Friday, April 12, 2024
Google search engine
Homeತುಮಕೂರು ಲೈವ್ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿ

ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿ

Publicstory. in


Tumkur: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿಯಾಗಿದ್ದು ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಬೇರೆ ಬೇರೆ ಕಾರಣಗಳಿವೆ. ಹೀಗಾಗಿ ಯಡಿಯೂರಪ್ಪ ಅವರನ್ನು ಆಟವಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರೇ ಬೇಕಾದರೆ ಆಟವಾಡಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಳಂಕ್ಕೆ ದೆಹಲಿಯ ವಿಧಾನಸಭಾ ಚುನಾವಣೆ ಪ್ರಮುಖ ಕಾರಣ. ದೆಹಲಿ ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಪಕ್ಷದಲ್ಲಿ ಪ್ರಮುಖ ವಿಷಯಗಳು ಬಂದಾಗ ಸಣ್ಣ ವಿಷಯಗಳು ಪಕ್ಕಕ್ಕೆ ಸರಿಯುತ್ತವೆ. ಗೌರ್ನರ್ ಬಂದರೆ ಅವರಿಗೆ ಮೊದಲು ದಾರಿ ಬಿಡುವುದಿಲ್ಲವೇ? ಹಾಗೆ ಇಲ್ಲೂ ಕೂಡ ನಡೆದಿದೆ ಎಂದರು.

ಯಡಿಯೂರಪ್ಪನವರು ಬಲಶಾಲಿಗಳು. ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ. ಆದರೆ ಸದ್ಯದ ಮಟ್ಟಿಗೆ ಹೈಕಮಾಂಡ್ ಎಲ್ಲವನ್ನೂ ಗಂಭೀರವಾಗಿ ನೋಡುತ್ತಿದೆ. ಒಬ್ಬ ವೈದ್ಯ ರೋಗಿಯನ್ನು ನೋಡುವ ಹಾಗೆ. ಮೊದಲು ರೋಗಿಯ ಬಿ.ಪಿ ಮತ್ತು ಶುಗರ್ ಕಂಟ್ರೋಲ್ ಆದ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲವೇ ಹಾಗೆ ಸಚಿವ ಸಂಫುಟ ವಿಸ್ತರಣೆಯೂ ನಡೆಯಲಿದೆ ಎಂದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಸಚಿವ ವಿಳಂಬಕ್ಕೆ ಹೈಕಮಾಂಡ್ ತನ್ನದೇ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ತಂತ್ರಗಳನ್ನು ಮಾಡುತ್ತಿರುತ್ತದೆ. ಆದ್ಯತೆಯ ಮೇಲೆ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?