Saturday, July 20, 2024
Google search engine
Homeತುಮಕೂರು ಲೈವ್ರೈತ ಹೋರಾಟಗಾರ ದೇವರಾಜ್ ಗೆ ಡಾಕ್ಟರೇಟ್ ಪದವಿ

ರೈತ ಹೋರಾಟಗಾರ ದೇವರಾಜ್ ಗೆ ಡಾಕ್ಟರೇಟ್ ಪದವಿ

ತುಮಕೂರು: ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಅಧ್ಯಕ್ಷರಾದ ರೈತಪರ ಹೋರಾಟಗಾರ ದೇವರಾಜ್ ಆಚಾರ್ಯ ರವರಿಗೆ ಶಿಲ್ಪಕಲೆಯ ಅತ್ಯುನ್ನತ ಸಾಧನೆ ಮಾಡಿ ಗೌರವಾನ್ವಿತ ಡಾಕ್ಟರೇಟ್ ಪದವಿ ಲಭಿಸಿದೆ.

ಭಾರತೀಯ ಕೃಷಿಕ ಸಮಾಜದ ತುಮಕೂರು ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಮಾರ್ಗದರ್ಶನದಲ್ಲಿ ಒಟ್ಟುಗೂಡಿ ರೈತಪರ ಹೋರಾಟಗಳಲ್ಲಿ ,ಧರಣಿಗಳಲ್ಲಿ ಭಾಗವಹಿಸಿದ್ದಾರೆ.

ಇವರು ಸಾಮಾನ್ಯ ರೈತ ಕುಟುಂಬದಿಂದ ಬದುಕು ನಡೆಸುವ ವೃತ್ತಿ ಜೀವನದಲ್ಲಿ ಶಿಲ್ಪಕಲೆಯ ಕಲಾವಿದರಾದ ದೇವರಾಜ್ ಆಚಾರ್ಯರವರು ಅವರ ತಂದೆ ಸುರೇಶ್ ಆಚಾರ್ಯ ರವರೊಂದಿಗೆ ಶಿಲ್ಪಕಲಾ ಶಿಕ್ಷಣ ಅಭ್ಯಾಸ ಮಾಡುತ್ತಾ ಅವರಿಗೆ ಸಹಾಯಕರಾಗಿ ಶಿಷ್ಯರಾಗಿ ಬಂದವರು.

ಈಗಲೂ ರೈತ ಪರ ಹೋರಾಟದಲ್ಲಿ ಭಾಗವಹಿಸುವುದು. ಶಿಲ್ಪಿಯಾಗಿ ಸತತವಾಗಿ ಶ್ರಮಿಸಿ ಸಾಕಷ್ಟು ಆಯಾಮಗಳಿಂದ ಹೆಸರುಗಳಿಸಿದ್ದಾರೆ ಕಲೆಗಾಗಿ ಹಾಗೂ ರೈತಪರ ಹೋರಾಟಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ,

ಗ್ರಾಮೀಣ ಪ್ರದೇಶದ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ ಇವರಿಗೆ ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲಾ ವತಿಯಿಂದ ಹಾಗೂ ರೈತಬಾಂಧವರು ದೇವರಾಜ್ ಆಚಾರ್ಯ ರವರಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಗೌರವಾಧ್ಯಕ್ಷರಾದ ಪುಟ್ಟರಾಜು ಬ್ರಹ್ಮಸಂದ್ರ ಕಾರ್ಯಾಧ್ಯಕ್ಷರಾದ ಪಾಂಡುರಂಗ ಕೆ ಖಜಾಂಚಿ ಯಾದ ಧನಂಜಯ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವಮೂರ್ತಿ ಸಂಘಟನಾ ಕಾರ್ಯದರ್ಶಿಗಳಾದ ಸಿದ್ದಪ್ಪ ಗೌಡಿಹಳ್ಳಿ ವಿಶ್ವಕರ್ಮ ಸಮುದಾಯದ ಗುರುಗಳಾದ ವೇದ ಬ್ರಹ್ಮ ಶ್ರೀ ನಾಗಲಿಂಗ ಚಾರ್ಯರು ಮತ್ತಿತರರು ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?