Saturday, July 20, 2024
Google search engine
Homeತುಮಕೂರು ಲೈವ್ಮಾಯಸಂದ್ರ ಪಿಎಸಿಬಿ ಅಧ್ಯಕ್ಷರಾಗಿ ಜಡೆಯಾನಂದೀಶ್ ಆಯ್ಕೆ

ಮಾಯಸಂದ್ರ ಪಿಎಸಿಬಿ ಅಧ್ಯಕ್ಷರಾಗಿ ಜಡೆಯಾನಂದೀಶ್ ಆಯ್ಕೆ

Publicstory

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಡೆಯಜೆ.ಬಿ.ನಂದೀಶ್ ಹಾಗೂ ಉಪಾಧ್ಯಕ್ಷರಾಗಿ ಸಿ.ಆರ್.ಗಿರಿಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 12 ಸದಸ್ಯರ ಬಲ ಹೊಂದಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಡೆಯ ಗ್ರಾಮದ ಬುಡಗಜ್ಯೋಗಿ ಭೈರಪ್ಪ ಅವರ ಮನೆತನದ ಜೆ.ಬಿ.ನಂದೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಧರ್ ಇಬ್ಬರೇ ನಾಮ ಪತ್ರ ಸಲ್ಲಿಸಿದರು.

ಬೇರಾವ ನಿರ್ದೇಶಕರು ನಾಮಪತ್ರ ಸಲ್ಲಿಸಲಿಲ್ಲ. ಅಂತಿಮವಾಗಿ ಚುನಾವಣಾಧಿಕಾರಿ ಬಬಿತಾ ಅವರು ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧವೆಂದು ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಜಡೆಯಜೆ.ಬಿ.ನಂದೀಶ್ ಮಾತನಾಡಿ, ನಾನು ಅವಿರೋಧವಾಗಿ ಅಧ್ಯಕ್ಷನಾಗಲು ಕಾರಣೀಭೂತರಾದ ಎಂ.ಪುಟ್ಟೇಗೌಡ, ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ, ಜಿಲ್ಲಾಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ಶಾಸಕ ಮಸಾಲಜಯರಾಂ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಸದೃಢಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಜಡೆಯಾ ಗ್ರಾಮಸ್ಥರು ಹಾಗೂ ಹಿತೈಷಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಮೈಸೂರುಪೇಟ ಅಭಿನಂದಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪುಟ್ಟೇಗೌಡ, ಜವರೇಗೌಡ, ಗಂಗಯ್ಯ, ಪಂಚಾಕ್ಷರಿ, ನಟರಾಜ್, ಲೋಕೇಶ್, ಅಶೋಕ್, ಜಯಮ್ಮ, ಶ್ಯಾಮಲ, ವಾಸು ಯುವ ಮುಖಂಡರುಗಳಾದ ಸುನಿಲ್ ಶಿವರಾಮಯ್ಯ, ಕೃಷ್ಣಮೂರ್ತಿ, ನಾಗರಾಜ್, ರಂಗರಾಜ್, ಯೋಗೀಶ್, ನಿವೃತ್ತ ಅಧ್ಯಾಪಕ ಶಿವರಾಮಯ್ಯ, ಸಿ.ಇ. ಓ ಗಿಡ್ಡಯ್ಯ, ಮಹೇಶ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?