Saturday, July 20, 2024
Google search engine
HomeUncategorizedರೈತರಿಲ್ಲದಿದ್ದರೆ ಪ್ರಪಂಚವಿಲ್ಲ

ರೈತರಿಲ್ಲದಿದ್ದರೆ ಪ್ರಪಂಚವಿಲ್ಲ

ಗುಬ್ಬಿ : ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿದಿನ ರೈತರ ದಿನಾಚರಣೆಗಳು ನಡೆಯಬೇಕು ಎಂದು ಸುಜೀವನ ಒಕ್ಕೂಟದ ಅಧ್ಯಕ್ಷ ಗುರುದತ್ ತಿಳಿಸಿದರು.
ತಾಲ್ಲೂಕಿನ ದ್ಯಾವಣ್ಣನಪಾಳ್ಯ ಗ್ರಾಮದ ರುದ್ರೇಶ್‌ರವರ ಜಮೀನಿನಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಜೀವನ ಒಕ್ಕೂಟ ಗುಬ್ಬಿ ಮತ್ತು ಸಿಎಸ್ ಪುರ ರೈತ ಉತ್ಪಾದಕರ ಕಂಪನಿವತಿಯಿAದ ಏರ್ಪಡಿಸಿದ್ದ ವಿಶ್ವ ರೈತರ ದಿನ ಹಾಗೂ ಬದನೆ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರ ಹಲವು ಯೋಜನೆಗಳನ್ನು ನರೇಗಾ ಯೋಜನೆಯಡಿ ತಂದಿದೆ. ಅವುಗಳನ್ನು ಬಳಸಿಕೊಂಡು ಜಮೀನನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾವಯವ ಕೃಷಿ ಪರಿಕರಗಳನ್ನು ಬಳಸಿ ಕೃಷಿ ಮಾಡಿದಾಗ ಮಾತ್ರ ಮನುಷ್ಯರ ಆರೋಗ್ಯ ಕಾಪಾಡಬಹುದು ಎಂದು ತಿಳಿಸಿದರು.
ಭಾರತ ದೇಶದ ಐದನೇ ಪ್ರಧಾನಮಂತ್ರಿ ಚರಣ್‌ಸಿಂಗ್ ಚೌಧರಿರವರ ಹೆಸರಲ್ಲಿ ವಿಶ್ವ ರೈತ ದಿನಾಚರಣೆ ಮಾಡಲಾಗುತ್ತದೆ. ಇವರ ಕಡಿಮೆ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು ಸಹ ಇವರು ರೈತರ ಜೀವನ ಸುಧಾರಣೆಗೆ ಅನೇಕ ಯೋಜನೆಗಳನ್ನು ತಂದು ರೈತರ ಯಶಸ್ವಿಗೆ ಕಾರಣರಾಗಿದ್ದರು ಎಂದರು.
ನಿರ್ದೇಶಕ ಅಸ್ಲಾಂ ಪಾಷ ಮಾತನಾಡಿ, ರೈತರು ತಮ್ಮ ಜಮೀನಿಗೆ ಕಳೆನಾಶಕವನ್ನು ಒಡೆಯದೆ ಕಳೆಯನ್ನು ನಿಯಂತ್ರಣ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿ ರೈತ ರುದ್ರೇಶ್, ಮುಖಂಡ ಗುರುಚನ್ನಬಸಪ್ಪ, ಸಿಎಸ್ ಪುರ ರೈತ ಉತ್ಪಾದಕರ ಕಂಪನಿಯ ಸಿಬ್ಬಂದಿಗಳಾದ ಲೋಕೇಶ.ಡಿ, ವಿನೋದಮ್ಮ, ಬಿಸಿಎ ಗಂಗಮ್ಮ, ಆರ್ಥಿಕ ಸೆರ್ಪಡೆ ಅಧಿಕಾರಿ, ಶ್ರೀನಿವಾಸ್, ರಾಘವೇಂದ್ರ ಹಾಗೂ ಕೃಷಿಕ, ಮಹಿಳಾ ಸಂಘದವರು ಹಾಜರಿದ್ದರು.
ಪೋಟೋ : ಗುಬ್ಬಿ ತಾಲ್ಲೂಕಿನ ದ್ಯಾವಣ್ಣನಪಾಳ್ಯ ಗ್ರಾಮದ ರುದ್ರೇಶ್‌ರವರ ಜಮೀನಿನಲ್ಲಿ ಸುಜೀವನ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಿಶ್ವ ರೈತ ದಿನಾಚಣೆಯಲ್ಲಿ ಪ್ರಗತಿ ರೈತ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?