೋಗ ಲಕ್ಷಣ ಬಂದ ತಕ್ಷಣ ಕೂಡಲೇ ಮನೆಯಲ್ಲಿಯೇ ಉಳಿಯದೇ ಆಸ್ಪತ್ರೆಗೆ ದಾಖಲಾಗಿ. ಅನಾವಶ್ಯಕವಾಗಿ ಓಡಾಡಬೇಡಿ ನಿಮ್ಮೊಂದಿಗೆ ನಾನಿದ್ದೇನೆ. ಔಷಧಿಗಳಿಗೆ ಎಷ್ಟೇ ಖಚರ್ಾದರೂ ಪರವಾಗಿಲ್ಲ ನಾನು ನನ್ನ ಸ್ವಂತ ಹಣದಿಂದ ಕೊಡಲು ಸಿದ್ದನಿದ್ದನೆ. ನನಗೆ ತಾಲ್ಲೂಕಿನ ಜನತೆಯ ಆರೋಗ್ಯ, ಜೀವ ಮುಖ್ಯವೆಂದು ಕಳಕಳಿಯ ಮನವಿ ಮಾಡಿದರು.
ಹೀಗಾಗಲೇ ತಾಲ್ಲೂಕಿನ ನೂರಾರು ಜನರಿಗೆ ಬೆಂಗಳೂರು, ತುಮಕೂರು, ಮೈಸೂರು ಇನ್ನಿತರ ಕಡೆಗಳಲ್ಲಿ ಬೇಡ್ ಮತ್ತು ಆಮ್ಲಜನಕದ ವ್ಯವಸ್ಥೆ ಮಾಡಿಸಿದ್ದೇನೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಕೋವಿಡ್ ನಿಯಂತ್ರಣಕ್ಕೆ ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಅವರೊಂದಿಗೆ ರೋಗಿಗಳು ಸೌಜನ್ಯತೆಯಿಂದ ನಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ತಾಲ್ಲೂಕಿನ ಮುಸ್ಲಿಂಭಾಂದವರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರನ್ನು ಯಾವುದೇ ಜಾತಿ, ಮತ, ಧರ್ಮಗಳ ಬೇಧವೆಣಿಸದೆ ನಿಸ್ವಾರ್ಥ ಸೇವಾ ಮನೋಭಾವನೆಯಿಂದ, ತಮ್ಮ ಪ್ರಾಣದ ಹಂಗು ತೊರೆದು ಶವ ಸಂಸ್ಕಾರ ಮಾಡುತ್ತಿದ್ದಾರೆ ಅವರಿಗೆ ನಾನು ತಾಲ್ಲೂಕಿನ ಪರವಾಗಿ ಕೃತಜ್ಞತೆ ಸಲ್ಲಿಸುವೆ ಹಾಗು ಇವರಿಗೆ ನೆರವು ನೀಡಲು ಸಿದ್ದನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ಕುಮಾರ್, ಸದಸ್ಯ ಚಿದಾನಂದ್ ವೈದ್ಯಾಧಿಕಾರಿ ಡಾ.ಶ್ರೀಧರ್, ಟಿಎಚ್ಒ ಡಾ.ಸುಪ್ರಿಯಾ, ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ವಿ.ಬಿ.ಸುರೇಶ್, ಸೋಮಣ್ಣ, ಮುದ್ದೇಗೌಡ, ವೈದ್ಯರುಗಳಾದ ಡಾ.ನವೀನ್, ಡಾ.ಪವನ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?